ಧಾರವಾಡ | ದಾರಿ ತಪ್ಪಿದ ಯುವಕರಿಗೆ ಜೈಭೀಮ್ ಘೋಷಣೆ ಮಾರ್ಗದರ್ಶಿಯಾಗಲಿ: ಶಂಕರ್ ಹಲಗತ್ತಿ

Date:

Advertisements

ಜಿಲ್ಲಾ ಸಂವಿಧಾನ ಸಂರಕ್ಷಕರ ಪಡೆ ವತಿಯಿಂದ ದಾವಣಗೆರೆ ‌ಮತ್ತು ಧಾರವಾಡ ನಗರದಲ್ಲಿ ಸಂವಿಧಾನ ಸಂರಕ್ಷಕರ ಬೃಹತ್ ಸಮಾವೇಶದ ಅರ್ಥಾತ್ ಭೀಮೋತ್ಸವ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯು ಏ.15ರಂದು ಸಾಯಂಕಾಲ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರ ಮತ್ತು ಈದಿನ.ಕಾಂ ಹೊರತಂದಿರುವ ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ಮಾತನಾಡಿ, ಇತ್ತೀಚೆಗೆ ಯುವಕರು ದಾರಿ ತಪ್ಪುತ್ತಿದ್ದು, ಸರಿಯಾದ ಹಾದಿ ತೋರುವವರಿಲ್ಲದೆ ಇತ್ತ ಜೈಭೀಮ್ ಹೇಳಿ ಅತ್ತ ಜೈಶ್ರೀರಾಮ್ ಹೇಳುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಬಿಡಿಸಿ ತಳ ಸಮುದಾಯಗಳು ಮತ್ತು ಅಲ್ಪಸಂಖ್ಯಾತರು ಎಲ್ಲರೂ ಒಂದಾಗಿ ಹೆಜ್ಜೆ ಹಾಕಬೇಕು. ಜೈಭೀಮ್ ಎಂಬುದೊಂದೇ ಅವರು ಸರಿದಾರಿಗೆ ಬರಲು ಸೂಕ್ತ ಹಾದಿ. ಇನ್ನು ಆಡಳಿತ ಪಕ್ಷವು ತಪ್ಪು ಮಾಡಿದಾಗ ತಿದ್ದಿ‌ ಬುದ್ಧಿ ಹೇಳುವ ಕೆಲಸವನ್ನು ಪ್ರಜ್ಞಾವಂತರು ಮಾಡಬೇಕಿದೆ ಎಂದರು.

ಸಭೆಯಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ನೂರ್‌ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದೆಲ್ಲೆಡೆ ಇಂದು ನಾನಾ ರೂಪದ ಚಳುವಳಿಗಳು ಹುಟ್ಟಿಕೊಂಡಿವೆ. ಸಮಾಜದಲ್ಲಿ ಸಾಮರಸ್ಯವನ್ನು ಜೀವಂತವಾಗಿರಿಸಲು ನಾವೆಲ್ಲ ಮುಂದಾಗಬೇಕಿದೆ. ದೇಶದಲ್ಲಿ ಕಾರ್ಪೊರೇಟ್ ಅಜೆಂಡಾ ಮುನ್ನುಗ್ಗುತ್ತಿದೆ. ಹೀಗಾಗಿ ನಾವು ಜಾಗೃತರಾಗಬೇಕು. ಒಡೆದ ಮನಸ್ಸುಗಳ ಕಟ್ಟಲು ಎಲ್ಲ ಜಾತಿ ಸಮುದಾಯ ಒಳಗೊಂಡು ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು. ಸಮಾಜದಲ್ಲಿ ವಿಷವನ್ನು ಬಿತ್ತಿದ್ದಾರೆ. ನಾವು ಸೌಹಾರ್ದತೆಯ ಬಿತ್ತುತ್ತ ಸಾಗೋಣ ಎಂದರು.

Advertisements

ಸಭೆಯಲ್ಲಿ ಡಾ. ಇಸಾಬೆಲಾ ಝೆವಿಯರ್ ಮಾತನಾಡಿ, ಏ. 26ರಂದು ದಾವಣಗೆರೆಯಲ್ಲಿ ನಡೆಯುವ ಸಂವಿಧಾನ ಸಂರಕ್ಷಕರ ಬೃಹತ್ ಸಮಾವೇಶದ ಕುರಿತು ವಿವರಿಸಿದರು. ವಕೀಲ ಮುಸ್ತಾಕ‌ಅಹಮ್ಮದ್ ಹಾವೇರಿಪೇಠ ಮಾತನಾಡಿ, ನಾವೆಲ್ಲ ತಳಮಟ್ಟದಿಂದ ಸಂಘಟನಾತ್ಮಕವಾಗಿ ಸಾಗಿದರೆ ಮಾತ್ರ ಉಳಿಯುತ್ತೇವೆ. ಅದನ್ನು ಬಿಟ್ಟು ಭಿನ್ನಾಭಿಪ್ರಾಯದಿಂದ ಕೂಡ್ರುವುದು ಸರಿ ಹೊಂದುವುದಿಲ್ಲ ಎಂದರು. ಉತ್ತರ ಕರ್ನಾಟಕ ಹೋರಾಟ ಸಮಿತಿಯ ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮತ್ತು ಜಾಗತಿಕ‌ ಲಿಂಗಾಯತ ಮಹಾಸಭಾದ ಸಿ ಜಿ ಪಾಟೀಲ ವೇದಿಕೆ ಮೇಲಿದ್ದರು.

ಧಾರವಾಡದಲ್ಲಿ ಏ.20ಕ್ಕೆ ನಡೆಯಬೇಕಿದ್ದ ಭೀಮೋತ್ಸವ ಕಾರ್ಯಕ್ರಮವನ್ನು ಮುಂಬರುವ ಏ.27ಕ್ಕೆ ಮುಂದೂಡಲಾಗಿದೆ.‌ ಮತ್ತು ದಾವಣಗೆರೆ ಸಮಾವೇಶದ ಕುರಿತು ವಿವಿಧ ಸಮುದಾಯದ ಮುಖಂಡರು, ಸಂಘಟಕರು ಚರ್ಚಿಸಿದರು.

ಸಭೆಯಲ್ಲಿ ಅತಿಕ್ ಅಹೆಮ್ಮದ್, ಮಾರ್ತಾಂಡಪ್ಪ ಕತ್ತಿ, ಮಹಮ್ಮದ್‌ಅಲಿ ಗುಡೂಭಾಯಿ, ನಾಗರಾಜ ಅಂಬಣ್ಣವರ, ಎಮ್ ಕೆ ನದಾಫ್, ಇಕ್ಬಾಲ್ಅಹ್ಮದ್ ಎಲ್ಲ ಸಮುದಾಯದ ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X