ಚಿಕ್ಕಮಗಳೂರು l ಕೂತುಗೋಡು ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ

Date:

Advertisements

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಕೂತುಗೋಡು ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಯಿತು.

Screenshot 2025 05 13 20 13 37 57 965bbf4d18d205f782c6b8409c5773a4

ಕೂತುಗೋಡು ಗ್ರಾಮದಲ್ಲಿ ನೀಲಿ ತೋರಣಗಳಿಂದ ಕೊಡಿದ್ದು,  ಸಂಜೆ 5 ಗಂಟೆಯ ಸಮಯದಲ್ಲಿ ಅಂಬೇಡ್ಕರ್ ಜಯಂತಿ ಪ್ರಾರಂಭಿಸಲಾಯಿತು. ಹಾಗೆಯೇ, ಕಲಾವಿದರ ತಂಡದಿಂದ ಉತ್ತಮ ಹಾಡುಗಾರಿಕೆಯಿಂದ ಜನರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪರಿಸರವಾದಿ, ಚಿಂತಕ, ಲೇಖಕರಾದ ಡಾ. ಕಲ್ಕುಳಿ ವಿಠಲ್ ಹೆಗ್ಡೆ ಅವರು “ಮಹಿಳೆಯರಿಗೆ ಪುರುಷ ಶೋಷಣೆಯಿಂದ, ಬಂಡವಾಳ ಶಾಹಿಗಳ ಸಮಯವಿಲ್ಲದ ಕೆಲಸಕ್ಕೆ 8 ಘಂಟೆ ಕೆಲಸ ನಿಗದಿ ಮಾಡಿದಂತ, ಮಹಿಳೆ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಪುರುಷನಷ್ಟೇ ಹಕ್ಕುಳ್ಳವಳು” ಎಂದು ಮಾತಾಡಿದರು.

Screenshot 2025 05 13 20 09 19 67 965bbf4d18d205f782c6b8409c5773a4 1

ಏಪ್ರಿಲ್ 14 ಕ್ಕೆ 134 ವರ್ಷ ಕಳೆದರೂ ಅವರ ಮಾರ್ಗದರ್ಶನದ ಈ ದೇಶದ ಸಂವಿಧಾನ ಎಲ್ಲರನ್ನು ಗೌರವಿಸುವ, ಧರ್ಮ ನಿರುಪೇಕ್ಷಿತವಾಗಿ ಬದುಕುವ, ಎಲ್ಲರಿಗೂ ಸಮಾನ ಅವಕಾಶವನ್ನು ನೀಡುವಂತ ವ್ಯವಸ್ಥೆ ಯನ್ನು ಹಾಕಿಕೊಟ್ಟಿದ್ದಾರೆ. ಮೊದಲು ನಾವು ಶಿಕ್ಷಣ ಕಲಿಯಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಮಾತ್ರ ನಾವು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಡಾ. ಕಲ್ಕುಳಿ ವಿಠಲ್ ಹೆಗ್ಡೆ ತಿಳಿಸಿದರು.

Advertisements

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭಾರತದಲ್ಲಿ ಮೊದಲಿಗೆ ಮಹಿಳೆಯರಿಗೆ ಆಸ್ತಿ, ಸ್ವಾತಂತ್ರ್ಯ ಕೊಟ್ಟಿದ್ದು ಬಿ ಆರ್ ಅಂಬೇಡ್ಕರ್; ಕೆ ಎಲ್ ಅಶೋಕ್ 

ಈ ವೇಳೆ ಕೆಎಲ್ ಅಶೋಕ್, ವೆಂಕಟೇಶ್ ಹಾಗಲಗಂಚಿ, ಭರತ್ ಗಿಣಿಕಲ್, ಕವಿತಾ ಶೇಖರ್ ಕಣದಮನೆ, ಅನಿಲ್ ಹೊಸಕೊಪ್ಪ, ಶಂಕರ್, ಕರ್ನಾಟಕ ಜನಶಕ್ತಿ ಸಮಿತಿ, ದಸಂಸ ಸಮಿಯವರು, ಕೂತುಗೋಡು ಗ್ರಾಮಸ್ಥರು ಹಾಗೂ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X