ಉಡುಪಿ | ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ – ನಾಗೇಂದ್ರ ಪುತ್ರನ್ ಕೋಟ

Date:

Advertisements

ದೀನ ದಲಿತರು, ಬಡವರು, ಮಧ್ಯಮ ವರ್ಗದವರು ಕಾಂಗ್ರೆಸ್ ಸರ್ಕಾರದಿಂದ ಇವತ್ತು ನೆಮ್ಮದಿಯಿಂದ ಜೀವನ ಸಾಗಿಸುತ್ತಾ ಇದ್ದಾರೆ. ಹಿಂದುಳಿದ ವರ್ಗಗಳ ಯುವಕರು ವಿದ್ಯಾವಂತರಾಗುತ್ತಿದ್ದಾರೆ, ನಿಮ್ಮ ಡೋಂಗಿ ಹಿಂದುತ್ವ ನಂಬಿ ಜೈಲಿಗೆ ಹೋಗುವ ಸಂಖ್ಯೆ ಕಡಿಮೆ ಆಗಿದೆ, ಹಾಗಾಗಿ ಬಿಜೆಪಿಯವರು ಹೊಸ ನಾಟಕದ ಮುಖಾಂತರ ಜನರನ್ನ ಮಂಗ ಮಾಡಲು ಹೊರಟಿರುವಂತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದರು ಅವರು, ಏಪ್ರಿಲ್ 10ನೇ ತಾರೀಕು ಉಡುಪಿಯಲ್ಲಿ ಬಿಜೆಪಿ ಶಾಸಕರು ಮತ್ತು ಬಿಜೆಪಿ ನಾಯಕರಿಂದ ಜನಾಕ್ರೋಶ ಯಾತ್ರೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷ ಏನೆಂದರೆ ಸರಕಾರದ ಭ್ರಷ್ಟಾಚಾರದ ವಿರುದ್ಧ, ರೈತ ವಿರೋಧಿ ವಿರುದ್ಧ, ಬೆಲೆ ಹೆಚ್ಚಳದ ವಿರುದ್ದ ಹೀಗೆ ಬೇರೆ ಬೇರೆ ಅಂತೆ, ನಾನು ಈ ಬಿಜೆಪಿ ಅವರಿಗೆ ಕೇಳುತ್ತೇನೆ ನಿಮಗೆ ಮಾನ ಮರ್ಯಾದೆ ಏನು ಇಲ್ವಾ ನೀವು ಮಾಡಿದ ಭ್ರಷ್ಟಾಚಾರಗಳು ಕರ್ನಾಟಕದ ಎಲ್ಲಾ ಕವಿಗಳು ಬರೆದ ಕಾದಂಬರಿ ಪುಸ್ತಕದ ಪುಟಗಳೇ ಸಾಕುವುದಿಲ್ಲ ಅಷ್ಟೊಂದು ಭ್ರಷ್ಟಾಚಾರ ಮಾಡಿದ ನೀವು ಯಾವ ಮುಖ ಹಿಡಿದುಕೊಂಡು ಜನಕ್ರೋಶ ಯಾತ್ರೆ ಪ್ರತಿಭಟನೆ ಮಾಡುವುದು.

ಅಪ್ಪ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯತ್ನಾಳ್ ಅವರನ್ನು ಪಕ್ಷದಿಂದ ಕಿತ್ತು ಬಿಸಾಡಿ ಈಗ ವಿಜೇಂದ್ರ ಮತ್ತು ಅಪ್ಪ ಮಕ್ಕಳು ಯತ್ನಾಳ್ ವಿರುದ್ಧ ಸಾರಿರುವ ಸಮರವನ್ನು ಮುಚ್ಚಿ ಹಾಕಿಕೊಳ್ಳುವ ಉದ್ದೇಶದಿಂದ ಇಡೀ ರಾಜ್ಯದ್ಯಂತ ಜನಕ್ರೋಶ ಪ್ರತಿಭಟನೆ, ನೀವು ಬಿಜೆಪಿಯವರು ಎಷ್ಟೇ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟರು ಜನ ನಿಮ್ಮನ್ನು ನಂಬುವ ಸ್ಥಿತಿ ಇಲ್ಲ, ಅಣ್ಣಾಮಲೈ ತಮಿಳುನಾಡಿನಲ್ಲಿ ಚಾಟಿಯಲ್ಲಿ ಹೊಡೆದುಕೊಂಡ ಹಾಗೆ ಕರ್ನಾಟಕದಲ್ಲಿ ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡಿ ಜನತೆಯಿಂದ ಚಾಟಿ ಏಟು ಹೊಡೆಸಿ ಕೊಳ್ಳುವುದಂತು ಸತ್ಯ ಸಂಗತಿ.

Advertisements

ಭ್ರಷ್ಟಾಚಾರಿಗಳೇ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದು, ರೈತ ವಿರೋಧಿಗಳೇ ರೈತರ ಪರ ಹೋರಾಟ ಮಾಡುವುದು, ಬೆಲೆ ಏರಿಸಿದವರೇ ಬೆಲೆ ಏರಿಕೆ ವಿರುದ್ಧ ಹೊರಟ ಮಾಡುವುದು, ಇವೆಲ್ಲಾ ನಾಟಕವು ಬಿಜೆಪಿ ಅವರಿಗೆ ಮಾತ್ರ ಸಾಧ್ಯ, ಈ ಭ್ರಷ್ಟ ಬಿಜೆಪಿಯನ್ನು ಯತ್ನಾಳ್ ಅವರು ಕರ್ನಾಟಕ ದಿಂದ ತೊಲಗಿಸುವಂತೆ ಮಾಡಿ “ಬಿಜೆಪಿಯಿಂದ ಕರ್ನಾಟಕ ಬಚಾವೋ ಕಾರ್ಯಕ್ರಮ” ಮಾಡಬೇಕು ಎಂದು ವಿನಂತಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X