ಉಡುಪಿ | ಬುಲ್ಡೋಜರ್ ಮೂಲಕ ಮನೆ ಧ್ವಂಸ ಪ್ರಕರಣ, ಆರೋಪಿಗಳ ವಿರುದ್ಧ ಕೊನೆಗೂ FIR ದಾಖಲು

Date:

Advertisements

ಕೊಲ್ಲೂರು ಬಡ ವಿಧವೆ ಕೊರಗ ಸಮುದಾಯಕ್ಕೆ ಸೇರಿದ ಗಂಗಾ ಕೊರಗ ಅವರ ವಾಸ್ತವ್ಯದ ಮನೆಯನ್ನು ಕರುಣೆಯಿಲ್ಲದ ಸ್ಥಳೀಯ ಜಗದಂಬಾ ಟ್ರಸ್ಟ್ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿತ್ತು.

ಈ ಪ್ರಕರಣದಲ್ಲಿ ಆರೋಪಿಗಳು ತಪ್ಪು ಮಾಹಿತಿ ನೀಡಿ,ನ್ಯಾಯಾಲಯದಿಂದ ಆದೇಶ ಪಡೆದದ್ದರಿಂದ ಪೊಲೀಸರು,ಜಿಲ್ಲಾಡಳಿತ ಮತ್ತು ಸಂಘಟನೆಗೆ ಆರೋಪಿಗಳ ಕೃತ್ಯ ನಿಜವಾಗಿಯೂ ಅಪರಾಧ ಎಂದು ತಿಳಿದಿದ್ದರೂ ಕಾನೂನು ಪ್ರಕ್ರಿಯೆಗಳ ಜಿಜ್ಞಾಸೆಯಿಂದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದು ವಿಳಂಭವಾಗಿತ್ತು.

ಕೊನೆಗೂ ನ್ಯಾಯಾಲಯದಿಂದ ಎಲ್ಲಾ ದಾಖಲೆಗಳನ್ನು ಪಡೆದು,ಪಡೆದು ಕಂದಾಯ ಇಲಾಖೆಯಿಂದ ವರದಿಯನ್ನು ಪಡೆದು ಮೇ‌ 2 ರಂದು ಕೊನೆಗೂ ಕೃತ್ಯವನ್ನು ಮಾಡಿದ ಜಗದಂಬಾ ಸೇವಾ ಟ್ರಸ್ಟ್ ಕೊಲ್ಲೂರು ಇದರ ಎಲ್ಲಾ ಪದಾಧಿಕಾರಿಗಳ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ BNS ಕಾಯ್ದೆ ಮತ್ತು ಪ.ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂ ಗಳಡಿ FIR ದಾಖಲಿಸಲಾಯಿತು.

Advertisements

ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ವಿಬಾಗೀಯ ಸಂ.ಸಂಚಾಲಕ ಶಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಕರ್ನಾಟಕ-ಕೇರಳ ಆದಿವಾಸಿ ಕೊರಗ ಸಂಘಟನೆಯ ಸುಶೀಲಾ ನಾಡ, ಕುಮಾರದಾಸ್ ಹಾಲಾಡಿ, ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಹಕ್ಲಾಡಿ ರಾಜು ಕೆ.ಸಿ ಬೆಟ್ಟಿನಮನೆ, ಹೋರಾಟಗಾರ ಪುತ್ರನ್ ಹೆಬ್ರಿ ಇತರರು ಹಾಜರಿದ್ದರು.

ಗಂಗೆ ಕೊರಗ ಮನೆಧ್ವಂಸ ಪ್ರಕರಣವನ್ನು ಕ್ಲಪ್ತ ಸಮಯಕ್ಕೆ ಹೊರಗೆಳೆದು, ಹೋರಾಟಕ್ಕೆ ಪ್ರೇರೇಪಿಸಿದ ಎಲ್ಲಾ ಮಾಧ್ಯಮ ಗೆಳೆಯರು, ವೆಬ್-ಸಾಮಾಜಿಕ ಜಾಲತಾಣಗಳ ಸುದ್ದಿಗಾರರಿಗೆ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

Download Eedina App Android / iOS

X