ಶಿವಮೊಗ್ಗ | ʼಬುದ್ಧ-ಬಸವ-ಅಂಬೇಡ್ಕರ್ ತತ್ವಗಳ ಮೇಲೆ ಅಹಿಂದ ಸಂಘಟನೆ ಕಟ್ಟಲಾಗಿದೆʼ

Date:

Advertisements

ಶಿವಮೊಗ್ಗದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳು ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳ ವಸತಿ ಸದೃಢತೆಗಾಗಿ ಸ್ಥಾಪಿಸಿರುವ ಅಹಿಂದ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಕಚೇರಿಗೆ ಮೇ 26 ರಂದು ಸೋಮವಾರ “ರಾಷ್ಟ್ರೀಯ ಅಹಿಂದ ಸಂಘಟನೆಯ” ರಾಜ್ಯದ್ಯಕ್ಷರಾದ ಮುತ್ತಣ್ಣ ಎಸ್ ಶಿವಳ್ಳಿ ರವರು ಭೇಟಿ ನೀಡಿ ಶುಭ ಹಾರೈಸಿದರು.

ಅಹಿಂದ ಸಮುದಾಯಕ್ಕಾಗಿ ವಸತಿಯ ಅಭಿವೃದ್ಧಿಗಾಗಿಯೇ ಸ್ಥಾಪಿತವಾಗಿರುವ ಅಹಿಂದ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಶಿವಮೊಗ್ಗದಲ್ಲಿ ಆರಂಭಿಸಿದ್ದು ಸ್ವಾಗತಾರ್ಹವಾಗಿದೆ ಎಂದರು.

ಈ ಸೊಸೈಟಿಯು ರಾಜ್ಯದಲ್ಲಿ ಮೊಟ್ಟಮೊದಲನೆ ಸೊಸೈಟಿ ಯಾಗಿದ್ದು, ಸೊಸೈಟಿಯ ಬೈಲವನ್ನು ಅನುಸರಿಸಿ ಈ ರೀತಿಯ ಮಾದರಿಯಲ್ಲಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಹಿಂದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ಕಾರ್ಯದಯೋಜನೆಯನ್ನು ರೂಪಿಸಲಾಗುತ್ತದೆ ಎಂದು ಮುತ್ತಣ್ಣ ಎಸ್ ಶಿವಳ್ಳಿರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Advertisements
1001665514

ಬುದ್ಧ ಬಸವ ಅಂಬೇಡ್ಕರ್ ಅವರಗಳ ವಿಚಾರಧಾರೆಗಳು ಮುಂದಿಟ್ಟುಕೊಂಡು, ಅಹಿಂದ ಸಂಘಟನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕಟ್ಟಲಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಘಟನೆಯು ರಾಜ್ಯದಂತ ಒಂದು ಶಕ್ತಿಯಾಗಿ ಅಹಿಂದ ಸಮುದಾಯದ ಸಾಮಾಜಿಕ ನ್ಯಾಯದ ಧ್ವನಿಯಾಗಿ ರಾಜ್ಯಾದ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ರಾಷ್ಟ್ರೀಯ ಅಹಿಂದ ಸಂಘಟನೆಯನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಆಲೋಚಿಸಲಾಗಿದೆ ಎಂದು ಮುತ್ತಣ್ಣ ಎಸ್ ಶಿವಳ್ಳಿ ಹೇಳಿದರು.

ಅಹಿಂದ ಹೌಸಿಂಗ್ ಕೋ-ಆಪರೇಟಿವ್ಸೊಸೈಟಿ ಅಧ್ಯಕ್ಷರು ಮತ್ತು ಶಿವಮೊಗ್ಗ ಜಿಲ್ಲಾಮಟ್ಟದ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷರು ಸಿ.ಎಸ್.ಚಂದ್ರಭೂಪಾಲರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಅಹಿಂದ ಸಂಘಟನೆಯಮುಖಂಡರು ಡಾ.ಸಂಗಪ್ಪ ಹಡಪದರಶ್ರೀ ಲಕ್ಷ್ಮಣ ಧಾರವಾಡ , ತನ್ವೀರ್ರವರು ಆಗಮಿಸಿದ್ದರು.

ಅಹಿಂದ ಹೌಸಿಂಗ್ ಕೋ-ಆಪರೇಟಿವ್ಸೊಸೈಟಿಯ ನಿರ್ದೇಶಕರು ಎಸ್.ಎನ್ ಮೂರ್ತಿ,ಎಸ್.ಬಿ.ಅಶೋಕ್ ಕುಮಾರ್ಡಾ. ಡಿ. ಜೆ. ತಾನಾಜಿ , ಎಂ.ಮಂಜಪ್ಪ ,ಎಂ.ಪಿ.ದಿವಾಕರ ಶ್ರೀ ಮತಿ ನಾಜೀಮ ,ಶ್ರೀ ಮತಿ ವಿಜಯಲಕ್ಷ್ಮೀ ಹಾಜರಿದ್ದರು.

ರಾಷ್ಟ್ರೀಯ ಅಹಿಂದ ಸಂಘಟನೆಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರು ಮುಕುಬುಲ್ ಅಹ್ಮದ್,ಪ್ರಮುಖರಾದ ಮಹಮ್ಮದ್ ಆಲಿ ,ದಾದಾ ಕಲಂದರ್ , ಗೌಸ್ ಪೀರ್ , ಶ್ರೀಮತಿ ಪುಷ್ಪಲತಾರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X