ಯುಪಿ | 5 ತಿಂಗಳಲ್ಲಿ ರಸ್ತೆ ಅಪಘಾತಕ್ಕೆ 7,700 ಮಂದಿ ಬಲಿ

Date:

Advertisements

ಈ ವರ್ಷದ ಜನವರಿ 1ರಿಂದ ಮೇ 20ರವರೆಗೆ (5 ತಿಂಗಳು) ಉತ್ತರ ಪ್ರದೇಶದಲ್ಲಿ 13,000 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 7,700 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರದ ‘ರಸ್ತೆ ಸುರಕ್ಷತೆ ಮತ್ತು ಜಾಗೃತಿ ಘಟಕ’ವು ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಕಿಅಂಶ ಹೊರಬಿದ್ದಿದೆ. ವರದಿಯಾಗಿರುವ ಅಪಘಾತಗಳಲ್ಲಿ ಹೆಚ್ಚಿನವು ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಸಂಭವಿಸಿದ್ದು, ಈ ಸಮಯವು ರಾಜ್ಯದಲ್ಲಿ ಅಪಾಯಕಾರಿ ಅವಧಿಗಳೆಂದು ಗುರುತಿಸಲಾಗಿದೆ.

2024ರಲ್ಲಿ, ಉತ್ತರ ಪ್ರದೇಶದಲ್ಲಿ 46,052 ರಸ್ತೆ ಅಪಘಾತಗಳು ಸಂಭವಿಸಿದ್ದವು. 24,118 ಮಂದಿ ಸಾವನ್ನಪ್ಪಿದರೆ, 34,665 ಜನರು ಗಾಯಗೊಂಡಿದ್ದರು. 2024ಕ್ಕೆ ಹೋಲಿಸಿದರೆ, 2023ರಲ್ಲಿ 44,534 ಅಪಘಾತಗಳು ಸಂಭವಿಸಿದ್ದು, 23,652 ಸಾವುಗಳು ಮತ್ತು 31,098 ಗಾಯಗೊಂಡಿದ್ದರು.

Advertisements

ಈ ವರ್ಷ ಸಂಭವಿಸಿರುವ ಎಲ್ಲ ಅಪಘಾತಗಳ ಪೈಕಿ 60% ಅಪಘಾತಗಳು ಮಧ್ಯಾಹ್ನ (ಮಧ್ಯಾಹ್ನ 12 ರಿಂದ ಸಂಜೆ 6) ಮತ್ತು ಸಂಜೆ (ಸಂಜೆ 6 ರಿಂದ ರಾತ್ರಿ 9) ಗಂಟೆಯ ಅವಧಿಯಲ್ಲಿ ಸಂಭವಿಸಿವೆ ಎಂದು ವಿಶ್ಲೇಷಣೆಯು ವಿವರಿಸಿದೆ.

ಮಧ್ಯಾಹ್ನದ ಸಮಯವು ಅತ್ಯಂತ ಮಾರಕ ಅವಧಿಯಾಗಿದ್ದು, ಆ ಸಮಯದಲ್ಲಿ 4,352 ಅಪಘಾತಗಳು ಮತ್ತು 2,238 ಸಾವುಗಳು ಸಂಭವಿಸಿವೆ. ಸಂಜೆಯ ಸಮಯದಲ್ಲಿ 3,254 ಅಪಘಾತಗಳು ಮತ್ತು 1,945 ಸಾವುಗಳು ಸಂಭವಿಸಿವೆ ಎಂದು ವರದಿ ಹೇಳಿದೆ.

ಇನ್ನು, ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ 2,629 ಅಪಘಾತಗಳು ಮತ್ತು 1,447 ಸಾವುಗಳು ಸಂಭವಿಸಿವೆ. ಅಲ್ಲದೆ, ರಾತ್ರಿ 9ರಿಂದ ಬೆಳಗಿನ ಜಾವ 3 ರವರೆಗೆ 2,585 ಅಪಘಾತಗಳು ಮತ್ತು 1,699 ಸಾವುಗಳು ವರದಿಯಾಗಿವೆ.

ಈ ಲೇಖನ ಓದಿದ್ದೀರಾ?: ಪ್ರತಿಷ್ಠಿತ ಹಾರ್ವರ್ಡ್ ವಿವಿ ಮೇಲೆ ಟ್ರಂಪ್ ವಕ್ರದೃಷ್ಟಿ: ವಿದ್ಯಾರ್ಥಿಗಳು ಬೀದಿಪಾಲು

ಚಾಲಕರು ನಿದ್ರೆಯಿಲ್ಲದೆ, ದಣಿದು ವಾಹನ ಚಾಲನೆ ಮಾಡುವ ಕಾರಣದಿಂದಾಗಿಯೇ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ಹೇಳಲಾಗಿದೆ.

ಹೀಗಾಗಿ, ತಡರಾತ್ರಿ ವಾಹನ ಚಲಾಯಿಸುವವರಿಗೆ ವಿಶ್ರಾಂತಿ ಪ್ರದೇಶಗಳು ಮತ್ತು 24/7 ಸಹಾಯವಾಣಿಗಳನ್ನು ಸ್ಥಾಪಿಸಲು ಹಾಗೂ ಚಾಲಕರಿಗೆ ನೆರವಾಗಲು ಹೆದ್ದಾರಿ ಚೆಕ್-ಪೋಸ್ಟ್‌ಗಳನ್ನು ಸಕ್ರಿಯಗೊಳಿಸುವಂತೆ ವರದಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮೊದಲು ಅಲ್ಲಿರುವಂಥ ಸಿಎಂ ನ ಇಳಿಸಬೇಕು ಒಳ್ಳೆ ಸಿಎಂನ ಗೆಲ್ಲಿಸಬೇಕು ದೇಶದ ಪರವಾಗಿ ಜನತದ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುವ ವ್ಯಕ್ತಿಯನ್ನು ಆರಿಸಬೇಕು ದೇಶದ ಮೇಲೆ ಅನೇಕ ಉದ್ಯೋಗಗಳು ತರುವಂತೆ ಅಂತ ಸಿಎಂ ಅನ್ನು ಆರಿಸಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X