ಬೆಂಗಳೂರು ನಗರದಲ್ಲಿ ಭಾನುವಾರ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರಾಮನವಮಿ ಹಬ್ಬದ ಕಾರಣದಿಂದಾಗಿ ನಾಳೆ (ಏಪ್ರಿಲ್ 6) ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಮತ್ತು ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಫೆ.26ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ
ಕುರಿ, ಕೋಳಿ ಸೇರಿದಂತೆ ಯಾವುದೇ ರೀತಿಯ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ಶಿವಮೊಗ್ಗದಲ್ಲಿ ಎರಡು ದಿನಗಳ ಕಾಲ ಮಾಂಸ ಮಾರಾಟ ನಿಷೇಧಿಸಲಾಗಿದೆ. ಏಪ್ರಿಲ್ 6ರಂದು ರಾಮನವಮಿ ಕಾರಣ, ಏಪ್ರಿಲ್ 10ರಂದು ಮಹಾವೀರ ಜಯಂತಿ ಕಾರಣ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.

ಈ ನಿಷೇಧಾಜ್ಞೆ ಮಾಂಸಾಹಾರವನ್ನು ಮೈಲಿಗೆಯಾಗಿ, ಅಪವಿತ್ರವಾಗಿ ಭಾವಿಸುತ್ತದೆ. ಈ ಪರಿಕಲ್ಪನೆ ಜಾತಿ ವ್ಯವಸ್ಥೆಯ ಆಧಾರವೂ ಆಗಿದೆ. ವಿಪರ್ಯಾಸವೆಂದರೆ ಸ್ಟತಹ ಶ್ರೀರಾಮ ಮಾಂಸಾಹಾರಿಯಾಗಿದ್ದ.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಿಗೆ ವ್ಯತ್ಯಾಸವಾದರೂ ಏನು? ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಗರಸಭೆ ಬಿಜೆಪಿಯವರಂತೆಯೇ ಬುಲ್ಲ್ಡೋಜರ್ ಓಡಿಸಿ ಮುಸ್ಲಿಂ ಮನೆಗಳನ್ನು ಧ್ವಂಸ ಮಾಡುತ್ತದೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರಗಳಂತೆಯೇ ದಮನ ಮಾಡುತ್ತದೆ. ಸಿಧ್ಧರಾಮಯ್ಯ ಸರ್ಕಾರ ಈ ವಿಷಯಗಳಲ್ಲಿ ತೆಲಂಗಾಣ, ಮಧ್ಯಪ್ರದೇಶ ಕಾಂಗ್ರೆಸ್ ಗಳ ಜೊತೆ ಪೈಪೋಟಿಯಲ್ಲಿರುವ ಹಾಗೆ ಕಾಣಿಸುತ್ತಿದೆ.
Don’t show finger on others you become pure and i think you are not comparison with lord rama you are not even dust particle before lord Rama otherwise you would not be talking here .please get full information and the. Talk about our sanatana dharma fools like you are letting our Hindu dharma down without knowing proper details.