ಗುಬ್ಬಿ | ಸಾಮಾಜಿಕ ಸೇವೆಯಲ್ಲಿ ನಿರತ ಬಿದರೆ ಶ್ರೀ ತಿರುಮಲ ಟ್ರಸ್ಟ್ : ಸಸಿಗಳನ್ನು ನೆಟ್ಟು ಹಸಿರು ಕ್ರಾಂತಿಗೆ ಮುನ್ನುಡಿ

Date:

Advertisements

ಐತಿಹಾಸಿಕ ಪ್ರಸಿದ್ಧ ಬಿದರೆ ಗ್ರಾಮ ಸುಮಾರು 40 ದೇವಾಲಯಗಳನ್ನು ಹೊಂದಿದ್ದು ಯಾವುದೇ ಜಾತಿ ತಾರತಮ್ಯ ಇಲ್ಲದೆ ಧಾರ್ಮಿಕ ಕ್ಷೇತ್ರವಾಗಿ ಶ್ರೀ ತಿರುಮಲ ಟ್ರಸ್ಟ್ ಪರಿಸರ ಕಾಳಜಿ ಹೊತ್ತು ಸಾಂಪ್ರದಾಯಿಕ ಸಸಿಗಳನ್ನು ಮೂಲಕ ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ ಎಂದು ಶ್ರೀ ತಿರುಮಲ ಟ್ರಸ್ಟ್ ಅಧ್ಯಕ್ಷ ಬಿದರೆ ಪ್ರಕಾಶ್ ತಿಳಿಸಿದರು.

ತಾಲ್ಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಶ್ರೀ ತಿರುಮಲ ದೇವಾಲಯದ ಬಳಿಯ ಹರಿಹರ ರಸ್ತೆಯಲ್ಲಿ ಹಿರಿಯರ ಸ್ಮರಣಾರ್ಥ 30 ವಿಶೇಷ ತಳಿಗಳ ಸಸಿಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಪೋಷಿಸುವ ಸಾಮಾಜಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತೋಟಗಳಲ್ಲಿ ಗಿಡ ನೆಟ್ಟು ಪೋಷಿಸಿದರೆ ಒಂದು ಕುಟುಂಬವಷ್ಟೇ ಸ್ಮರಿಸುತ್ತದೆ. ಸಾರ್ವಜನಿಕ ರಸ್ತೆಯಲ್ಲಿ ಹೂವು ಹಣ್ಣು ನೀಡುವ ಸಸಿಗಳನ್ನು ನೆಟ್ಟು ಪೋಷಿಸಿದರೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸುವ ಜೊತೆ ಮುಂದಿನ ಪೀಳಿಗೆ ಸಾಮಾಜಿಕ ಕಳಕಳಿ ಬಗ್ಗೆ ಮಾದರಿಯಾಗುತ್ತದೆ ಎಂದು ವಿವರಿಸಿದರು.

1001170931

ಪ್ರತಿಯೊಂದು ಸಸಿಯನ್ನು ಗ್ರಾಮದ ಹಿರಿಯರ ಸ್ಮರಣಾರ್ಥ ನೆಟ್ಟು ಸಸಿಗೆ ಐದು ಸಾವಿರ ವೆಚ್ಚದಲ್ಲಿ ಟ್ರೀ ಗಾರ್ಡ್ ಹಾಗೂ ಸಿಮೆಂಟ್ ಬಳೆ ಬಳಸಿ ಸಂಪೂರ್ಣ ಸಂರಕ್ಷಣೆ ಮಾಡಲಾಗಿದೆ. ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಅವರ ಅನುದಾನದ ಸಿಸಿ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಟ್ಟು ಗ್ರಾಮದ ಸೌಂದರ್ಯ ಹೆಚ್ಚಿಸಲಾಗಿದೆ. ಮುಂದುವರೆದು ನೂರು ಸಸಿಗಳನ್ನು ಇದೇ ಮಾದರಿಯಲ್ಲಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಾಮಾಜಿಕ ಕಳಕಳಿ ತೋರುವ ಕೆಲಸ ಟ್ರಸ್ಟ್ ಮಾಡಲಿದೆ. ಮುಂದಿನ ದಿನದಲ್ಲಿ ಶಾಲಾ ಆವರಣದಲ್ಲಿ ಪರಿಸರ ಉಳಿಸುವುದು, ಆರೋಗ್ಯ ಶಿಬಿರ, ಬಡವರಿಗಾಗಿ ಸಮುದಾಯ ಭವನ ನಿರ್ಮಾಣ ಹೀಗೆ ನಾನಾ ಸಾಮಾಜಿಕ ಕಾರ್ಯ ಮಾಡಲು ಚಿಂತನೆ ನಡೆಸಲಾಗಿದೆ ಎಂದರು

Advertisements
1001170932

ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿ ಗ್ರಾಮದಿಂದ ಬೇರೆಡೆ ಇರುವವರಿಗೂ ತಿಳಿಸಿ ಭಾವ ಬಾಂಧವ್ಯ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದಾಗ 400 ಮಂದಿ ಸ್ಥಳೀಯ ಗ್ರಾಮಸ್ಥರು ದೇವಾಲಯ ಕೆಲಸಕ್ಕೆ ಕೈ ಜೋಡಿಸಿ 14 ತಿಂಗಳಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಯಿತು. ಈ ಸಮಯದಲ್ಲಿ ರಚನೆಯಾದ ತಿರುಮಲ ಟ್ರಸ್ಟ್ ಸಾಮಾಜಿಕ ಕಾರ್ಯಗಳನ್ನು ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ನಿರ್ಧರಿಸಿ ಸಸಿ ನೆಡುವ ಮೂಲಕ ಮೊದಲ ಮೆಟ್ಟಿಲು ಏರಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯ ವೈಖರಿ ತಾಲ್ಲೂಕಿನ ಇತರೆ ಗ್ರಾಮಕ್ಕೂ ಮಾದರಿಯಾಗುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಬಿ.ಎಲ್.ಸುಮತಿಕುಮಾರ್, ಕಾರ್ಯದರ್ಶಿಗಳಾದ ಸ್ಮಿತಾ ಶ್ರೀನಿವಾಸನ್, ಬಿ.ಎಸ್.ಚಂದ್ರಶೇಖರ್, ಟ್ರಸ್ಟ್ ಸದಸ್ಯರಾದ ಬಿ..ಎಸ್.ವೆಂಕಟೇಶ್, ಬಿ.ಜೆ.ಆದಿರಾಜ್, ರಂಗಸ್ವಾಮಯ್ಯ, ಬಿ.ಶ್ರೀನಿವಾಸನ್, ಆರ್.ಶೈಲಜಾ, ನಸರಿ ಈಶ್ವರಯ್ಯ, ಅಡವೀಶಯ್ಯ, ಈಶ್ವರಯ್ಯ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X