ಗುಬ್ಬಿ | ಯಾವುದೇ ಆಮಿಷಕ್ಕೆ ಒಳಗಾಗಬೇಡಿ : ರೈತರಿಗೆ ಶಾಸಕರ ಮನವಿ

Date:

Advertisements

ಜಮೀನು ಮಂಜೂರು ಮಾಡಿಸುವ ಆಮಿಷ ತೋರಿಸಿ ಮುಗ್ಧ ರೈತರನ್ನು ವಂಚಿಸಿ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲ ಸಂಘಗಳು ಮುಂದಾಗಿವೆ. ಈಗಾಗಲೇ ಯಾವುದೇ ದಾಖಲೆ ಇಲ್ಲದ ಆರು ಸಾವಿರ ಅರ್ಜಿಗಳನ್ನು ತಾಲ್ಲೂಕು ಕಚೇರಿಗೆ ನೀಡಿದ್ದಾರೆ. ಇದೆಲ್ಲಾ ಫೇಕ್ ಅರ್ಜಿಗಳು. ಯಾವುದೇ ಕಾರಣಕ್ಕೂ ಮರುಳಾಗಬೇಡಿ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 1998-99 ರ ಸುಪ್ರೀಂ ಕೋರ್ಟ್ ಆದೇಶದಂತೆ ನೂರು ಜಾನುವಾರು ಇರುವ ಹಳ್ಳಿಗೆ 33 ಎಕರೆ ಗೋಮಾಳ ಜಮೀನು ಮೀಸಲು ಇರಬೇಕಿದೆ. ಈ ಗೈಡ್ ಲೈನ್ ಪ್ರಕಾರ ತಾಲ್ಲೂಕಿನಲ್ಲಿ ಗೋಮಾಳ ಜಮೀನು ಮಂಜೂರು ಮಾಡಲು ಅಸಾಧ್ಯವಾಗಿದೆ. ಸರ್ಕಾರ ಈಗ ಯಾವುದೇ ಅರ್ಜಿ ಆಹ್ವಾನಿಸಿಲ್ಲ. ವಸ್ತು ಸ್ಥಿತಿ ಅರಿತು ರೈತರು ವರ್ತಿಸಬೇಕು. ಕೆಲ ಸಂಘಗಳು ಅವರ ನಿಲುವು ಉಳಿಸಿಕೊಳ್ಳಲು ಮುಗ್ಧ ರೈತರನ್ನು ಪ್ರತಿಭಟನೆಗೆ ಇಳಿಸುತ್ತಾರೆ. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.

ಬಗರ್ ಹುಕುಂ ಸಮಿತಿ ಮೂಲಕ ಈಗಾಗಲೇ 1991-92 ರ 50 ಅರ್ಜಿ ನಮೂನೆಯಲ್ಲಿ ಆರು ಸಾವಿರ ಅರ್ಜಿಗಳಿವೆ. 1997-98 ರ 53 ಅರ್ಜಿ ನಮೂನೆಯಲ್ಲಿ 4800 ಅರ್ಜಿ ಹಾಗೂ 2018-19 ರ 57 ಅರ್ಜಿ ನಮೂನೆಯಲ್ಲಿ 28 ಸಾವಿರ ಅರ್ಜಿ ಇದ್ದು ಅವುಗಳನ್ನು ಇತ್ಯರ್ಥ ಮಾಡುವುದೇ ಕಷ್ಟ ಎನಿಸಿರುವಾಗ ಬಗರ್ ಸಮಿತಿಯಲ್ಲಿ ಸಿಂಧು ಆಗದ ರೈತ ಸಂಘದ ಅರ್ಜಿ ಹೇಗೆ ಸಿಂಧು ಮಾಡುವುದು ಎಂಬ ಆಲೋಚನೆ ರೈತರು ಮಾಡಬೇಕು. ತಹಶೀಲ್ದಾರ್ ಅವರ ಕರ್ತವ್ಯ ಮೀರಿ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಸರ್ಕಾರದ ಅರ್ಜಿಗೆ ಹಲವು ನಿಯಮ ಇರುವಾಗ ಖಾಸಗಿ ಸಂಘ ಏನೂ ಮಾಡಲು ಸಾಧ್ಯ ಎಂದು ವಿವರಿಸಿದರು.

Advertisements

ನಂತರ ಪ್ರಾಂತ ರೈತ ಸಂಘದ ಹೆಸರಿನ ದಾಖಲೆ ಇಲ್ಲದ ಅರ್ಜಿ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದಿಂದಲೂ ಬಂದಿದೆ. ವಿಳಾಸ ಇಲ್ಲ. ಹಿಂದೆ ಸಲ್ಲಿಸಿದ್ದ ಅರ್ಜಿ ನಕಲು ಇಲ್ಲ. ಆಧಾರ್ ಕಾರ್ಡ್ ಇಲ್ಲ, ಕೇವಲ ಅರ್ಜಿ ಮುಖ್ಯಮಂತ್ರಿಗೆ ಸಲ್ಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಅರ್ಜಿಗಳನ್ನು ಪ್ರದರ್ಶಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X