ಬುದ್ಧ, ಬಸವ, ಅಂಬೇಡ್ಕರ್ ಅವರು ಬೆಳಕು ಮತ್ತು ಜ್ಞಾನದ ಸಂಕೇತ, ಪ್ರತಿಯೊಬ್ಬರು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು, ಬುದ್ಧನ ಶಾಂತಿ, ಬಸವಣ್ಣನವರ ಸಮಾನತೆ, ಅಂಬೇಡ್ಕರ್ ಅವರ ಹೃದಯ ವೈಶಾಲ್ಯತೆ ನಮಗೆ ದಾರಿದೀಪವಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶ್ಯಾಮ ಕಾಳೆ ಹೇಳಿದರು.
ಯಾದಗಿರಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಕದಸಂಸ (ಭೀಮವಾದ) ಸಂಘಟನೆ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯೋತ್ಸದ ಪ್ರಯುಕ್ತ ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶರಣು ಎಸ್. ನಾಟೇಕರ್ ಅವರ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಭೀಮವಾದ ಸಂಘಟನೆಗೆ ಸೇರ್ಪಡೆಯಾದರು. ʼಯಾದಗಿರಿ ಜಿಲ್ಲೆಯಲ್ಲಿ ಸಂಘಟನೆ ಎಲ್ಲಾ ಪದಾಧಿಕಾರಿಗಳಿಗೆ ಸಂಘಟನೆ ಬಲಪಡಿಸಲು ಕೈ ಜೋಡಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಜಾತಿ ಜನಗಣತಿ ಲಕೋಟೆ ಓಪನ್, ಜಾರಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ
ಪ್ರಮುಖರಾದ ಸಿದ್ದು ಪೂಜಾರಿ ಬೆಳಗಾಂ, ಶಿವಶರಣಪ್ಪ ವಾಡಿ, ಮಂಜುಳಾ ಸುರಪುರ, ದಲಿತ ಹಿರಿಯ ಮುಖಂಡರು ಮಲ್ಲಪ್ಪ ಈಟೆ, ಭೀಮರಾಯ ಕಾಗಿ,ಅಂಜು ಯಾದಗಿರಿ, ಖಂಡಪ್ಪ ಸಾಹುಕಾರ್, ಶರಣು ಹಾಲಳ್ಳಿ, ಶರಣು ಮಮ್ಮದರ್, ಗಿರೀಶ್ ಚಟ್ಟೇರಕರ್, ಮಲ್ಲು ನಾಟೇಕರ್, ಸೌಭಾಗ್ಯ, ಗಂಗಮ್ಮ ಸುಂಗಲಕರ್, ಸಾಬಣ್ಣ ಬೇಗರ್, ಭೀಮರಾಯ ಸಿಂದಿಗೇರಿ, ಮಹಾದೇವಪ್ಪ ಗುರುಸುಣಿಗಿ ಬಸವರಾಜ್ ಯಮ್ಮನೂರ್ ಮತ್ತಿತರರಿದ್ದರು.
ವರದಿ : ಗಿರೀಶ್ ಚಟ್ಟೇರಕರ್, ಸಿಟಿಜನ್ ಜರ್ನಲಿಸ್ಟ್