ಗದಗ | ಬೇಂದ್ರೆ ಅವರ ಆಳವಾದ ಸಾಹಿತ್ಯವನ್ನು ಕೀರ್ತಿನಾಥ ಕುರ್ತಕೋಟಿ ಅವರು ಅಧ್ಯಯನ ಮಾಡಿದ್ದರು: ದತ್ತಪ್ರಸನ್ನ ಪಾಟೀಲ

Date:

Advertisements

“ಕುವೆಂಪು ಅವರ ಸಾಹಿತ್ಯವನ್ನು ಕುರಿತು ಕೀರ್ತಿನಾಥ ಕುರ್ತಕೋಟಿ ಅವರು ವಿಮರ್ಶ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಬೇಂದ್ರೆ ಅವರ ಆಳವಾದ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದರು. ಶಂಕರ ಮೋಕಾಶಿ ಪುಣೆಕರ, ಗಿರೀಶ್ ಕಾರ್ನಾಡ ಇನ್ನೂ ಸಮಕಾಲೀನರು ಸೇರಿ ಚರ್ಚೆ ಮಾಡುತ್ತಿದ್ದರು. ಕುರ್ತಕೋಟಿ ಅವರ ವಿಮರ್ಶ ಕೃತಿಗಳನ್ನು ಮನೋಹರ ಗ್ರಂಥಾಮಾಲ ಪ್ರಕಾಶನದಿಂದ ಪ್ರಕಟಿಸಿದೆ” ಎಂದು ವಿಚಾರ ಗೋಷ್ಠಿಯಲ್ಲಿ ಉಪನ್ಯಾಸಕರು ದತ್ತಪ್ರಸನ್ನ ಪಾಟೀಲ ಹೇಳಿದರು.

ಗದಗ ಜಿಲ್ಲೆಯ ಗದಗ ತಾಲ್ಲೂಕು ಕುರ್ತಕೋಟಿ ಗ್ರಾಮದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

“ಬೇಂದ್ರೆ ಅವರ ಕವನ ಸಂಕಲನಗಳು ಒಂದು ವೇಳೆ ಕಳೆದುಹೋದರೆ ಮತ್ತೆ ಕೀರ್ತಿನಾಥ ಕುರ್ತಕೋಟಿ ಅವರ ನಾಲಿಗೆಯಿಂದ ಮತ್ತೆ ಮರು ಸೃಷ್ಟಿಸಬಹುದು. ಅಷ್ಟು ಕುರ್ತಕೋಟಿಯವರು ನೆನಪಿನ ಶಕ್ತಿ ಹೊಂದಿದ್ದರು” ಎಂದು ಹೇಳಿದರು.

Advertisements

“ಸೃಜನಶೀಲ ವಿಮರ್ಶಕರು ಹೇಗಿರುತ್ತರೆಂದರೆ ಸೃಜನಶೀಲ ಕವಿ ಬರೆದ ಕವಿತೆ ಅರ್ಥವನ್ನು ಗ್ರಹಿಸುವಂತೆ ಕೀರ್ತಿನಾಥ ಕುರ್ತಕೋಟಿ ಅವರು ಇದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಒಟ್ಟು 49 ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ” ಎಂದು ಹೇಳಿದರು.

ಆಧುನಿಕ ಕನ್ನಡ ಸಾಹಿತ್ಯಕ್ಕೆ ಗದಗ ತಾಲೂಕಿನ ಕೊಡುಗೆ ವಿಷಯದ ಕುರಿತು ಡಾ. ಶರಣಬಸವ ವೆಂಕಟಾಪುರ ಅವರು ಉಪನ್ಯಾಸ ನೀಡಿದರು.

ಈ ಸುದ್ದಿ ಓದಿದ್ದೀರಾ? ಗದಗ | ಇಂಗ್ಲಿಷ್ ಪರಿಪೂರ್ಣ ಭಾಷೆ ಅಲ್ಲ, ಕನ್ನಡ ಪರಿಪೂರ್ಣ ಭಾಷೆಯಾಗಿದೆ: ಕಸಾಪ ಅಧ್ಯಕ್ಷ ಮಹೇಶ ಜೋಶಿ

ವಿಚಾರ ಗೋಷ್ಠಿಯ   ದ ಸಾ ಪ ರಾಜ್ಯಾಧ್ಯಕ್ಷರು ಡಾ. ಅರ್ಜುನ ಗೋಳಸಂಗಿ ಅಧ್ಯಕ್ಷತೆ ಮಾತುಗಳನ್ನಾಡಿದರು. ಉಪನ್ಯಾಸಕರು ಡಾ. ವಾಯ್. ಆರ್. ಬೇಲೆರಿ ಅವರು ಆಶಯ ನುಡಿಗಳನ್ನಾಡಿದರು. ಎಸ್ ಪಿ ಪ್ರಭಯನಮಠ, ಡಿ. ಕೆ. ಹಂಚಿನಾಳ, ಸಿದ್ದಲಿಂಗೇಶ ಸಜ್ಜನಶೆಟ್ಟರ, ಸಂಗಪ್ಪ ಬ್ಯಾಹಟ್ಟಿ, ಶಕುಂತಲಾ ಸಿಂಧೂರ, ಚನ್ನವೀರ ಶಾಸ್ತ್ರಿಗಳು ಕಡಣಿ, ರಾಜಶೇಖರ್ ದಾನರೆಡ್ಡಿ, ಬಸವರಾಜ ಗಣಪ್ಪನವರ, ಗಂಗೂಬಾಯಿ ಪವಾರ ಹಾಗೂ ಎನ್. ವಾಯ್. ಕಾಳಿ ಅವರು ಗೌರವ ಉಪಸ್ಥಿತರಿದ್ದರು

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X