ಹಾವೇರಿ | ಒನಕೆ ಓಬವ್ವ ವಿಶ್ವವಿದ್ಯಾಲಯ ಮಟ್ಟದಲ್ಲಿ  ಪಠ್ಯ ಆಗಬೇಕು: ಸಾಹಿತಿ ಸಿ. ಎಸ್. ಮರಳಿಹಳ್ಳಿ

Date:

Advertisements

“ಒನಕೆ ಓಬವ್ವಳ ಕುರಿತು ಪ್ರಾಥಮಿಕ ಶಾಲೆಯಲ್ಲಿ ಮಾತ್ರವಲ್ಲ, ವಿಶ್ವವಿದ್ಯಾಲಯ ಮಟ್ಟದಲ್ಲಿಯೂ  ಪಠ್ಯ ಆಗಬೇಕು” ಎಂದು ಹಿರಿಯ ಸಾಹಿತಿ ಸಿ. ಎಸ್. ಮರಳಿಹಳ್ಳಿ ಅಭಿಪ್ರಾಯ ಪಟ್ಟರು.

ಹಾವೇರಿ ಪಟ್ಟಣದ ಗಾಂಧಿ ಭವನದಲ್ಲಿ ರಾಜ್ಯ ಒನಕೆ ಓಬವ್ವ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಒನಕೆ ಓಬವ್ವ ಕವಿಗೋಷ್ಠಿ ಮತ್ತು ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

“ಒನಕೆ ಓಬವ್ವ ನಿಷ್ಠೆ, ಪ್ರಾಮಾಣಿಕತೆಗೆ ಹೆಸರಗಿದ್ದಳು. ನಿಸ್ವಾರ್ಥ ಸೇವೆ ಸಲ್ಲಿಸಿ, ಹೋರಾಟ ಮಾಡಿ ಶತ್ರುಗಳನ್ನು ಸದೆಬಡೆದು ಜಯಶಾಲಿಯಾಗಿ ಚಿತ್ರದುರ್ಗದ ಇತಿಹಾಸವನ್ನು ಅಜರಾಮರವಾಗಿಸಿದ  ವೀರ ಒನಕೆ ಓಬವ್ವ” ಎಂದು ಹೇಳಿದರು.

Advertisements

ಕಸಾಪ ಜಿಲ್ಲಾಧ್ಯಕ್ಷ  ಲಿಂಗಯ್ಯ ಬಿ ಹಿರೇಮಠ ಅವರು ಒನಕೆ ಓಬವ್ವ ಜೀವನ ಚರಿತ್ರೆಯ ಧ್ವನಿ ಸುರಳಿ ಬಿಡುಗಡೆಗೊಳಿಸಿ ಮಾತನಾಡಿ, “ಒನಕೆ ಓಬವ್ವ ಚರಿತ್ರೆಯ ಕುರಿತು ಸಂಶೋಧನ ಸಂಶೋಧನಗಳು ಆಗಬೇಕು. ಸಂಶೋಧನ ವಿಷಯಾವಾಗಿ ತೆಗೆದುಕೊಳ್ಳುವಂತೆ ಸಂಶೋಧಕರಿಗೆ ಪ್ರೆರೇಪಿಸಬೇಕಿದೆ” ಎಂದು ಹೇಳಿದರು.

ಜಿಲ್ಲೆಯ ಮುವತ್ತೆಂಟು ಹಿರಿ-ಕಿರಿಯ ಕವಿಗಳು ಸ್ವ ರಚಿತ ಕವನಗಳನ್ನು ವಾಚಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಭಗತ್ ಸಿಂಗ್ ಹುತಾತ್ಮ ದಿನದಂದು ಸರ್ಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪ

ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ನೆಹರು ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಡಿ ಮದ್ಲೇರ, ನಿವೃತ್ತ ಅಬಕಾರಿ ಅಧಿಕಾರಿ ಬಿ. ಸಾವಕ್ಕನವರ, ನಿವೃತ್ತ ಎಸ್. ಬಿ. ಐ ಮ್ಯಾನೇಜರ್ ಮಂಜಪ್ಪ ಮಿನಗಲವರ, ನಿವೃತ್ತ ಸಹಾಯಕ ನಿರ್ದೇಶಕರು  ಎನ್. ಬಿ ಕಾಳೆ ಇದ್ದರು. ಗೌರವ ಉಪಸ್ಥಿತಿ ಸಾಹಿತಿ, ಧ್ವನಿ ಸುರಳಿ ಕರ್ತೃ ಅಶೋಕ ಕೊಂಡ್ಲಿ, ಹಿರಿಯ ಲೇಖಕರು ಸತೀಶ ಕುಲಕರ್ಣಿ, ಪೃಥ್ವಿರಾಜ ಬೆಟಗೇರಿ ಹಾಗೂ ಅನೇಕರು ಭಾಗವಹಿಸದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X