‘ನಾನು ಬಿಟ್ಟರೂ, ಈ ಪಾತ್ರ ನನ್ನನ್ನು ಬಿಡುತ್ತಿಲ್ಲ’ ಅಮ್ಮನ ಪಾತ್ರದ ಬಗ್ಗೆ ನಟಿ ಅರ್ಚನಾ ಜೋಯಿಸ್‌

Date:

Advertisements

ಕೆಜಿಎಫ್, ಹೊಂದಿಸಿ ಬರೆಯಿರಿ ಚಿತ್ರಗಳಲ್ಲಿ ನಟಿಸಿ, ಸಿನಿಪ್ರಿಯರ ಮನ ಗೆದ್ದಿರುವ ನಟಿ ಅರ್ಚನಾ ಜೋಯಿಸ್‌ ಅವರು ಸದ್ಯ, ‘ಯುದ್ಧಕಾಂಡ‘ ಸಿನಿಮಾದಲ್ಲಿ ತೊಡಗಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಅರ್ಚನಾ, ‘ನಾನು ಬಿಟ್ಟರೂ, ಈ ಪಾತ್ರ ನನ್ನನ್ನು ಬಿಡಲಿಲ್ಲ. ಅದೊಂದು ಹೋರಾಟದ ಪಾತ್ರ’ ಎಂದಿದ್ದಾರೆ.

ನಟ ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿ, ನಿರ್ಮಾಣ ಮಾಡಿರುವ, ಪವನ್ ಭಟ್ ನಿರ್ದೇಶನದ ಯುದ್ಧಕಾಂಡ ಸಿನಿಮಾ ಏಪ್ರಿಲ್ 18ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ನಟಿ ಅರ್ಚನಾ ಜೋಯಿಸ್ ಅವರು ‘ನಿವೇದಿತಾ’ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೂ ಭಾವನಾತ್ಮಕತೆಯನ್ನು ಹೊಂದಿರುವ ಪಾತ್ರವಾಗಿದ್ದು, ತಮ್ಮನ್ನು ಗಾಢವಾಗಿ ಕಾಡಿದೆ. ಸಿನಿಮಾ ಮತ್ತು ತಮ್ಮ ಪಾತ್ರವು ಸಮಾಜದಲ್ಲಿ ಜಾಗೃತಿ ಮೂಡಿಸುವ ನೆಲೆಯನ್ನು ಒಳಗೊಂಡಿದೆ ಎಂದು ಅರ್ಚನಾ ಹೇಳಿಕೊಂಡಿದ್ದಾರೆ.

“ಕೆಜಿಎಫ್‌ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನನಗೆ ಅಮ್ಮನ ಪಾತ್ರಗಳೇ ಹೆಚ್ಚಾಗಿ ಬರುತ್ತಿದ್ದವು. ಯುದ್ಧಕಾಂಡ ಸಿನಿಮಾದಲ್ಲಿಯೇ ಅಮ್ಮನದ್ದೇ ಪಾತ್ರ ಎಂದಿದ್ದಾಗ, ಚಿತ್ರತಂಡದ ಭಾಗವಾಗಲು ನಿರಾಕರಿಸಿದ್ದೆ. ಆದರೆ, ಅಜಯ್ ರಾವ್ ಅವರು ನಾಯಕ ನಟಿಯ ಪಾತ್ರ ಎಂದು ಹೇಳಿದರು. ಬಳಿಕ, ಸಿನಿಮಾ ಮಾಡಲು ಒಪ್ಪಿಕೊಂಡೆ. ನಿರ್ದೇಶಕ ಪವನ್ ಅವರು ಕತೆ ಹೇಳಿದ ಮೇಲಂತೂ ನಾಯಕ ನಟಿ ಪಾತ್ರಕ್ಕಿಂತ ನಿವೇದಿತಾ ಪಾತ್ರವೇ ಹೆಚ್ಚು ಕಾಡಿತು. ಆ ಪಾತ್ರವು ತೂಕಭರತವಾದದ್ದು. ಹೀಗಾಗಿ, ಆ ಪಾತ್ರವನ್ನೇ ಆಯ್ದುಕೊಂಡೆ” ಎಂದು ಹೇಳಿದ್ದಾರೆ.

Advertisements

“ನಿವೇದಿತಾ ಪಾತ್ರಕ್ಕೆ ಬಹಳಷ್ಟು ಗಂಭೀರತೆ ಇದೆ. ರೋಷ, ಆಕ್ರೋಶ, ಹೋರಾಟದ ಪಾತ್ರವದು. ಪಾತ್ರದಲ್ಲಿ ಭಾವನಾತ್ಮಕ ಅಂಶಗಳಿವೆ. ಹೀಗಾಗಿ, ನಿವೇದಿತಾ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡ ಬಳಿಕ, ಪಾತ್ರದಲ್ಲಿನ ಹಾವ, ಭಾವ, ನಡವಳಿಕೆಗಳ ತಯಾರಿಗಾಗಿ ಮನಶಾಸ್ತ್ರಜ್ಞರ ಸಲಹೆಯನ್ನೂ ಪಡೆದುಕೊಂಡೆ. ಒಂದಷ್ಟು ತಯಾರಿಗಳನ್ನು ನಡೆಸಿದೆ” ಎಂದು ಅವರು ಹೇಳಿದ್ದಾರೆ.

ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ ಮತ್ತು ಅವುಗಳ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ಕತೆಗಳಿರುವ ಹಲವಾರು ಸಿನಿಮಾಗಳು ಈಗಾಗಲೇ ಬಂದಿವೆ. ಆದರೂ, ಯುದ್ಧಕಾಂಡ ಸಿನಿಮಾ ವಿಭಿನ್ನದೆ. ಸಿನಿಮಾದಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ ನ್ಯಾಯಕ್ಕಾಗಿ ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಸಾರವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಿನಿಮಾದಲ್ಲಿ ನಟ ಅಜಯ್ ರಾವ್‌ ಅವರು ವಕೀಲನಾಗಿ ಅಭಿನಯಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X