ಚಿತ್ರದುರ್ಗ | ಕಾಡು ಭೂಮಿ ಸಂರಕ್ಷಿಸಲು ಕರೆ ವಿಮುಕ್ತಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ.

Date:

Advertisements

ಮನುಷ್ಯನ ಮನಸ್ಸು ಅಮೃತವಾದರೆ ಭೂಮಿಯು ಸಹ ಅಮೃತವಾಗುತದೆ. ಊರಿಗೊಂದು ಕಾಡು ಸೃಷ್ಟಿಸಿದರೆ, ಸಂರಕ್ಷಿಸಿದರೆ ಭೂಮಿಯೂ ಕೂಡ ಅಮೃತವಾಗುತ್ತದೆ ಎಂದು ಚಿತ್ರದುರ್ಗ ಹೊರವಲಯದ ವಿಮುಕ್ತಿ ವಿದ್ಯಾ ಸಂಸ್ಥೆಯಲ್ಲಿ ನೆಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಧಮ್ಮ ಕೇಂದ್ರದ ಮುಖ್ಯಸ್ಥ ವಿಶ್ವ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು.

1002110689

“ಭೂಮಿಯ ಮೇಲಿರುವ ಸಕಲ ಜೇವ ರಾಶಿಗಳಿಗೆ ಪ್ರಕೃತಿಯ ಅವಶ್ಯಕತೆ ಇದೆ. ಮನುಷ್ಯ ತನ್ನ ಸ್ವಾರ್ಥ ಜೇವನಕ್ಕೆ ಭೂಮಿಗೆ ಏತೇಚ್ಚವಾಗಿ ಪ್ಲಾಸ್ಟಿಕ್, ಗಾಜು, ರಾಸಾಯನಿಕ ವಸ್ತುಗಳ ವಿಷವನ್ನು ಹಾಕುವುದರಿಂದ ಭೂಮಿಯೂ ವಿಷವಾಗುತ್ತದೆ. ಇತ್ತೀಚಿನ ದಿನಗಳಲ್ಲಿಯೇ ಮುಂದುವರಿದ ದೇಶಗಳೇ ಪರಿಸರ ಮತ್ತು ಭೂಮಿಗೆ ವಿಷವನ್ನು ಹಾಕುತಿವೆ. ಮನುಷ್ಯ ಮನುಷ್ಯನ ದೌರ್ಜನ್ಯಕ್ಕಿಂತ ಪ್ರಾಣಿಗಳ ಮೇಲಿನ ದೌರ್ಜನ್ಯ, ಬೆಟ್ಟ ಗುಡ್ಡಗಳ ಮೇಲೆ ದೌರ್ಜನ್ಯ ಪರಿಸರದ ಮೇಲೆ ದೌರ್ಜನ್ಯ ಮಾಡಿ ತನ್ನ ಕಾಲನ್ನೇ ಕಡಿದುಕೊಳ್ಳುವುದಲ್ಲದೆ ಮುಂದಿನ ಮಕ್ಕಳ ಕಾಲನ್ನು ಕಡಿಯುವ ಪರಿಸ್ಥಿತಿಗೆ ಬಂದು ಬಿಟ್ಟಿದ್ದಾನೆ. ಅಮೃತದಂತಹ ಮನಸ್ಸಿನಿಂದ ಭೂಮಿಗೆ ಸಾವಯವ ಗೊಬ್ಬರವನ್ನು ಹಾಕಿ ಮನೆಗೊಂದು ಮಗು ಊರಿಗೊಂದು ವನ ಸೃಷ್ಟಿ ಮಾಡಿದಾಗ ಭೂಮಿಯೂ ಕೂಡ ಅಮೃತವಾಗುತ್ತದೆ” ಎಂದು ಹೇಳಿದರು.

1002110690

ಹಿರಿಯ ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್, “ಕಾಡುಬೆಳೆಸಿ ನಾಡು ಉಳಿಸಿ ಎನ್ನುವುದಕ್ಕಿಂತ ಕಾಡಿಗೆ ಬೆಂಕಿ ಬೀಳುವುದನ್ನು ಇಲಾಖೆಗಳು ನಿಯಂತ್ರಿಸಬೇಕು. ಕಾಡನ್ನು ಮುಂದಿನ ಪೀಳಿಗೆಗೆ ಉಳಿಸಬೇಕು” ಎಂದು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇಂದಿರಾ ಕ್ಯಾಂಟೀನಿನಲ್ಲಿ ಆಹಾರ ಮೆನು ಕುರಿತು ದೂರು, ಪೌರಾಡಳಿತ ಸಚಿವರ ಭೇಟಿ,

ಸಂಸ್ಥೆಯಿಂದ ಉಚಿತವಾಗಿ ಕಾರ್ಯಕ್ರಮದಲ್ಲಿ ಅನಾಥ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಬಸವನಾಗೀದೇವ ಶರಣರು, ತೋಟಗಾರಿಕೆ ಇಲಾಖೆಯ ತ್ಯಾಗರಾಜ್. ಗುರುಸಿದ್ದಣ್ಣ ಗೌಡ, ಪತ್ರಕರ್ತ ಅಹೋಬಲಪತಿ. ವಿಮುಕ್ತಿ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನರೇಗಾ ಕೆಲಸ, ಕೂಲಿ ವಿಳಂಬ ವಿರೋಧಿಸಿ ಗ್ರಾಕೂಸ್ ಕಾರ್ಯಕರ್ತರ ಪತ್ರ ಚಳವಳಿ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಸಿದ್ಧೇಶ್ವರನ ದುರ್ಗಾ ಗ್ರಾಮ ಪಂಚಾಯಿತಿಯಲ್ಲಿ ನರೇಗಾ-ಉದ್ಯೋಗ...

ಚಿತ್ರದುರ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಯೂರಿಯಾ ಕೊರತೆ; ರೈತರ ಆತಂಕ

ಚಳ್ಳಕೆರೆಯಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವ ಸ್ಥಿತಿ ಎದುರಾಗಿದ್ದು, ಇತಿಹಾಸದಲ್ಲಿ...

ಚಿತ್ರದುರ್ಗ | ಬಾಲಕಾರ್ಮಿಕ ಪದ್ಧತಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಕುರಿತು ಶಿಬಿರ

ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತು ಅರಿವು ಮೂಡಿಸುವ ಶಿಬಿರವನ್ನು ಚಿತ್ರದುರ್ಗ...

Download Eedina App Android / iOS

X