ಕುರಿ ಕಳ್ಳತನ ತಡೆಯಲು ಯತ್ನಸಿದ ಕುರಿಗಾಯಿ ಕಾಲು ಕತ್ತರಿಸಿ ದುರುಳನೋರ್ವ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅರಭಾವಿ- ಸಂಗನಕೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೂಲತಃ ಹುಕ್ಕೇರಿ ತಾಲೂಕಿನ ಗಸ್ತಿ ಗ್ರಾಮದ ಬಸಪ್ಪ ಗುರವನ್ನವರ ಮೇಲೆ ಮಲ್ಲಿಕ್ ಸಾಬ್ ಮುಲ್ತಾನಿ ಎಂಬಾತನಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ಕುರಿ ಕಳ್ಳತನ ಪ್ರಶ್ನಿಸಿದ್ದಕ್ಕೆ ಆತನ ಬಳಿಯಿದ್ದ ಕೊಡ್ಲಿ ಕಸಿದುಕೊಂಡು ಕಾಲುಕಡಿದು ಪರಾರಿಯಾಗಿದ್ದಾನೆ.
ಈ ಘಟನೆ ನಡೆದು ನಾಲ್ಕು ದಿನಗಳಾದರೂ ಘಟಪ್ರಭಾ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡ ಕುರಿಗಾಯಿ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.