ಏಪ್ರಿಲ್ – ದಲಿತ ಇತಿಹಾಸವನ್ನು ಸಂಭ್ರಮಿಸುವ ತಿಂಗಳು

Date:

Advertisements
ಇತಿಹಾಸಕಾರರು ದಲಿತ ಹೋರಾಟಗಾಥೆಗಳನ್ನು ಪ್ರಾಮಾಣಿಕವಾಗಿ ಗಮನಿಸುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿಯಲ್ಲಿ, ಜೀವನದ ವಿವಿಧ ಕ್ಷೇತ್ರಗಳಿಗೆ ದಲಿತರ ಕೊಡುಗೆಗಳನ್ನೂ ಅಳಿಸಿಹಾಕಲಾಗಿದೆ. ತುಳಿತಕ್ಕೊಳಗಾದವರನ್ನು ಇತಿಹಾಸದಿಂದ ಹೊರಗಿಡುವುದು ಮತ್ತು ಅಮಾನ್ಯಗೊಳಿಸುವುದು ಯಾವ ಪ್ರಮಾಣದಲ್ಲಿದೆ ಎಂದರೆ, ಇತಿಹಾಸ ಓದುವ ದಲಿತನೂ ಕೂಡ ಅದನ್ನು ಪರಾಮರ್ಶಿಸಲಾಗುವುದಿಲ್ಲ

ಏಪ್ರಿಲ್ ತಿಂಗಳನ್ನು ದಲಿತ ಇತಿಹಾಸದ ತಿಂಗಳು ಎಂದು ಆಚರಿಸಲಾಗುತ್ತದೆ. “ಒಂದು ಜನಾಂಗಕ್ಕೆ ಇತಿಹಾಸವಿಲ್ಲದಿದ್ದರೆ, ಮೌಲ್ಯಯುತ ಸಂಪ್ರದಾಯವನ್ನು ಹೊಂದಿಲ್ಲದಿದ್ದರೆ, ಅದು ಪ್ರಪಂಚದ ಚಿಂತನೆಯಲ್ಲಿ ನಗಣ್ಯ ಅಂಶವಾಗುತ್ತದೆ. ಆ ಸಮುದಾಯ ನಿರ್ನಾಮವಾಗುವ ಅಪಾಯದಲ್ಲಿರುತ್ತದೆ” ಎಂಬ ಇತಿಹಾಸಕಾರ ಕಾರ್ಟರ್ ಜಿ ವುಡ್ಸನ್ (1926ರಲ್ಲಿ ನೀಗ್ರೋ ಇತಿಹಾಸ ವಾರದ ಆಚರಣೆಗೆ ಒತ್ತುಕೊಟ್ಟವರು) ಅವರ ಮಾತುಗಳ ಸ್ಪೂರ್ತಿ ಮತ್ತು ಅಮೆರಿಕದಲ್ಲಿನ ಫೆಬ್ರವರಿ ಕಪ್ಪು ಇತಿಹಾಸದ ತಿಂಗಳು ಆಚರಣೆಯು ದಲಿತ ಇತಿಹಾಸ ಮಾಸ ಆಚರಣೆಗೆ ಪ್ರೇರಣೆಯಾಗಿವೆ ಎಂದು ಹೇಳಲಾಗಿದೆ.

ಈ ಪ್ರೇರಣೆಯ ನೆಲೆಯಲ್ಲಿ, 2011ರಲ್ಲಿ ತಮಿಳು ದಲಿತ ಕಾರ್ಯಕರ್ತ ಪ್ಯಾರಿ ಚೆಜಿಯಾನ್ ಅವರು, ಏಪ್ರಿಲ್‌ ತಿಂಗಳನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ತಿಂಗಳು ಮತ್ತು ದಲಿತ ಇತಿಹಾಸದ ತಿಂಗಳು ಎಂದು ಆಚರಿಸಲು ಕರೆ ಕರೆನೀಡಿದ್ದರು. ಅವರ ನೇತೃತ್ವದಲ್ಲಿ ದಲಿತ ಹೋರಾಟಗಾರರಾದ ವಿ ಕರುಣಾಕರನ್, ಕ್ರಿಸ್ಟಿನಾ ಥಾಮಸ್ ಧನರಾಜ್, ಆಶಾ ಕೌಟಲ್, ಸಂಘಪಾಲಿ ಅರುಣಾ, ಮನೀಶಾ ದೇವಿ ಮತ್ತು ತೆನ್ಮೋಳಿ ಸೌಂದರರಾಜನ್ ಅವರ ತಂಡವು ಏಪ್ರಿಲ್‌ ತಿಂಗಳನ್ನು ದಲಿತ ಇತಿಹಾಸದ ತಿಂಗಳಾಗಿ ಆಚರಿಸಲು ಆರಂಭಿಸಿತು. ನಂತರ, 2015ರ ವೇಳೆಗೆ ಈ ಆಚರಣೆಯು ವಿಶಾಲವಾಗಿ ಹಬ್ಬಿಕೊಂಡಿತು.

ಭಾರತದಲ್ಲಿ ಐತಿಹಾಸಿಕವಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಹೊರಗುಳಿದ ಸಮುದಾಯವನ್ನು ಮೇಲೆತ್ತಲು ನಡೆದ ಹೋರಾಟಗಳು, ಪ್ರತಿರೋಧ, ಕೆಚ್ಚೆದೆಯಿಂದ ಹೋರಾಡಿದ ವೀರರು/ವೀರ ವನಿತೆಯರ ಕತೆಗಳನ್ನು ಮುನ್ನೆಲೆಗೆ ತರುವುದು, ಅವುಗಳನ್ನು ಜನಮಾನಸದಲ್ಲಿ ಉಳಿಸುವುದು ಈ ಆಚರಣೆಯ ಉದ್ದೇಶ ಮತ್ತು ಗುರಿಯಾಗಿದೆ.

Advertisements

ಹ್ಯೂಮನ್ ರೈಟ್ಸ್ ವಾಚ್ (HRW) 2007ರ ವರದಿಯ ಪ್ರಕಾರ, ಭಾರತದಲ್ಲಿ ದಲಿತರ ಮೇಲಿನ ಧೋರಣೆಯು ‘ಗುಪ್ತ ವರ್ಣಭೇದ ನೀತಿ’ಯಂತಿದೆ. ದಲಿತರು “ವಸತಿ, ಶಾಲೆಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆಯುವಾಗ ಪ್ರತ್ಯೇಕತೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ” ಎಂದು ವರದಿ ಹೇಳಿದೆ. ರಾಷ್ಟ್ರೀಯ ಅಪರಾಧ ಬ್ಯೂರೋದ ದಾಖಲೆಗಳ ಪ್ರಕಾರ, 2020ರಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುದಿವೆ. ಆ ವರ್ಷದಲ್ಲಿ ಒಟ್ಟು 50,291 ಪ್ರಕರಣಗಳು ದಾಖಲಾಗಿವೆ. (ನಂತರದ ವರ್ಷಗಳಲ್ಲಿ ದೌರ್ಜನ್ಯಗಳು ಹೆಚ್ಚಾಗಿವೆ. ಆದರೆ, ನಿಖರ ಅಂಕಿಅಂಶಗಳನ್ನು ಸರ್ಕಾರ ಒದಗಿಸಿಲ್ಲ.)

ಪ್ರಬಲ ಜಾತಿಯ ಹಿಂದುಗಳು ದಲಿತರನ್ನು ಇತಿಹಾಸದುದ್ದಕ್ಕೂ ಕೀಳಾಗಿ ನಡೆಸಿಕೊಂಡಿದ್ದಾರೆ. ಅಂಚಿಗೆ ತಳ್ಳಲ್ಪಟ್ಟವರ ಮೇಲೆ ಹಿಂಸಾಚಾರ, ಅತ್ಯಾಚಾರ, ಕ್ರೂರ ದಬ್ಬಾಳಿಕೆಗಳು, ಶೋಷಣೆಗಳನ್ನು ಎಸಗಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇಂತಹ ಕ್ರೌರ್ಯ, ಹಿಂಸಾಚಾರ ಮತ್ತು ಅವಮಾನಗಳ ವಿರುದ್ದ ಸಿಡಿದೆದ್ದ ದಲಿತರ ವಿರೋಚಿತ ಕತೆಗಳೂ ಇವೆ.

ಅವು ಇತಿಹಾಸದಲ್ಲಿ ಊತುಹೋಗಿವೆ. ಇತಿಹಾಸಕಾರರು ದಲಿತ ಹೋರಾಟಗಾಥೆಗಳನ್ನು ಪ್ರಾಮಾಣಿಕವಾಗಿ ಗಮನಿಸುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿಯಲ್ಲಿ, ಜೀವನದ ವಿವಿಧ ಕ್ಷೇತ್ರಗಳಿಗೆ ದಲಿತರ ಕೊಡುಗೆಗಳನ್ನೂ ಅಳಿಸಿಹಾಕಲಾಗಿದೆ.

ಇತಿಹಾಸಕಾರ ಚಿನ್ನಯ್ಯ ಜಂಗಮ್ ಅವರು ತಮ್ಮ ‘ಎಕನಾಮಿಕ್ ಅಂಡ್ ಪೊಲಿಟಿಕಲ್’ ಲೇಖನದಲ್ಲಿ, ಮೂವರು ದಲಿತ ಕಮ್ಯುನಿಸ್ಟ್ ನಾಯಕರಾದ ನಂಬೂರಿ ಶ್ರೀನಿವಾಸ ರಾವ್, ಬೇತಾಳ ಯೇಸುದಾಸ್ ಮತ್ತು ತುಪಾಕುಲ ಸಿಂಹಾಚಲಂ ಅವರ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ. ಆ ಮೂವರನ್ನು ಸ್ವತಃ ಕಮ್ಯುನಿಸ್ಟರು ಕೂಡ ಮರೆತಿದ್ದಾರೆ ಎಂದು ಜಂಗಮ್ ಹೇಳುತ್ತಾರೆ.

“ದಲಿತರು ಮತ್ತು ಇತರ ತುಳಿತಕ್ಕೊಳಗಾದವರನ್ನು ಇತಿಹಾಸದಿಂದ ಹೊರಗಿಡುವುದು ಮತ್ತು ಅಮಾನ್ಯಗೊಳಿಸುವುದು ಹಿಂದು ಬ್ರಾಹ್ಮಣ ಸಾಹಿತ್ಯ ಮತ್ತು ಚಿತ್ರಣದಲ್ಲಿ ಎಷ್ಟು ತುಂಬಿಹೋಗಿದೆ ಎಂದರೆ, ಅವುಗಳನ್ನು ಓದುವ ದಲಿತನೂ ಕೂಡ ಅದನ್ನು ಪರಾಮರ್ಶಿಸಲಾಗುವುದಿಲ್ಲ” ಎಂದು ಜಂಗಮ್ ಹೇಳುತ್ತಾರೆ.

ಈ ವರದಿ ಓದಿದ್ದೀರಾ?: ಜಾತಿ ದೌರ್ಜನ್ಯ | ಬೈಕ್‌ ಡಿಕ್ಕಿಯಾಗಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ; ಒತ್ತೆಯಾಳಾಗಿ ಇರಿಸಿಕೊಂಡು ದೌರ್ಜನ್ಯ

ಈ ಪ್ರಹಸನವು ಆಶ್ಚರ್ಯಕರವೇನಲ್ಲ. ಏಕೆಂದರೆ, ಸಾಂಸ್ಥಿಕ ಸ್ಥಳಗಳ ಮೇಲಿನ ಸಂಪೂರ್ಣ ಹಿಡಿತವನ್ನು ಸವರ್ಣೀಯರು ಹೊಂದಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ಬರೆಯುವುದು, ಪತ್ರಿಕೆಗಳನ್ನು ಸಂಪಾದಿಸುವುದು, ಸಂಪುಟಗಳನ್ನು ರಚಿಸುವುದು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವುದು ಸವರ್ಣೀಯರು ಮಾತ್ರ.

ದಲಿತ ವಿದ್ವಾಂಸರು ಮತ್ತು ಪತ್ರಕರ್ತರನ್ನು ಐತಿಹಾಸಿಕವಾಗಿ ಈ ಎಲ್ಲ ಹುದ್ದೆಗಳು ಅಥವಾ ಜವಾಬ್ದಾರಿಗಳಿಂದ ದೂರವಿಡಲಾಗಿದೆ. ಆದ್ದರಿಂದ, ಭಾರತದ ಇತಿಹಾಸವು ಬ್ರಾಹ್ಮಣ್ಯ ಮತ್ತು ಸವರ್ಣೀಯರ ಬರವಣಿಗೆ, ಆಲೋಚನೆಗಳ ಉತ್ಪನ್ನವಾಗಿ ಬೆಳೆದುಬಂದಿದೆ.

ಬ್ರಾಹ್ಮಣ ಸವರ್ಣೀಯ ವಿದ್ವಾಂಸರು ತಮಗೆ ಸಂಬಂಧಿಸಿದ ವಿಷಯಗಳು, ಅವರಿಗೆ ಮುಖ್ಯವೆನಿಸುವ ವಿಷಯಗಳು ಹಾಗೂ ತಮ್ಮ ವೃತ್ತಿಯನ್ನು ಮುಂದುವರಿಸಬಹುದಾದ ವಿಷಯಗಳನ್ನು ಮಾತ್ರ ಇತಿಹಾಸದ ಬರವಣಿಗೆಯಲ್ಲಿ ಆಯ್ಕೆ ಮಾಡುತ್ತಾರೆ. ಅವರ ಈ ಆಯ್ಕೆಗಳು ಬಹುಜನರ ಹೋರಾಟಗಳು ಮತ್ತು ಕೊಡುಗೆಗಳನ್ನು ಪರಿಗಣನೆಯಿಂದ ದೂರ ಇಡುತ್ತವೆ. ಹೀಗಾಗಿ, ಮೇಲ್ಜಾತಿ ಆಲೋಚನೆಗಳು ಅಥವಾ ಸಿದ್ಧಾಂತಗಳು ಸತ್ಯದ ರೀತಿಯಲ್ಲಿ ಹೊರಬರುತ್ತವೆ.

ಬಹುಜನರದ್ದು ವಿಶಾಲವಾದ ಜನಸಮೂಹ – ಸಾವಿರಾರು ಜಾತಿಗಳಿಂದ ಮಾಡಲ್ಪಟ್ಟಿದೆ. ದಲಿತ ಇತಿಹಾಸವು ಬ್ರಾಹ್ಮಣವಾದಕ್ಕೆ ಪರ್ಯಾಯ ಇತಿಹಾಸವಾಗಿದೆ. ಇದು ಜಾತಿ, ಲಿಂಗ ಸಮಾನತೆ, ವೈಚಾರಿಕತೆ ಹಾಗೂ ವಿಮರ್ಶಾತ್ಮಕ ವಿಚಾರಣಗಳನ್ನು ಹೊಂದಿದೆ. ಆದ್ದರಿಂದ, ದಲಿತ ಇತಿಹಾಸವೂ ಬಹಳ ವೈವಿಧ್ಯಮಯವಾಗಿರುತ್ತವೆ. ಅವರ ಮೌಖಿಕ ನಿರೂಪಣೆಗಳು, ಜಾನಪದ ಕಥೆಗಳು, ಪುರಾಣಗಳು ಮತ್ತು ಹಾಡುಗಳ ಸಂಘರ್ಷ ಮತ್ತು ಧೀಮಂತ ಇತಿಹಾಸವನ್ನು ಹೊಂದಿವೆ. ಗತಕಾಲದ ಈ ಎಲ್ಲಾ ಇತಿಹಾಸವನ್ನು ಅಗೆದು ಡಿಜಿಟಲ್ ಯುಗದಲ್ಲಿ ದಾಖಲಿಸುವುದು ಬಹುಜನರ ಮುಂದಿರುವ ಸವಾಲಾಗಿದೆ. ಇದನ್ನು ಮಾಡಿದ್ದೇ ಆದಲ್ಲಿ, ಅದು ಸವರ್ಣೀಯ ಇತಿಹಾಸವನ್ನು ಎದುರಿಸಲು ಮತ್ತು ಬಹುಜನರ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಈಗಾಗಲೇ, ವೆಲಿವಾಡ, ರೌಂಡ್ ಟೇಬಲ್ ಇಂಡಿಯಾ ಮತ್ತು ದಲಿತ ಕ್ಯಾಮೆರಾಗಳಂತಹ ಸಂಸ್ಥೆಗಳು ಮತ್ತು ಡಿಜಿಟಲ್ ಮಾಧ್ಯಗಳು ಇಂತಹ ಕೆಲಸಗಳನ್ನು ಮಾಡುವಲ್ಲಿ ನಿರತವಾಗಿವೆ. ಇವು ಬಹುಜನರ ನಿರೂಪಣೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X