ತೆಂಗಿನ ಮರಕ್ಕೆ ಸಿಡಿಲು ಬಿದ್ದು ಅದರ ಪಕ್ಕದಲ್ಲಿದ್ದ ಬೊಲೆರೋ ವಾಹನಕ್ಕೆ ಬೆಂಕಿ ಕಿಡಿ ಬಿದ್ದು ವಾಹನ ಭಸ್ಮವಾದ ಘಟನೆ ದೇವದುರ್ಗ ತಾಲ್ಲೂಕು ಗಾಣದಾಳ ಗ್ರಾಮದ ಜಮೀನನೊಂದರಲ್ಲಿ ನಡೆದಿದೆ.
ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ ಸೇರಿದ ವಾಹನ ಸುಟ್ಟು ಕರಕಲಾಗಿದೆ.
ನಿನ್ನೆ ಸಂಜೆ ಧಾರಾಕಾರ ಮಳೆ ಪ್ರಾರಂಭವಾಗಿದೆ. ತೆಂಗಿನಮರದ ಕೆಳಗೆ ವಾಹನವು ನಿಲ್ಲಿಸಲಾಗಿತ್ತು.ಸಿಡಿಲು ತೆಂಗಿನ ಮರಕ್ಕೆ ಬಿದ್ದಿದೆ ,ಅದರ ಬೆಂಕಿ ಕಿಡಿ ಹುಲ್ಲು ಬಣವಿಗೆ ಹಾಗೂ ವಾಹನಕ್ಕೆ ಬಿದ್ದು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಳಿ ಮಳೆಗೆ ಟಿನ್ ಶೆಡ್ ಹಾರಾಟ ; ಅಸ್ತವ್ಯಸ್ತ
ವಾಹನದ ಪಕ್ಕದಲ್ಲಿದ್ದ ಶ್ರೀಧರ, ಪ್ರವೀಣ, ಹನುಮಂತಿ, ಲಕ್ಷ್ಮೀ, ಗೋಪಾಲನಾಯಕ, ಬಸವರಾಜ, ಹನುಮಗೌಡ ಎಂಬುವವರಿಗೂ ತಗುಲಿದ ಶಂಕೆ ವ್ಯಕ್ತವಾಗಿದೆ.
ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
