‘ಬಾಡಿಗೆ ವೇಷದಲ್ಲಿ ಬೆತ್ತಲೆ ರಾಜ’; ಪುನೀತ್ ಪೋಸ್ಟರ್‌ಗೆ ಮುಖ ಅಂಟಿಸಿಕೊಂಡು ಟ್ರೋಲ್‌ ಆದ ಮೋದಿ

Date:

Advertisements

ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸಿನ ಬೆನ್ನಲ್ಲೇ, ದೇಶಾದ್ಯಂತ ಬಿಜೆಪಿ ‘ತಿರಂಗಾ ಯಾತ್ರೆ’ ನಡೆಸುತ್ತಿದೆ. ಇಡೀ ಕಾರ್ಯಾಚರಣೆ ಯಶಸ್ಸನ್ನು ಮೋದಿಗೆ ನೀಡಲು, ಮೋದಿಯಿಂದಲೇ ಎಲ್ಲವೂ ಸಾಧ್ಯವೆಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಅದಕ್ಕಾಗಿ, ಮೋದಿ ಅವರ ಭಾವಚಿತ್ರದ ಭಾರೀ ಎತ್ತರದ ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಅಂತಹ ಒಂದು ಕಟೌಟ್‌ ನೆಟ್ಟಿಗರಿಂದ ಟ್ರೋಲ್‌ಗೆ ಒಳಗಾಗಿದೆ. ಆ ಕಟೌಟ್‌ ಇಟ್ಟುಕೊಂಡು ಮೋದಿ ಮತ್ತು ಬಿಜೆಪಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ತಿರಂಗಾ ಯಾತ್ರೆಯಲ್ಲಿ ಬಳಸಲಾಗುತ್ತಿರುವ ಟ್ಯಾಬ್ಲೋ ಒಂದರಲ್ಲಿ ಮೋದಿ ಭಾವಚಿತ್ರದ ಬೃಹತ್ ‘ಕಟೌಟ್‌’ ಹಾಕಲಾಗಿದೆ. ಆದರೆ, ಆ ಕಟೌಟ್‌ನಲ್ಲಿ ಬಳಸಲಾಗಿರುವ ಸಂಪೂರ್ಣ ಚಿತ್ರವು ಮೋದಿ ಅವರದ್ದಲ್ಲ. ಕೇವಲ ಮುಖ ಮಾತ್ರವೇ ಮೋದಿ ಅವರದ್ದು, ಉಳಿದ ದೇಹದ ಚಿತ್ರ ಕನ್ನಡದ ಖ್ಯಾತ ನಟ ದಿ. ಪುನೀತ್ ರಾಜ್‌ಕುಮಾರ್ ಅವರದ್ದು.

ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಡೆಯ ಚಿತ್ರ ‘ಜೇಮ್ಸ್‌’ ಸಿನಿಮಾದಲ್ಲಿ ಭಾರತೀಯ ಸೇನೆಯ ಯೋಧನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಪುನೀತ್ ಅವರು ಸೇನಾ ವಸ್ತ್ರವನ್ನು ಧರಿಸಿದ್ದ ಚಿತ್ರವನ್ನು ಮೋದಿ ಅವರ ಪ್ರಚಾರಕ್ಕಾಗಿ ಬಿಜೆಪಿ ಬಳಸಿಕೊಂಡಿದೆ. ಚಿತ್ರದಲ್ಲಿ ಪುನೀತ್ ಅವರ ಮುಖದ ಚಿತ್ರವನ್ನು ಕಟ್‌ ಮಾಡಿ, ಅಲ್ಲಿಗೆ ಮೋದಿ ಅವರ ಮುಖದ ಚಿತ್ರವನ್ನು ಪೇಸ್ಟ್ ಮಾಡಲಾಗಿದೆ.

Advertisements

ಪುನೀತ್ ಅವರ ಗಾಂಭೀರ್ಯ, ಗತ್ತಿನ ಭಾವಚಿತ್ರದೊಂದಿಗೆ ಮೋದಿ ಅವರ ಮುಖ ಕಾಣಿಸಿಕೊಂಡಿದೆ. ಆದರೆ, ಪುನೀತ್ ಅವರ ಭಾರೀ ಲುಕ್‌ನ ಚಿತ್ರಕ್ಕೆ ಮೋದಿ ಅವರ ಸಪ್ಪೆ ಮುಖದ ಚಿತ್ರವನ್ನು ಅಂಟಿಸಿ ತಯಾರಿಸಿರುವ ಕಟೌಟ್‌ ಹಾಸ್ಯಾಸ್ಪದವಾಗಿಯೂ ಕಾಣಿಸುತ್ತಿದೆ. ಹೀಗಾಗಿಯೇ, ನೆಟ್ಟಿಗರು ಮೋದಿ ಮತ್ತು ಬಿಜೆಪಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಮೊದಲಿಗೆ, ಫ್ಯಾಕ್ಟ್‌ಚೆಕ್‌ ಸುದ್ದಿಸಂಸ್ಥೆ ‘ಆಲ್ಟ್‌ ನ್ಯೂಸ್‌’ನ ಸಹ ಸಂಸ್ಥಾಪಕ ಮೊಹಮ್ಮದ್ ಝುಬೇರ್ ಅವರು ಮೋದಿ ಕಟೌಟ್‌ಗೆ ಬಳಸಲಾಗಿರುವ ಚಿತ್ರವು ಪುನೀತ್ ಅವರ ಜೇಮ್ಸ್‌ ಚಿತ್ರದ್ದು ಎಂಬುದನ್ನು ಪತ್ತೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಝುಬೇರ್ ಅವರ ಪೋಸ್ಟ್‌ಅನ್ನು ರೀ-ಟ್ವೀಟ್‌ ಮಾಡಿರುವ ನಟ ಪ್ರಕಾಶ್‌ ರಾಜ್, “ಬಾಡಿಗೆ ವೇಷದಲ್ಲಿ ಬೆತ್ತಲೆ ರಾಜ .. ನಾಚಿಕೆಯಾಗೋದಿಲ್ವ .. ಛಿ.. ಛೀ” ಎಂದು ಮೋದಿ ಅವರನ್ನು ಛೇಡಿಸಿದ್ದಾರೆ.

ಇನ್ನು, ಝೂಬೇರ್ ಅವರ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, “ಬಿಜೆಪಿ ‘ಜೇಮ್ಸ್’ ಚಿತ್ರದ ನಾಯಕನನ್ನೂ ಬಿಡಲಿಲ್ಲ. ಸಿನಿಮಾದ ಪೋಸ್ಟರ್ಅನ್ನು ಎಡಿಟ್‌ ಮಾಡಿ ಮೋದಿ ಅವರನ್ನು ಸೂಪರ್ ಸೈನಿಕನನ್ನಾಗಿ ಮಾಡಿದೆ! ತಿರಂಗ ಯಾತ್ರೆಯ ಹೆಸರಿನಲ್ಲಿ ಸಿನಿಮಾ ಕೂಡ ಬಳಕೆಯಾಗುತ್ತಿದೆಯೇ? ಈಗ ಫೋಟೋಶಾಪ್‌ನಿಂದಲೂ ದೇಶಭಕ್ತಿ ಬರುತ್ತದೆಯೇ? ಬಿಜೆಪಿಗರು ಕೆಲಸವಿಲ್ಲದಿದ್ದಾಗ, ಪೋಸ್ಟರ್‌ಗಳನ್ನು ಅಂಟಿಸಬಹುದು!” ಎಂದು ಲೇವಡಿ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X