ಶಿವಮೊಗ್ಗ | ಜನಸಾಮಾನ್ಯರ ನಿರ್ಲಿಪ್ತತೆಯಿಂದ ಮಹಾನ್ ವ್ಯಕ್ತಿಗಳ ದುರಂತ ಅಂತ್ಯ: ರಾಧಾ ಸುಂದರೇಶ್

Date:

Advertisements

ಸಮಾಜಕ್ಕೆ ಸತ್ಯ, ಧಮ೯, ಶಾಂತಿ, ಸಮಾನತೆ ಸಾರಿದ ಮಹಾನ್ ವ್ಯಕ್ತಿಗಳ ಅಂತ್ಯ ದುರಂತದಲ್ಲಿ ಕೊನೆಗೊಂಡಿದ್ದು ಇತಿಹಾಸದ ಕಟುಸತ್ಯ. ಇದಕ್ಕೆ ಮುಖ್ಯ ಕಾರಣ ಜನಸಾಮಾನ್ಯರು ಪ್ರಶ್ನಿಸುವುದನ್ನು ಮರೆತು ನಿರ್ಲಿಪ್ತ ಧೋರಣೆ ಅನುಸರಿಸುವುದೇ ಆಗಿದೆ ಎಂದು ಚಿಕ್ಕಮಗಳೂರಿನ ಸಾಮಾಜಿಕ ಹೋರಾಟಗಾತಿ೯ ರಾಧಾ ಬಿ.ಕೆ. ಸುಂದರೇಶ್ ಅಭಿಪ್ರಾಯಪಟ್ಟರು.

1001366824

“ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಮಹಿಳಾ ಜಾಗೃತಿ ವೇದಿಕೆ, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಹಿಂದುಳಿದ ಜನ ಜಾಗೃತಿ ವೇದಿಕೆ ಮಹಿಳಾ ಘಟಕ ಸಂಯುಕ್ತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಿನ್ನೆ (ಮಾ.17) ಹಮ್ಮಿಕೊಂಡಿದ್ದ ಮಹಿಳಾ ಚೈತನ್ಯ ಸಮಾವೇಶದಲ್ಲಿ ಮಾತನಾಡಿದ ಅವರು, “ವಿಶ್ವಕ್ಕೆ ಶಾಂತಿ ಬೋಧಿಸಿದ ಏಸುಕ್ರಿಸ್ತರನ್ನು ಶಿಲುಬೆಗೆ ಏರಿಸಲಾಯಿತು, ಜ್ಞಾನದ ಜ್ಯೋತಿ ಬಸವಣ್ಣರನ್ನು ನೀರಿಗೆ ತಳ್ಳಲಾಯಿತು, ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲಲಾಯಿತು.. ಇದು ಈ ಸಮಾಜ ಮಹಾನ್ ವ್ಯಕ್ತಿಗಳನ್ನು ನಡೆಸಿಕೊಂಡ ದುರಂತಗಳ ಚರಿತ್ರೆ. ಇದಕ್ಕೆಲ್ಲಾ ಕಾರಣ ಜನಸಾಮಾನ್ಯರು ಮುಖ್ಯವಾಗಿ ಮಹಿಳೆಯರು ಸಮಾಜದ ಆಗು-ಹೋಗುಗಳ ಕಡೆಗೆ ಗಮನಕೊಡದೆ ನಿಲಿ೯ಪ್ತರಾಗಿದ್ದದ್ದು” ಎಂದು ಅವರು ಜನಸಾಮಾನ್ಯರ ನಿಸ್ಸೀಮ ನಿಲಿ೯ಪತೆಯ ಇತಿಹಾಸ ತೆರೆದಿಟ್ಟರು.

1001366823

“ಯಾವುದೇ ಒಂದು ದೇಶದ ಪ್ರಧಾನಿ ಅಥವಾ ಮಂತ್ರಿ ಇಲ್ಲವೇ ಅಧಿಕಾರಿ ತಿಂಗಳುಗಟ್ಟಲೆ ಕೆಲಸ ಮಾಡದೆ ದೇಶಾಂತರ ಹೋದರೂ ನಡೆಯುತ್ತದೆ ಅದೇ ರೀತಿ ರೈತರು, ಕಾಮಿ೯ಕರು, ಸೈನಿಕರು ಬಹುಮುಖ್ಯವಾಗಿ ಮಹಿಳೆಯರು ಕೆಲಸ ಮಾಡದೆ ನಿಲಿ೯ಪ್ತರಾಗಿ ಉಳಿದರೆ ಅಭಿವೃದ್ಧಿ ಕಾಯ೯ಗಳು ಕುಂಠಿತವಾಗಿ ದೇಶ ವಿನಾಶದ ಕಡೆಗೆ ಸಾಗುತ್ತದೆ” ಎಂದು ಅವರು ವಿವರಿಸಿದರು.

Advertisements

ಇದನ್ನೂ ಓದಿ: ಶಿವಮೊಗ್ಗ | ಹೆಚ್ಚಿದ ಶುಂಠಿ ಲಾಬಿ; ಮಲೆನಾಡ ರೈತರು ಕಂಗಾಲು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿವಮೊಗ್ಗದ ಸಿ.ಡಿ.ಪಿ.ಒ. ಗಂಗಾಬಾಯಿ, “ಭಾರತೀಯ ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಧಾಪುಗಾಲಿಡುತ್ತಿದ್ದು ಸಮಾಜದ ಆಗು-ಹೋಗುಗಳಿಗೆ ತೀಕ್ಷ್ಣವಾಗಿ ಸ್ಪಂದಿಸುವ ಮನೋಭಾವ ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವೆಂದು” ಕರೆ ನೀಡಿದರು.

1001366810

ಸಮಾವೇಶದಲ್ಲಿ ತೀಥ೯ಹಳ್ಳಿಯ ಸಾಮಾಜಿಕ ಕಾರ್ಯಕರ್ತೆ ಲತಾ ಜೋಯಿಸ್, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ವೀರಮ್ಮ, ಎಲ್.ಐ.ಸಿ. ಡೆವಲಪ್‌ಮೆಂಟ್ ಆಫೀಸರ್ ದೀಪಿಕಾ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ, ಮಹಿಳಾ ಜಾಗೃತಿ ವೇದಿಕೆ ಸಂಚಾಲಕಿ ರಾಜಮ್ಮ, ವೀಣಾನಾಗೇಶ್, ದೀಪಿಕಾ, ಸರೋಜ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X