ಐಪಿಎಲ್‌ ಅಖಾಡದಲ್ಲಿದ್ದಾರೆ 13 ಕನ್ನಡಿಗ ಆಟಗಾರರು: ‘ಆರ್‌ಸಿಬಿ’ಯಲ್ಲಿ ಯಾರ್‍ಯಾರಿದ್ದಾರೆ?

Date:

Advertisements

ಕೋಲ್ಕತ್ತಾದಲ್ಲಿ 2025ರ ಐಪಿಎಲ್‌ ಟೂರ್ನಿಯ ಮೊದಲ ಪಂದ್ಯ ಇಂದು (ಮಾರ್ಚ್‌ 22) ನಡೆಯಲಿದೆ. ಈ ಬಾರಿಯ ಭಾರತೀಯ ಕ್ರಿಕೆಟಿಗರು ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆಗಳಿವೆ. ಜೊತೆಗೆ, ಟೂರ್ನಿಯಲ್ಲಿರುವ ಆಡುತ್ತಿರುವ ಕನ್ನಡಿಗರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಸದ್ಯ, ಟೂರ್ನಿಯ ಅಖಾಡದಲ್ಲಿ 13 ಕನ್ನಡಿಗರಿದ್ದಾರೆ. ಅವರಲ್ಲಿ, ಇಬ್ಬರು ಆರ್‌ಸಿಬಿ ತಂಡದಲ್ಲಿದ್ದಾರೆ.

13 ಕನ್ನಡಿಗ ಕ್ರಿಕೆಟಿಗರ ಪಟ್ಟಿ ಇಲ್ಲಿದೆ:

  1. ಕೆಎಲ್ ರಾಹುಲ್: ಭಾರತೀಯ ತಂಡದಲ್ಲಿರುವ ಏಕೈಕ ಕನ್ನಡಿಗ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಹರಾಜಿನಲ್ಲಿ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಪ್ರಾಂಚೈಸಿ ಖರೀದಿಸಿತ್ತು.
  2. ಪ್ರಸಿದ್ಧ್ ಕೃಷ್ಣ: ವೇಗಿ ಬೌಲರ್ – ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 9.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ.
  3. ಅಭಿನವ್ ಮನೋಹರ್: ಬ್ಯಾಟರ್. ಸನ್‌ರೈಸರ್ಸ್‌ ಹೈದ್ರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. 3.20 ಕೋಟಿ ರೂ.ಗೆ ತಂಡದ ಪಾಲಾಗಿದ್ದಾರೆ.
  4. ದೇವದತ್ ಪಡಿಕ್ಕಲ್: ಆರ್‌ಸಿಬಿ ತಂಡದಲ್ಲಿದ್ದಾರೆ. 2 ಕೋಟಿ ರೂ. ಮೂಲ ಬೆಲೆಗೆ ಅವರನ್ನು ತಂಡ ಖರೀದಿಸಿದೆ.
  5. ವೈಶಾಕ್ ವಿಜಯಕುಮಾರ್: ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಅವರನ್ನು 1.80 ಕೋಟಿ ರೂ.ಗೆ ತಂಡ ಖರೀದಿಸಿದೆ.
  6. ಮನೀಶ್ ಪಾಂಡೆ: ಕೆಕೆಆರ್‌ ತಂಡದಲ್ಲಿ ಆಡುತ್ತಿದ್ದಾರೆ. 75 ಲಕ್ಷ ರೂ.ಗೆ ತಂಡ ಸೇರಿದ್ದಾರೆ.
  7. ಕರುಣ್ ನಾಯರ್: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 50 ಲಕ್ಷ ರೂ. ಸಂಭಾವನೆಗೆ ತಂಡ ಸೇರಿದ್ದಾರೆ.
  8. ಮನೋಜ್ ಭಾಂಡಗೆ: ಕಳೆದ ಎರಡು ಸೀಸನ್​​ಗಳಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿದ್ದಾರೆ. ಅವರನ್ನು ಈ ಬಾರಿ 30 ಲಕ್ಷ ರೂ. ಮೂಲ ಬೆಲೆಗೆ ತಂಡ ಖರೀದಿಸಿದೆ.
  9. ಪ್ರವೀಣ್ ದುಬೆ: ಸ್ಪಿನ್ನರ್ – ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಅವರನ್ನು 30 ಲಕ್ಷ ರೂ.ಗೆ ಪಂಜಾಬ್ ತಂಡ ಖರೀದಿಸಿದೆ.
  10. ಲವ್​ನೀತ್ ಸಿಸೋಡಿಯಾ: ವಿಕೆಟ್ ಕೀಪರ್ + ಬ್ಯಾಟರ್. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡ ಸೇರಿಸಿಕೊಂಡಿದೆ.
  11. ಮನ್ವಂತ್ ಕುಮಾರ್: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 30 ಲಕ್ಷ ರೂ. ಪಡೆದು ತಂಡಕ್ಕೆ ಸೇರಿದ್ದಾರೆ.
  12. ಶ್ರೇಯಸ್ ಗೋಪಾಲ್: ಸ್ಪಿನ್ನರ್. ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಗೆ ಅವರನ್ನು ತಂಡ ಖರೀದಿಸಿದೆ.
  13. ಶ್ರೀಜಿತ್ ಕೃಷ್ಣನ್: ವಿಕೆಟ್ ಕೀಪರ್ + ಬ್ಯಾಟರ್. ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಗೆ ತಂಡ ಸೇರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X