ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿದೆ, ಲೋಕಸಭೆಗೆ ಬಂದಿಲ್ಲ. ಪ್ರತಿ ಕ್ಷೇತ್ರದಲ್ಲೂ ವಿಸ್ತರಿಸಬೇಕು ಎಂದು ಗುಜರಾತ್ನ ಝಕಿಯಾ ಸೋಮನ್ ದಿಕ್ಸೂಚಿ ಒತ್ತಾಯಿಸಿದರು.
ವಿಜಯನಗರದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಹಕ್ಕೊತ್ತಾಯ ಹಾಗೂ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.
“ಮಹಿಳೆಯರೆಲ್ಲ ಒಂದಲ್ಲ ಒಂದು ದಿನ ಗೆಲ್ಲುತ್ತೇವೆ. ಭಾರತದಲ್ಲಿ ಹೆಣ್ಣು ಹುಟ್ಟಿದ್ದೇ ಒಂದು ಶಾಪ ಎನ್ನುವ ರೀತಿಯಲ್ಲಿ ನೋಡುತ್ತಾರೆ. ನನಗಾಗಿ ಇರುವ ದಿನ ಇದೇ ಅಂತ ತಿಳಕೊಬೇಕು. ಎಲ್ಲರನ್ನೂ ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇದೆ. ಜಾಗತಿಕ ಮಟ್ಟದಲ್ಲಿ ಇದು ಅಗುತ್ತದೆ. ಸಾಮಾಜಿಕ ಸಮಾನತೆ, ಸಾಂಸ್ಕೃತಿಕತೆ ಮಹಿಳೆಯರಿಗೆ ಬೇಕು” ಎಂದರು.
“ಮಹಿಳೆಯರಿಗೆ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಮೀಸಲಾತಿ ಕೊಟ್ಟಿದ್ದಾರೆ. ಅದರೆ, ಇನ್ನೂ ಲೋಕಸಭೆಯವರೆಗೂ ಮೀಸಲಾತಿ ಸಿಗಬೇಕು. ಭಾಷೆ, ಲಿಂಗದ ಮೇಲಿನ ಅಸಮಾನತೆ ಇನ್ನೂ ಇದೆ. ಬಿಲ್ಕೀಸ್ ಬಾನು ಅತ್ಯಾಚಾರ ಮಾಡಿದವರನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಮೆರವಣಿಗೆ ಮಾಡುತ್ತಾರೆ. ಇದರ ಮೇಲೆ ತಿಳಿಯುತ್ತದೆ ಯೂನಿಫಾರ್ಮ್ ಕೋಡ್ ಬಿಲ್ ಜಾರಿಗೆ ತಂದರೆ ಮಹಿಳೆಯರ ಗೌರವ ಹೆಚ್ಚಾಗುತ್ತದೆ ಎನ್ನುತ್ತಾರೆ. ಆದರೆ, ಇದರ ಮೇಲೆ ಗೊತ್ತಾಗುತ್ತದೆ” ಎಂದು ಹೇಳಿದರು.

ಡಾ. ಎಚ್ ಜಿ ಜಯಲಕ್ಷ್ಮಿ ಮಾತನಾಡಿ, “ಹದಿನಾರು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದರು. ನಿರ್ದಯವಾಗಿ, ಕೆಲವು ಸಲ ಗಡಿಯಾರದ ಮುಳ್ಳನ್ನು ಹಿಂದೆ ತಿರುಗಿಸಿ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇಂತಹ ಕೆಟ್ಟ ಪರಿಸ್ಥಿತಿ ವಿರುದ್ಧ ಹದಿನೈದು ಸಾವಿರ ಮಹಿಳೆಯರು ನ್ಯೂಯಾರ್ಕ್ನ ಬೀದಿಯಲ್ಲಿ ಪ್ರತಿಭಟಿಸಿದರು. ಮೇ ದಿನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮನೆ ಕೆಲಸ ಮಾಡುವುದು ಸುಲಭವಲ್ಲ. ಅದರಲ್ಲಿ ಏಕತನ ಇರುತ್ತದೆ. ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕೆಲಸಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆಯೇ” ಎಂದು ಪ್ರಶ್ನಿಸಿದರು.

“ಕೊಮು ರಾಜಕೀಯದ ವಿರುದ್ಧ ಧ್ವನಿ ಎತ್ತಿದರೆ, ಕೊಲೆ ಮಾಡುತ್ತಾರೆ, ಬೇದರಿಕೆ ಹಾಕುತ್ತಾರೆ. ಹೆಣ್ಣು ಮಕ್ಕಳು ಅಡುಗೆ ಮನೆಗೆ ಹೋಗಿ ಎಂಬ ಘೋಷ ವಾಕ್ಯವನ್ನು ಹಾಕುತ್ತಾರೆ. ಹೆಣ್ಣು ಮಕ್ಕಳು ಎಷ್ಟು ಮಕ್ಕಳನ್ನು ಹೆರಬೇಕು ಅಂತ ನಿಯಮಗಳನ್ನು ಹಾಕುತ್ತಾರೆ, ಇವರು ಯಾರೂ ನಮಗೆ ಇಂತಹ ನಿಯಮಗಳನ್ನು ವಿಧಿಸುವುದಕ್ಕೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾರ್ಮಿಕರ ಹಕ್ಕುಗಳನ್ನು ಕಡೆಗಣಿಸುತ್ತಿದ್ದಾರೆ. ʼನಲವತ್ತು ಗಂಟೆ, ತೊಂಬತ್ತು ಗಂಟೆ ದುಡಿಯಿರಿ ಮನೆಯಲ್ಲಿ ಹೆಂಡತಿ ಮುಖ ನೋಡತ್ತ ಕುಳಿತುಕೊಳ್ಳಬೇಡಿʼ ಎನ್ನುತ್ತ ಕಾರ್ಮಿಕರ ವೈಯಕ್ತಿಕ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗಗಳ ಅತಿಕ್ರಮಣ ತೆರವಿಗೆ ಕರವೇ ಮನವಿ
ನಿಶಾ ಗೋಳುರ ಮಾತನಾಡಿ, “ಹೆಣ್ಣು ಮಕ್ಕಳನ್ನು ನದಿಗಳಿಗೆ, ಹೂವಿಗೆ, ದೇವತೆಗೆ, ಶಕ್ತಿಗೆ ಹೋಲಿಸುತ್ತಾರೆ ನಮಗೆ ಬಜಾರಿಯರು ಅಂದರೂ ಪರವಾಗಿಲ್ಲ. ನಮಗೆ ಇವರ ರಕ್ಷಣೆ ಬೇಕಿಲ್ಲ. ಆದರೆ, ನಾವು ನಮ್ಮ ರಕ್ಷಣೆ ನಿಲ್ಲೋಣ. ಸೌಜನ್ಯಳ ಪರವಾಗಿ ಮಾತನಾಡಿದ ಸಮೀರ್ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುತ್ತಿದೆ. ಒಬ್ಬ ಮುಸಲ್ಮಾನ ಸೌಜನ್ಯ ಪರವಾಗಿ ಮಾತನಾಡಿದ ವ್ಯಕ್ತಿಯನ್ನು ಧಾರ್ಮಿಕವಾಗಿ ನೋಡುತ್ತಿರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಹೊಸಪೇಟೆಯ ಪಟೇಲ್ ಪ್ರೌಢಶಾಲೆಯಿಂದ ಮಹಿಳೆಯರ ಕಲಾತಂಡಗಳಿಂದ ಹೋರಾಟದ ಹಾಡುಗಳನ್ನು ಹಾಡುವುದರ ಮೂಲಕ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಬಳ್ಳಾರಿ ರಸ್ತೆ ಹೊಸಪೇಟೆ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಹಕ್ಕೊತ್ತಾಯ ಮಂಡಿಸಲಾಯಿತು.