ಶಿವಮೊಗ್ಗ | ಚಾಲಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬಾಡಿಗೆ ಕಾರು ಹೊತ್ತೊಯ್ದ ಮಹಿಳೆ

Date:

Advertisements

ತನ್ನನ್ನು ಪಿಕಪ್ ಮಾಡಲು ಬಂದ ವಾಹನವನ್ನೇ ಮಹಿಳೆಯೋರ್ವಳು ಕಳುವು ಮಾಡಿ ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶೃಂಗೇರಿಯಿಂದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯನ್ನು ಪಿಕ್ ಅಪ್ ಮಾಡಲು ಸ್ವಿಫ್ಟ್ ಡಿಸೈರ್ ಕಾರು ಬಂದಿತ್ತು. ರಮೇಶ್ ಗೌಡ ಎನ್ನುವವರು ಚಾಲಕರಾಗಿದ್ದು, ತಾಹೀರ್ ಅಹಮದ್ ಕಾರು ಮಾಲಿಕರಾಗಿದ್ದಾರೆ. ಕಾರನ್ನು ಮೊಬೈಲ್ ಮೂಲಕ ಬುಕ್ ಮಾಡಿದ್ದ ಮಹಿಳೆಯನ್ನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹತ್ತಿಸಿಕೊಂಡು ಸಾಗರ ರಸ್ತೆಯಲ್ಲಿರುವ ಬ್ಲೂ ಮೂನ್ ಲಾಡ್ಜ್ ಗೆ ವಿಶ್ರಾಂತಿಗಾಗಿ ಕರೆದುಕೊಂಡು ಬಂದಿದ್ದರು.

ಈ ವೇಳೆ ಮಹಿಳೆಯು ವಾಶ್ರೂಮ್ ಬಳಸುವಂತೆ ಹಾಗೂ ಕೊಂಚ ವಿಶ್ರಮಿಸುವಂತೆಯೂ ಸಹ ಚಾಲಕನಿಗೆ ಹೇಳಿದ್ದಳು. ಚಾಲಕ ವಾಶ್ ರೂಮ್ ಗೆ ಹೋಗುತ್ತಿದ್ದಂತೆಯೇ ಕೊಠಡಿಯ ಬಾಗಿಲನ್ನು ಎಳೆದುಕೊಂಡು ಕಾರ್ ತೆಗೆದುಕೊಂಡು ಮಹಿಳೆ ಪರಾರಿಯಾಗಿದ್ದಾಳೆ. ವಿಷಯ ಅರಿತ ಮಾಲೀಕ ಶೃಂಗೇರಿಯಿಂದ ಶಿವಮೊಗ್ಗ ಬಂದಿದ್ದು ತುಂಗಾ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಪೊಲೀಸರು ಲಾಡ್ಜ್ ತಪಾಸಣೆ ಮಾಡಿದ್ದಾರೆ.

Advertisements

ಆದರೆ ಮಾಲಿಕನ ಹೇಳಿಕೆ ಬೇರೆ ರೀತಿಯಾಗಿದೆ. ಕಾರಿನ ಚಾಲಕ ನನ್ನ ಬಳಿ ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿರುವುದಾಗಿ ಕಾರು ಪಡೆದುಕೊಂಡು ಹೋಗಿದ್ದಾರೆ. ಈಗ ಮಹಿಳೆ ಎಲ್ಲೋ ಬೋರ್ಡ್ ಕಾರನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಆಧಾರ್ ಕಾರ್ಡ್ ಪ್ರಕಾರ ಮಹಿಳೆ ಬೆಳಗಾವಿ ಜಿಲ್ಲೆಯ ವಸುಂಧರಾ ಎಂದು ತಿಳಿದು ಬರುತ್ತಿದೆ ಎಂದು ವಿವರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

Download Eedina App Android / iOS

X