ಬೀದರ್‌ | ವಚನಕಾರರ ಬದುಕು-ಬರಹ ಆದರ್ಶ : ಕಾವ್ಯಶ್ರೀ ಮಹಾಗಾಂವಕರ್

Date:

Advertisements

ಸಮಾಜಕ್ಕೆ ವಚನಕಾರರ ಬದುಕು-ಬರಹ ಆದರ್ಶವಾಗಿದೆ. ವಚನಗಳ ಮೂಲಕ ಲೋಕಕ್ಕೆ ಕರ್ಪೂರದ ಸುಂಗಧ ದ್ರವ್ಯ ಬೀರಿ ಮರೆಯಾದರು ಎಂದು ಡಾ.ಕಾವ್ಯಶ್ರೀ ಮಹಾಗಾಂವಕರ ನುಡಿದರು.

ವಚನಾಮೃತ ಕನ್ನಡ ಸಂಘ ಹಾಗೂ ಪ್ರೊ.ಬಿ.ಜಿ.ಮೂಲಿಮನಿ ಫೌಂಡೇಶನ್ ಸಹಯೋಗದಲ್ಲಿ ಗುರುವಾರ ಸಂಜೆ ಆಯೋಜಿಸಿದ ಶಿವಶರಣೆಯರಾದ ಅಕ್ಕಾನಾಗಮ್ಮ ಹಾಗೂ ಮುಕ್ತಾಯಕ್ಕ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಡಾ.ರಾಮಚಂದ್ರ ಗಣಾಪೂರ ಅವರು ಶರಣೆ ಅಕ್ಕನಾಗಮ್ಮನವರ ಕುರಿತು ಉಪನ್ಯಾಸ ನೀಡಿ, ʼಬಸವಣ್ಣವರ ಹಿರಿಯ ಸಹೋದರಿ ಅಕ್ಕನಾಗಮ್ಮ ಅವರು ಬರೆದ ಮೌಲಿಕವಾದ 15 ವಚನಗಳು ಲಭ್ಯವಾಗಿವೆ. ʼಬಸವಣ್ಣಪ್ರಿಯ ಚೆನ್ನಸಂಗಯ್ಯʼ ಎಂಬ ಕಾವ್ಯನಾಮದಿಂದ ಬರೆದ ವಚನಗಳು ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾಗಿವೆ. ಚೆನ್ನಬಸವಣ್ಣನವರಂತಹ ಮಗನನ್ನು ಹೆತ್ತ ಈ ತಾಯಿ ಮಗನಿಗೆ ಒಳ್ಳೆಯ ಸಂಸ್ಕಾರ ನೀಡಿ ಜ್ಞಾನದ ಖಣಿಯಾಗಿ ಬೆಳೆಸಿದರುʼ ಎಂದು ನುಡಿದರು.

ಶಿವಶರಣೆ ಮುಕ್ತಾಯಕ್ಕ ಕುರಿತು ಉಪನ್ಯಾಸ ನೀಡಿದ ಸೂರ್ಯಕಲಾ ಹೊಡಮನಿ ಮಾತನಾಡಿ, ʼಮುಕ್ತಾಯಕ್ಕ ಅವರು ʼಅಜಗಣ್ಣ ತಂದೆʼ ವಚನಾಂಕಿತ ಇಟ್ಟುಕೊಂಡು 36 ವಚನಗಳನ್ನು ರಚಿಸಿದ್ದಾರೆ. ಮುಕ್ತಾಯಕ್ಕ ಅವರು ʼಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಎಂಬ ವಚನದಲ್ಲಿ ʼಕಾಯಕ ತತ್ವʼ ಕುರಿತು ತಿಳಿಸಿದ್ದಾರೆʼ ಎಂದರು.

WhatsApp Image 2025 04 12 at 8.44.11 AM
ಸಾಹಿತಿ ಡಾ.ರಾಮಚಂದ್ರ ಗಣಾಪೂರ ಅವರು ಶರಣೆ ಅಕ್ಕನಾಗಮ್ಮನವರ ಕುರಿತು ಉಪನ್ಯಾಸ ನೀಡಿದರು.

ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಕೆ.ಸತ್ಯಮೂರ್ತಿ ಮಾತನಾಡಿ, ʼಕನ್ನಡ ಭಾಷೆ, ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಬೆಳವಣಿಗೆಗೆ ನಾವೆಲ್ಲರೂ ಇನ್ನೂ ಬಹಳಷ್ಟು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆʼ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ʼಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ವಚನ ಚಳವಳಿ ನಡೆಸಿದ ವಚನಕಾರರ ಬದುಕು-ಬರಹ ಕುರಿತು ನಾವೆಲ್ಲರೂ ತಿಳಿದುಕೊಳ್ಳುವುದು ತುಂಬಾ ಅವಶ್ಯಕತೆ ಇದೆʼ ಎಂದು ಹೇಳಿದರು.

Advertisements

ಶಿವಲಿಂಗಪ್ಪ ಜಲಾದೆ ಅವರು ಮೂಲಿಮನಿ ಫೌಂಡೇಶನ್ ಸ್ಥಾಪನೆ ಉದ್ದೇಶ ಕುರಿತು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸಂವಿಧಾನ ಮೇಲೆ ಬೆಳಕು ಚೆಲ್ಲುವ ʼಭಾಗ್ಯವಿದಾತʼ ಕೃತಿ : ಧನರಾಜ ತುಡಮೆ

ಪ್ರವೀಣ ಮ್ಯೂಜಿಕ್ ಅಕಾಡೆಮಿಯ ಮಕ್ಕಳು ನಾಡಗೀತೆ ಹಾಡಿದರು.‌ ಹಿರಿಯ ಕಲಾವಿದ ಶಂಭುಲಿಂಗ ವಾಲದೊಡ್ಡಿ ಹಾಗೂ ಶ್ರೀಕಾಂತ ಬಿರಾದಾರ ಅವರು ವಚನ ಗಾಯನ ನಡೆಸಿಕೊಟ್ಟರು. ಬಸವರಾಜ ಮೂಲಗೆ ನಿರೂಪಿಸಿದರು, ಬಸವರಾಜ ಬಿರಾದಾರ ಸ್ವಾಗತಿಸಿದರು. ಸಂತೋಷ ಮಂಗಳೂರೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X