ಧಾರವಾಡ | ಕಾರ್ಲ್ ಮಾರ್ಕ್ಸ್ ಶೋಷಿತ ಜನತೆಗೆ ವಿಮುಕ್ತಿಯ ಪತ ತೋರಿದವರು: ದೀಪಾ ಧಾರವಾಡ

Date:

Advertisements

ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ವಿಶ್ವದ ಕಾರ್ಮಿಕರಿಗೆ ಕರೆ ನೀಡಿದ ಕಾರ್ಮಿಕ ವರ್ಗದ ನಾಯಕ, ತತ್ವಜ್ಞಾನಿ, ಮೇಧಾವಿ ಕಾರ್ಲ್ ಮಾರ್ಕ್ಸ್ ರವರ 143ನೇ ಸ್ಮರಣ ದಿನವನ್ನು ಧಾರವಾಡದ ಮುಮ್ಮಿಗಟ್ಟಿ ಗ್ರಾಮದಲ್ಲಿ ಎಐಕೆಕೆಎಂಎಸ್ ಜಿಲ್ಲಾ ಸಮಿತಿಯಿಂದ ಆಚರಿಸಿದರು.

ಈ ಕುರಿತು ಎಐಕೆಕೆಎಮ್ಎಸ್ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಕಾರ್ಲ್ ಮಾರ್ಕ್ಸ್ ಶೋಷಿತ ಜನತೆಗೆ ವಿಮುಕ್ತಿಯ ಪತ ತೋರಿಸಿದವರು. ವರ್ಗ ಸಂಘರ್ಷದ ಗತಿಯಲ್ಲೇ ಸಮಾಜ ನಿರಂತರವಾಗಿ ಬದಲಾಗುವುದು, ಅಂತಿಮವಾಗಿ ವರ್ಗವೇ ಇಲ್ಲದ ಸಮಾಜವಾದಿ ಸಮಾಜಕ್ಕೆ ಜನ್ಮ ನೀಡುವುದು ಎಂಬುದನ್ನು ಇತಿಹಾಸದ ಅಧ್ಯಯನದ ಮೂಲಕ ತೋರಿಸಿಕೊಟ್ಟು ದುಡಿಯುವ ಜನತೆಯ ನೋವುಗಳಿಗೆ ಕೊನೆ ಇದೆ ಎಂದು ಸಾಬೀತುಪಡಿಸಿದವರು.

ಇಂದು ದೇಶ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಕಾರ್ಮಿಕರ, ರೈತ, ಕೃಷಿ ಕಾರ್ಮಿಕರ ಬದುಕು ಹೀನಾಯ ಪರಿಸ್ಥಿತಿಯಲ್ಲಿದೆ. ಈ ಬದುಕಿನ ಬದಲಾವಣೆಗಾಗಿ ಮಹಾನ್ ನಾಯಕರಾದ ಕಾರ್ಲ ಮಾರ್ಕ್ಸ್ ರವರ ವಿಚಾರ ಅತ್ಯಮೂಲ್ಯ. ಉನ್ನತವಾದ ಕಾರ್ಮಿಕ ವರ್ಗದ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನಗಳ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಾ ದುಡಿಯುವ ಜನತೆಗೆ ಕಾರ್ಮಿಕ ವರ್ಗದ ಪ್ರಜ್ಞೆಯನ್ನು ಬೆಳೆಸಿ ಅಂತಿಮವಾಗಿ ಶೋಷಣೆಯೇ ಇಲ್ಲದ ಸಮಾಜವನ್ನು ಕಟ್ಟಲು ಎಲ್ಲಾ ದುಡಿಯುವ ಜನತೆ ಒಂದಾಗಿ ಹೋರಾಟ ಕಟ್ಟುವುದು ಇಂದಿನ ಗಳಿಗೆಯ ಅವಶ್ಯಕತೆ ಎಂದರು.

Advertisements

ಈ ಕಾರ್ಯಕ್ರಮದಲ್ಲಿ ಮುಮ್ಮಿಗಟ್ಟಿ ಗ್ರಾಮದ ಸರಸ್ವತಮ್ಮ ಮಾದರ್, ಯಲ್ಲಮ್ಮ ಕರಿಯಪ್ಪ ಮಾದರ್, ಕರಿಯಮ್ಮ, ಭಾರತಿ, ಹನುಮಮ್ಮ ಮಾದರ್, ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ

ಬೆಂಗಳೂರು ನಿಮ್ಹಾನ್ಸ್ ಟೆಲಿ-ಮನಸ್ ಅಪೆಕ್ಸ್ ತಂಡದಿಂದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್...

ಕಲಬುರಗಿ | ಶಾಲಾ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ; ಗ್ರಾಮಸ್ಥರಿಂದ ಪ್ರತಿಭಟನೆ

ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ...

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

Download Eedina App Android / iOS

X