ಮಹಿಳೆ ಗಂಡನ ಆಸ್ತಿಯಲ್ಲ: ದ್ರೌಪದಿಯನ್ನು ಉಲ್ಲೇಖಿಸಿದ ದೆಹಲಿ ಹೈಕೋರ್ಟ್

Date:

Advertisements

ಮಹಾಭಾರತದಲ್ಲಿ ದ್ರೌಪದಿಯನ್ನು ನಡೆಸಿಕೊಂಡ ರೀತಿಯನ್ನು ಉಲ್ಲೇಖಿಸುವ ದೆಹಲಿ ಹೈಕೋರ್ಟ್, ಮಹಿಳೆ ಗಂಡನ ಆಸ್ತಿಯಲ್ಲ ಎಂದಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497ರ ನಿಬಂಧನೆಯ ಅಡಿಯಲ್ಲಿ ವ್ಯಭಿಚಾರದ ಆರೋಪಗಳನ್ನು ಒಳಗೊಂಡ 2010ರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ.

ಏಪ್ರಿಲ್ 17ರಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. “ಮಹಾಭಾರತದಲ್ಲಿ ದ್ರೌಪದಿಯನ್ನು ನಡೆಸಿಕೊಂಡ ರೀತಿ ಮತ್ತು ನಂತರದ ಪರಿಣಾಮಗಳನ್ನು ವಿವರಿಸಲಾಗಿದೆ. ಆದರೂ ಸ್ತ್ರೀದ್ವೇಷಿ ಮತ್ತು ಪಿತೃಪ್ರಧಾನ ಮನಸ್ಥಿತಿಯುಳ್ಳ ಸಮಾಜವು ಮಹಿಳೆಯರನ್ನು ತಮ್ಮ ಆಸ್ತಿ ಎಂಬಂತೆ ಕಾಣುತ್ತಾರೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಪ್ರತಿಭಟನೆ ಆಯೋಜನೆ ಮಾತ್ರಕ್ಕೆ ಯುಎಪಿಎ ದಾಖಲಿಸಬಹುದಾ?: ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ

Advertisements

“ಮಹಿಳೆಯನ್ನು ಗಂಡನ ಆಸ್ತಿ ಎಂದು ಪರಿಗಣಿಸುವುದರ ವಿನಾಶಕಾರಿ ಪರಿಣಾಮಗಳನ್ನು ಮಹಾಭಾರತದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಮಹಾಭಾರತದಲ್ಲಿ ದ್ರೌಪದಿಯನ್ನು ಅವಳ ಸ್ವಂತ ಪತಿ ಯುಧಿಷ್ಠಿರನು ಜೂಜಾಟದಲ್ಲಿ ಪಣಕ್ಕಿಟ್ಟನು. ಆಕೆಯ ಪತಿಯಂದಿರೇ ಆದ ಯುಧಿಷ್ಠಿರನ ನಾಲ್ವರು ಸಹೋದರರು ಮೂಕ ಪ್ರೇಕ್ಷಕರಾಗಿದ್ದರು. ದ್ರೌಪದಿ ತನ್ನ ಘನತೆಗಾಗಿ ಪ್ರತಿಭಟಿಸುವ ಯಾವುದೇ ಧ್ವನಿ ಇರಲಿಲ್ಲ. ಜೂಜಾಟದಲ್ಲಿ ಪಾಂಡವರು ಸೋತ ಬಳಿಕ ಮಹಾಭಾರತದ ಮಹಾ ಯುದ್ಧವಾಗಿದ್ದು, ಸಾಮೂಹಿಕ ಜೀವಹಾನಿ ಮತ್ತು ಕುಟುಂಬದ ಅನೇಕ ಸದಸ್ಯರು ನಾಶವಾಗಬೇಕಾಯಿತು” ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಅವರು ವಿವರಿಸಿದ್ದಾರೆ.

“ಮಹಿಳೆಯನ್ನು ಆಸ್ತಿಯಾಗಿ ಪರಿಗಣಿಸುವುದರಿಂದಾಗುವ ಪರಿಣಾಮಗಳ ಬಗ್ಗೆ ಉದಾಹರಣೆಗಳಿದ್ದರೂ ಕೂಡಾ ಜೋಸೆಫ್ ಶೈನ್ (ಸುಪ್ರಾ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 497 ಐಪಿಸಿಯನ್ನು ಸಂವಿಧಾನಬಾಹಿರವೆಂದು ಘೋಷಿಸಿದಾಗ ಮಾತ್ರ ನಮ್ಮ ಸಮಾಜದ ಸ್ತ್ರೀದ್ವೇಷಿ ಮನಸ್ಥಿತಿ ಇದನ್ನು ಅರ್ಥಮಾಡಿಕೊಂಡಿತು” ಎಂದು ನ್ಯಾಯಾಲಯ ಹೇಳಿದೆ.

Justice Neena Bansal Krishna
Justice Neena Bansal Krishna (Bar and Bench Photo)

ಐಪಿಸಿಯ ಸೆಕ್ಷನ್ 497 ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಶೇಷ ಹಕ್ಕನ್ನು ನೀಡುತ್ತದೆ. ವ್ಯಭಿಚಾರದ ಆಧಾರದ ಮೇಲೆ ಪತಿ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ಮಹಿಳೆಯರನ್ನು ಆಸ್ತಿಯಂತೆ ಕಂಡಂತಾಗುತ್ತದೆ ಎಂದು ಐಪಿಸಿಯ ಸೆಕ್ಷನ್ 497 ಅನ್ನು 2018ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನಬಾಹಿರ ಎಂದು ಘೋಷಿಸಿದೆ.

ಹಲವು ಪ್ರಕರಣಗಳಲ್ಲಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆದೇಶಗಳು ಹೊರಬೀಳುತ್ತಿರುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ನ ಈ ಆದೇಶ ಮಹತ್ವವನ್ನು ಪಡೆದಿದೆ. ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ತನ್ನ ಹಲವು ಆದೇಶಗಳನ್ನು ಮಹಿಳಾ ವಿರೋಧಿ ನೆಲೆಯಲ್ಲಿ ನೀಡಿ ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಮುಖ್ಯವಾಗಿ ಸ್ತನ ಮುಟ್ಟುವುದು ಅತ್ಯಾಚಾರವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ಆದೇಶವು ತೀವ್ರ ಟೀಕೆಗೆ ಗುರಿಯಾಗಿತ್ತು. ಇವೆಲ್ಲವುದರ ನಡುವೆ ಮಹಿಳೆಯರನ್ನು ತನ್ನ ಆಸ್ತಿಯಾಗಿ ಕಾಣುವ ಪುರುಷ ಪ್ರಧಾನ ಸಮಾಜದ ಮನಸ್ಥಿತಿಯ ವಿರುದ್ಧವಾಗಿ ಸಂವಿಧಾನಬದ್ಧ ನೆಲೆಗಟ್ಟಿನಲ್ಲಿ ದೆಹಲಿ ಹೈಕೋರ್ಟ್‌ ನ್ಯಾಯಾಧೀಶೆ ನೀನಾ ಬನ್ಸಾಲ್ ನೀಡಿರುವ ಹೇಳಿಕೆಯು ಸ್ವಾಗತಾರ್ಹ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X