ಉಡುಪಿ | ಕುಂದಾಪುರ ಹಿಂದೂ ಹುಡುಗಿಗೆ ಸಾರ್ವಜನಿಕ ಅವಮಾನ: ಸಿಪಿಎಂ ಖಂಡನೆ

Date:

Advertisements

ಶಿರೂರಿನ ಕೆಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲೆ ರಜಾ ಸಂಧರ್ಭದಲ್ಲಿ ಉಡುಪಿ ಶಾಪಿಂಗ್ ಮುಗಿಸಿ ಬಸ್ಸಿನಲ್ಲಿ ಹಿಂದಿರುಗುವಾಗ ವಿದ್ಯಾರ್ಥಿಗಳ ಗುಂಪಿನಲ್ಲಿರುವ ಓರ್ವ ಹುಡುಗಿ ಹಿಂದೂ ಎಂದು ತಿಳಿದು ಕುಂದಾಪುರದಲ್ಲಿ ಮಹೇಶ್ ಎಂಬ ವ್ಯಕ್ತಿ ಸಾರ್ವಜನಿಕವಾಗಿ ಹಿಂದೂ ಹುಡುಗಿಗೆ ಅವಮಾನ ಮಾಡಿ ನೈತಿಕ ಪೋಲಿಸ್ ಗಿರಿ ಮಾಡಿರುವುದನ್ನು ಸಿಪಿಎಂ ಕುಂದಾಪುರ ತಾಲೂಕು ಸಮಿತಿ ಖಂಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಕಾರ್ಯದರ್ಶಿ ಚಂದ್ರಶೇಖರ ವಿ, ಅನ್ಯ ಧರ್ಮ ಎಂಬ ಕಾರಣಕ್ಕೆ ಒಂದೇ ಊರಿನ ಮಕ್ಕಳು ಒಟ್ಟಿಗೆ ಮಾತಾಡಬಾರದು ಮಾತನಾಡಿದರೆ ಲವ್ ಜಿಹಾದ್ ಎಂಬ ಪಟ್ಟ ಕಟ್ಟಿ ಅವರ ಬದುಕು ಹಾಳು ಮಾಡುವುದು ಸರಿಯಲ್ಲ.ಇಂತಹ ಘಟನೆಗಳು ಸರಿಯಲ್ಲ ಎಂದು ಕಂಡರೆ ಪೋಲಿಸ್ ಇಲಾಖೆ ಮೂಲಕ ಅವರ ಪೋಷಕರ ಜೊತೆ ವ್ಯವಹರಿಸಿ ಸರಿಪಡಿಸಬೇಕೆ ಹೊರತು ಸಾರ್ವಜನಿಕವಾಗಿ ಬೈಗುಳ ,ಹಲ್ಲೆ ಮಾಡುವುದು ಅನಾಗರಿಕ ವರ್ತನೆ ಆಗುತ್ತದೆ ಎಂದು ಹೇಳಿದ್ದಾರೆ.

ಶಾಸಕರು ಪ್ರಬುದ್ಧತೆಯಿಂದ ವರ್ತಿಸಲಿ – ಯಾವುದೇ ಸಾಕ್ಷಿ ಇಲ್ಲದೇ ಕಾಣದ ಶಕ್ತಿಗಳು ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡಲು ಹೊರಟಿದೆ ಎಂದು ಸಮಾಜದ ದಾರಿ ತಪ್ಪಿಸಿ ಅಶಾಂತಿ ಉಂಟು ಮಾಡಲು ಬೈಂದೂರು ಶಾಸಕರು ಹೊರಟಿರುವುದು ಸಮರ್ಥನೀಯವಲ್ಲ, ತಪ್ಪಿತಸ್ಥರನ್ನು ಬೆಂಬಲಿಸಿ ಕಾನೂನು ಕ್ರಮಕ್ಕೆ ಅಡ್ಡಿ ಪಡಿಸುವ ವರ್ತನೆ ಖಂಡನೀಯವಾಗಿದೆ ಶಾಸಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಿಪಿಎಂ ಹೇಳಿದೆ.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಸಿಪಿಎಂ ನವರು ತಮ್ಮ ಹೆಣ್ಣುಮಕ್ಕಳನ್ನ ಬೇಕಾದರೆ ಜೀಹಾಡಿಗಳೊಂದಿಗೆ ಬಿಟ್ಟು ಬಿಡಲಿ ಮತ್ತು ಜೇಹಾದಿಗಳನ್ನ ತಮ್ಮ ಮನೆ ಅಳಿಯರನ್ನಾಗಿ ಮಾಡಿಕೊಳ್ಳಲಿ.ಬೇರೆ ಹಿಂದೂ ಹುಡುಗಿಯರ ಚಿಂತೆ ಉಸಾಬರಿ ಅವರಿಗೆ ಬೇಡ.ಈ ಸಿಪಿಎಂ ನವರಿಗೆ ಉಡುಪಿಯಲ್ಲಿ ಕೋಮಣ ಕೂಡಾ ಇಲ್ಲ….. 😂

  2. BJp yavarenu subhagaralla. Kelavu bjp pakshada/hindu dharma rakshane hone hottavaru muslim huduganannu tamma aliyanannagi madikondiddu na kandiddene.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಪೋಕ್ಸೋ ಪ್ರಕರಣ: ಆರೋಪಿಗಳಿಗೆ ದಂಡ, ತಲಾ ಹತ್ತು ವರ್ಷ ಜೈಲು ಶಿಕ್ಷೆ

ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ...

ಮಂಗಳೂರು | ಅಲ್‌ ವಫಾ ಟ್ರಸ್ಟ್‌ನಿಂದ 15 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ

ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 15 ಜೋಡಿಗಳ ಸರಳ...

ಚಿಕ್ಕಮಗಳೂರು l ಶೋ ರೂಮ್ ಸಿಬ್ಬಂದಿಯಿಂದಲೇ ಡೀಸೆಲ್ ಕಳ್ಳತನ

ಶೋ ರೂಂ ಸಿಬ್ಬಂದಿಯೇ ಹೊಸ ವಾಹನದ ಡೀಸೆಲ್‌ ಕಳ್ಳತನ ಮಾಡಿದ ಘಟನೆ...

ಗದಗ | ಒಳಮೀಸಲಾತಿ ಜಾರಿ, ಬಹುದಿನಗಳ ಕನಸು ನನಸು ಮಾಡಿದ ಎಲ್ಲರಿಗೂ ಅಭಿನಂದನೆ: ಎಸ್. ಎನ್. ಬಳ್ಳಾರಿ

ಪರಿಶಿಷ್ಟ ಜಾತಿಗಳ ಮೂರು ದಶಕಗಳ ಒಳಮೀಸಲಾತಿ ಹೋರಾಟವನ್ನು ಮಾನ್ಯ ಸುಪ್ರೀಂ ಕೋರ್ಟ್...

Download Eedina App Android / iOS

X