“ಹಿಂದೂಗಳು ಮತಾಂತರ, ಲವ್ ಜಿಹಾದ್ ವಿಚಾರಗಳನ್ನ ಬಿಟ್ಟು ಬಿಡಬೇಕು. ಮತಾಂತರವಾದವರನ್ನ ಮತ್ತೆ ಘರ್ ವಾಪ್ಸಿ ಹೇಗೆ ಮಾಡಬೇಕು ಎಂಬ ಬಗ್ಗೆ ಹಿಂದೂ ಯುವಕರನ್ನ ತರಬೇತುಗೊಳಿಸಬೇಕು. ಹುಡುಗಿ ಸಿಕ್ಕಿಲ್ಲವೆನ್ನುವ ಹಿಂದೂ ಯುವಕರು ಅನ್ಯ ಧರ್ಮೀಯ ಹುಡುಗಿಯರನ್ನ ಪ್ರೀತಿಸಿ ಮದುವೆಯಾಗಿ, ಘರ್ ವಾಪ್ಸಿ ಮಾಡಬೇಕು” ಎಂದು ಸಂಘಪರಿವಾರದ ಮುಖಂಡ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ನಡೆಯಿತು.
ಕುತ್ತಾರಿನಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, “ಹಿಂದೂ ಸಮಾಜಕ್ಕೆ ಎದುರಾಗಿರುವ ಸಮಸ್ಯೆಗಳಿಂದ ಪಾರು ಮಾಡಬಲ್ಲ ಏಕೈಕ ಶಕ್ತಿಯೇ ನಮ್ಮೊಳಗಿನ ಶ್ರದ್ದೆಯಾಗಿದೆ. ಮತಾಂತರ, ಲವ್ ಜಿಹಾದ್ ವಿಚಾರಗಳನ್ನ ಬಿಟ್ಟು ಬಿಡಿ. ಮತಾಂತರವಾದವರನ್ನ ಮತ್ತೆ ಘರ್ ವಾಪಸಿ ಹೇಗೆ ಮಾಡೋದಂತ ನಮ್ಮ ಯುವಕರನ್ನ ತರಬೇತುಗೊಳಿಸಿ. ಹುಡುಗಿ ಸಿಕ್ಕಿಲ್ಲವೆನ್ನುವ ಹಿಂದೂ ಯುವಕರು ಅನ್ಯ ಧರ್ಮೀಯ ಹುಡುಗಿಯರನ್ನ ಪ್ರೀತಿಸಿ ಮದುವೆಯಾಗಿ. ಸವಾಲುಗಳನ್ನ ಎದುರಿಸಬೇಕೆಂದರೆ ಇನ್ನು ಅಗ್ರೆಸಿವ್ ಆಗಿ ಹೋದರೆ ಸಾಲದು. ಟೆಸ್ಟ್ ಮ್ಯಾಚ್ ನಿಂತೋಗಿದೆ, ಇರೋದೇ ಇಪ್ಪತ್ತು ಓವರ್, ಅದರಲ್ಲಿ ಬಡಿಯಬೇಕಷ್ಟೆ” ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಂದೂಗಳ ಕುರಿತು ತರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಮುಸ್ಲಿಂ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯಲು ಪರೀಕ್ಷೆ ಬರೆಯುವ ಶುಲ್ಕದ ಶೇ 50ರಷ್ಟನ್ನು ಮರುಪಾವತಿ ಮಾಡಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ನಡೆಸಲು ₹ 25 ರಿಂದ 30 ಲಕ್ಷವನ್ನು ಮುಸ್ಲಿಂ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ಏನೂ ಇಲ್ಲದಂತಾಗಿದೆ. ಹಿಂದುತ್ವವವನ್ನ ಗೌರವಿಸುವ ವ್ಯಕ್ತಿಗಳು ನಾಡನ್ನು ಆಳಿದರೆ ಮಾತ್ರ ಹಿಂದೂ ಧರ್ಮ ಸುದೀರ್ಘವಾಗಿ ಬಾಳುತ್ತದೆ ಎಂದು ತಿಳಿಸಿದ್ದಾರೆ.
‘2013ಲ್ಲಿ ಪವಿತ್ರ ಕುಂಭ ಮೇಳದ ಉಸ್ತುವಾರಿಯನ್ನಾಗಿ ಅಂದಿನ ಸರ್ಕಾರ ಅಝಮ್ ಖಾನ್ ಅವರನ್ನು ನೇಮಿಸಿತ್ತು. ಆಗಿನ ಉಸ್ತುವಾರಿಗಿಂತ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಸ್ತುವಾರಿಯಲ್ಲಿ ನಡೆದ ಕುಂಭಮೇಳ ಅತ್ಯಂತ ಯಶಸ್ವಿಯಾಯಿತು. ಕುಂಭ ಮೇಳವನ್ನು ಹೇಗೆ ನಡೆಸಬಹುದು ಎಂದು ಯೋಗಿ ಆದಿತ್ಯನಾಥ್ ತೋರಿಸಿಕೊಟ್ಟಿದ್ದಾರೆ. ಬಾಂಗ್ಲಾದೇಶದ ಪ್ರಭಾವಕ್ಕೊಳಗಾಗಿ ಇಡೀ ಅಸ್ಸಾಮನ್ನು ಭಾರತ ಕಳಕೊಂಡರೂ ಆಶ್ಚರ್ಯ ಪಡಬೇಕಿಲ್ಲ. ಆದರೆ ಅಸ್ಸಾಮಲ್ಲಿ ಹಿಂದೂ ಪರ ಆಡಳಿತ ಬಂದ ಮೇಲೆ ಬಾಂಗ್ಲಾದೇಶದ ನುಸಳುಕೋರರನ್ನ ಹುಡುಕಿ ಹೊರದಬ್ಬುವ ಕಾರ್ಯ ಪ್ರಖರವಾಗಿ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಹಿಂದೂಗಳು ಬದುಕಲು ಕಷ್ಟಕರ ಸ್ಥಿತಿಯಿದ್ದು, ಆ ರಾಜ್ಯವನ್ನ ನಾವು ಕಳಕೊಳ್ಳುವ ಭೀತಿ ಎದುರಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, “ದೇಶದಲ್ಲಿ 125 ಕೋಟಿ ಹಿಂದೂಗಳಿದ್ದರೂ ಪ್ರತಿನಿತ್ಯ ಸರಾಸರಿಯಲ್ಲಿ ನಮ್ಮ ಜನಸಂಖ್ಯೆ ಕಡಿಮೆಯಾಗುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಿಂದೂಗಳ ಸಂಖ್ಯೆ 65 ಶೇಕಡಾಕ್ಕೆ ಇಳಿದಿದೆ. ಹಿಂದೂ ಯುವಕ, ಯುವತಿಯರು ವಯಸ್ಸು 35 ಆದರೂ ಮದುವೆ ಆಗಲ್ಲ. ಮದುವೆಯಾದರೂ ಮಕ್ಕಳು ಮಾಡಲು ವಿಳಂಬ ಪೃವೃತ್ತಿಯೇ ನಮ್ಮ ಜನಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಸದ್ಯಕ್ಕಂತೂ ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗಲ್ಲ: ವದಂತಿಗಳಿಗೆ ಸ್ಪಷ್ಟ ತೆರೆ ಎಳೆದ ರೋಹಿತ್ ಶರ್ಮಾ
“ಹಿಂದೂ ಯುವಕ, ಯುವತಿಯರು ಇಪ್ಪತ್ತೈದು, ಮೂವತ್ತು ವರುಷದ ಒಳಗೆ ಮದುವೆಯಾಗಿ ಕನಿಷ್ಠ ಎರಡು ಮಕ್ಕಳು ಪಡೆಯುವಂತೆ ಜನಜಾಗೃತಿಗೊಳಿಸಬೇಕು. ಇಡೀ ರಾಷ್ಟ್ರದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಗೊಳ್ಳಲು ಪ್ರಬಲ ಕಾನೂನು ಜಾರಿಯಾಗಬೇಕೆಂದು ಪ್ರಯಾಗ್ ರಾಜ್ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬೈಠಕ್ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

ಹಿಂದು ಧಮ೯ದಲ್ಲಿ ಇರುವ ಹಿಂದುಳಿದ ವರ್ಗಗಳ ಅಂದರೆ ಎಸ್ಸಿ ಎಸ್ಟಿ ಅಥವಾ ಹಿಂದುಳಿದ ಸಮುದಾಯಗಳಲ್ಲಿಯೂ ಕನ್ಯೆ ಸಿಗುತ್ತಿಲ್ಲ ಹಾಗಾಗಿ ಬ್ರಾಹ್ಮಣರಲ್ಲಿಯ ಹೆಂಗಸರನ್ನು ಪ್ರೀತಿಸಿ ಮದುವೆ ಆಗಬಹುದೆ ಸುಲಿ ಬೆಲೆ ಚಕ್ರವರ್ತಿ
ಸೂಪರ್ ಸರ್👍👍