ಗದಗ | ವಯೋಸಹಜ ಕಾಯಿಲೆಯಿಂದ ವೃದ್ಧ ಸಾವು : ಸರ್ವಧರ್ಮದ ಯುವಕರಿಂದ ಅಂತ್ಯ ಸಂಸ್ಕಾರ

Date:

Advertisements

ಗದಗ ಜಿಲ್ಲೆಯ ನರಗುಂದ ಪಟ್ಟಣದ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿ ವಯೋಸಹಜ ಕಾಯಿಲೆಯಿಂದ ಮುಸ್ಲಿಂ ಧರ್ಮಕ್ಕೆ ಸೇರಿದ ವೃದ್ಧ ಸಾವನಪ್ಪಿದ್ದು, ಎಲ್ಲ ಧರ್ಮದವರು ಸೇರಿ ಅವರ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ದಲಿತ ಮುಖಂಡರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ಸಮಾಜದಲ್ಲಿ ಮಾನವ ಧರ್ಮ ಶ್ರೇಷ್ಠ, ಮಾನವನಿಗೆ ಮಾನವನ ಸಹಾಯ ಹಸ್ತವನ್ನು ನೀಡಬಲ್ಲ. ಮಾನವನನ್ನು ಜಾತಿ ಧರ್ಮಗಳಿಂದ ಅಳಿಯಬಾರದು. ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ. ನಾವು ಇವತ್ತಿನ ದಿನಮಾನದಲ್ಲಿ ಜಾತಿ ಧರ್ಮ ಮೇಲು ಕೇಳು ಎಂದು ಹೊಡೆದಾಡಕ್ಕೊಂದು ಜೀವನ ಸಾಗಿಸುತ್ತಿದ್ದೇವೆ.  ಇವೆಲ್ಲವನ್ನು ತೊರೆದು ಮಾನವ ಕುಲವು ಒಂದೇ ಎಲ್ಲ ಜಾತಿ ಧರ್ಮಗಳು ಒಂದೇ ಎಂಬುವುದನ್ನು ಅರಿತುಕೊಂಡು ಜೀವನ ನಡೆಸಬೇಕು. ಎಂದರು.

“ಯಾವುದೇ ಧರ್ಮದಲ್ಲಿ ಅಥವಾ ಜಾತಿಯಲ್ಲಾಗಲಿ ಹಿಂಸೆ ಮತ್ತು ಕೆಟ್ಟ ಕಾರ್ಯಗಳಿಗೆ ಅವಕಾಶ ನೀಡಿಲ್ಲ. ಇಂತಹ ವಿಚಾರಗಳನ್ನು ನಾವೆಲ್ಲರೂ ಜೀವನದಲ್ಲಿ ತೆಗೆದುಕೊಂಡು ಜೀವನ ನಡೆಸಬೇಕು. ವೃದ್ಧಾಶ್ರಮಗಳಲ್ಲಿ ಕುಟುಂಬದಿಂದ ದೂರ ಉಳಿದ ಎಷ್ಟು ವೃದ್ಧರು ಜಾತಿ ಧರ್ಮದ ಬಗ್ಗೆ ಅರಿವೇ ಇಲ್ಲದೆ ಜೀವನವನ್ನು ನಟಿಸುತ್ತಿದ್ದಾರೆ.  ಆದರೆ ಇವತ್ತು ಯುವ ಸಮೂಹ ಜಾತಿ ಧರ್ಮದ ಗೀಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳುದರು.

Advertisements

ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮ ಸಂಸ್ಥೆಯ ಅಧ್ಯಕ್ಷರು ಶಶಿಕುಮಾರ್ ಮಾತನಾಡಿ, “ಇವತ್ತಿನ ದಿನಗಳಲ್ಲಿ ವೃದ್ಧಾಶ್ರಮದಲ್ಲಿ ಯಾವುದೇ ಜಾತಿ ಲಿಂಗಬೇದ ಭಾವ ಇಲ್ಲದೆ ಹಿರಿಯರ ಜೀವನ ಮಾಡುತ್ತಿದ್ದಾರೆ. ಆದರೆ ಸಮಾಜದಲ್ಲಿ ಜಾತಿ ಧರ್ಮ ಎಂದು ಬಡದಾಡಿಕೊಂಡು ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರೊಟ್ಟಿಗೆ ಇವತ್ತಿಗೆ ಹಿರಿಯರ ಬಗೆಗಿನ ಕಾಳಜಿ, ಗೌರವ ನಶಿಸಿಹೋಗಿ, ಹಿರಿಯರನ್ನು ವೃದ್ಧಾಶ್ರಮದತ್ತ ನೂಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾರುತಿ ಮಾನಪಡೆ 70ನೇ ಜನ್ಮದಿನ : ನೋಟ್‌ಬುಕ್, ಪೆನ್ ವಿತರಣೆ

ಅಂತ್ಯ ಸಂಸ್ಕಾರದಲ್ಲಿ ನಗರದ ಸರ್ವಧರ್ಮದ ಯುವಕರು ಅಭಿಷೇಕ್ ಹಡಪದ, ಜಹಾಂಗೀರಖಾನ ಪಠಾಣ,ಎಂ. ಎಚ್ ಧಾರವಾಡ, ಹಯಾಜ ಪಠಾಣ, ದಾವೂದ ಪಠಾಣ, ಸಲೀಮ್ ಬಿಜಾಲಿಖಾನ, ಜಮಾಲ್ಬೇಗ್ ಮುಲ್ಲಾ, ಮಾಜಿದ್ ಮುಲ್ಲಾ, ರಿಯಾಜ್ ಲೋಧಿ, ನವೀನ್ ಜೋಗಣ್ಣವರ, ಬಸು ಜೋಗಣ್ಣವರ, ಕುಮಾರ್ ಮೊರೆ, ಮುಬಾರಕ್ ಪರಾಸ, ನಾಗರಾಜ್ ಕಡೆಮನಿ,ಖಾಜು ಕಿಲ್ಲೆದಾರ, ದಾವಲ ರಾಜೇಖಾನ, ಶಿವು ದೊಡ್ಡಮನಿ, ಶಾರುಖ ಪಠಾಣ, ಆಶಿಫ ಪಠಾಣ, ಆಶೀಪ, ಮಾರುತಿ ಗುಡಿಯನ್ನವರ, ಮೌಲಾ ಕಾಶಿಮ್ ಖಲೀಫ, ಇಸ್ಮಾಯಿಲ್ ಜಮಾದಾರ, ಸಮೀರ್ ಸಕಲಿ, ಇನ್ನೂ ಅನೇಕ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X