ದಾವಣಗೆರೆ | ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ಕೃತಿಗೆ ದಲಿತ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ.

Date:

Advertisements

ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಪ್ರತಿ ವರ್ಷ ಪ್ರಕಟಿಸುವ ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ ಬಿ.ಶ್ರೀನಿವಾಸ ಅವರ ಕೃತಿ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೃತಿಯ ಲೇಖಕ ಬಿ. ಶ್ರೀನಿವಾಸ್ ದಾವಣಗೆರೆಯಲ್ಲಿ ವಾಸವಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.

ರಾಯಚೂರಿನಲ್ಲಿ 28 ಹಾಗೂ 29 ನೇ ಜೂನ್ 2025 ರಂದು ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ತಿಳಿಸಿದ್ದಾರೆ.

1001989760

ಈ ಬಗ್ಗೆ ಪತ್ರ ವ್ಯವಹಾರ ನಡೆಸಿರುವ ದಸಾಪ ರಾಜ್ಯ ಘಟಕ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ
ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ವತಿಯಿಂದ ಲೇಖಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದು, ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿ ಸಮ್ಮೇಳನ ಯಶಸ್ವಿಗೊಳಿಸಲು ತಿಳಿಸಲಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ

ಕೃತಿಯಲ್ಲಿ…..
ಕ್ರೌರ್ಯಕ್ಕೆ ಅದೆಷ್ಟು ಮುಖಗಳು, ಮನುಷ್ಯನ ಓಟದ ಹಪಾಹಪಿಯಲಿ ಬರಿದಾಗುತ್ತಿರುವ ಅಂತಃಕರಣ, ದುರಾಸೆಯಿಂದಾಗಿ ನೆಲ ಮೂಲ ಸಂಸ್ಕೃತಿಗಳ ಅಳಿವು, ಮೌಲ್ಯಗಳ ತಣ್ಣನೆಯ ಅವಸಾನ….ಇವೆಲ್ಲವನ್ನೂ ಸಲೀಸಾಗಿ ಶಬ್ದಗಳಿಗೆ ಇಳಿಸಿದ್ದಾರೆ ಲೇಖಕ ಬಿ.ಶ್ರೀನಿವಾಸರವರು “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಕೃತಿಯಲ್ಲಿ.

ಇದನ್ನ ಸಣ್ಣ ಕಥೆಯೋ,ಮಿನಿ ಕಥೆಯೋ,ನ್ಯಾನೋ ಕಥೆಯೋ ಇನ್ಯಾವುದೋ ಪ್ರಕಾರದ ಕಥೆಯ ಕೃತಿಯೆಂದು ಕರೆದು ಕೊಳ್ಳುವುದು ಓದುಗರಿಗೆ ಬಿಟ್ಟು… ತಮಗೆ ಕಾಡಿದ ತಾವು ನೋಡಿದ, ತಮಗೆ ಹೊಳೆದ ದಟ್ಟ ವಿಷಾದದ ಘಟನೆ ಸಂಗತಿಗಳನ್ನು, ಪ್ರಶ್ನೆಗಳನ್ನೂ ಹರಿವಿ ತಣ್ಣಗೆ ಓದುಗನಿಗೂ ದಾಟಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.‌

ಆ ಮೂಲಕ ಎಲ್ಲರೊಳಗಿನ ಜೀವ ತಂತುಗಳು ನಿಷ್ಕ್ರಿಯ ಗೊಳ್ಳದಂತೆ ಬಡಿದು ಜೀವ ತುಂಬುವ ಕೆಲಸ ಮಾಡುವಲ್ಲಿ, ಚಿಂತನೆಗೆ ಹಚ್ಚುವಲ್ಲಿ ಗುರುತಿಲ್ಲದ ಚಿತ್ರಗಳ ಕಥೆಗಳು ಸಫಲವಾಗುತ್ತವೆ. ಅವರ ಅನುಭವಗಳನ್ನ ಅವರು ಐದು ಉಪ ಶೀರ್ಷಿಕೆ ಅಡಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ.

1001989759

ಕೋರ್ಟಿನ ಚಿತ್ರಗಳಲ್ಲಿ ಬರುವ ಕತೆಗಳು ಬಹುತೇಕ ಎಲ್ಲವೂ ಮನಕಲಕುವಂತಿವೆ. ಅದರಲ್ಲೂ ದಂಡ ಕಟ್ಟಿದ ವೇಶ್ಯೆ ಈಗ ನಾನೆಲ್ಲಿಗೆ ಹೋಗಲಿ ಎಂದು ಕೇಳುವುದು, ಹುಡುಗ ಕೋರ್ಟಿನ ಅಂಗಳದಲ್ಲಿ ತನ್ನ ಅವ್ವನನ್ನು ಹುಡುಕುವುದು, ಅಜ್ಜಿ ಖಾಲಿ ಚೀಲವನ್ನು ಮರಳಿ ಪಡೆಯಲು ಬಂದ ಸನ್ನಿವೇಶ, ಜಪ್ತಿ ಮಾಡಲು ಬಂದವರಿಗೆ ಮನೆಯಲ್ಲಿ ಕಂಡುಬಂದ ಚಿತ್ರಣ ಅಕ್ಷರಶಃ ಕಣ್ಣೀರು ತರಿಸುತ್ತವೆ. ಇದಲ್ಲದೆ ದಮನಿತರು ಹೇಗೆ ಶೋಷಣೆಗೊಳಪಟ್ಟಿದ್ದಾರೆ ಮತ್ತು ಅವರು ಹೇಗೆ ನೋವುಂಡಿದ್ದಾರೆ ಎಂಬುದು ಈ ಬರಹಗಳಲ್ಲಿ ಬಹು ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ. ಒಟ್ಟಾರೆ ಎಲ್ಲಾ ಕಥೆಗಳು ಮತ್ತು ಪುಟ್ಟ ಬರಹಗಳು ಚಿಕ್ಕವಾಗಿ ಕಂಡರೂ ಪ್ರತಿಯೊಂದೂ ಕೂಡಾ ಬಹು ಮೌಲ್ಯಯುತವಾದವುಗಳಾಗಿವೆ.

ಇದನ್ನೂ ಓದಿ ; ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮಟ್ಕಾ, ಜೂಜಾಟದ ಅಡ್ಡೆ ಮೇಲೆ ದಾಳಿ; ಮೂವರ ಬಂಧನ

ಸಾರ್ವಜನಿಕ ಸ್ಥಳದಲ್ಲಿ ನಡೆದ ಮಟಕಾ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ...

ದಾವಣಗೆರೆ | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬಳು ಗೃಹಿಣಿ ಬಲಿ

ಸಾಲದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಸಾಲು ವಸೂಲಾತಿಗಾಗಿ ಮೈಕ್ರೋ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ರಾಯಚೂರು | ಉರ್ದು ಹಿರಿಯ ಪ್ರಾಥಮಿಕ ಶಾಲೆ SDMC ಹೊಸ ಅಧ್ಯಕ್ಷ- ಬಂದೇನವಾಜ ಜಾಲಹಳ್ಳಿ ಆಯ್ಕೆ

ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ...

Download Eedina App Android / iOS

X