ಶಿವಮೊಗ್ಗ | ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ; ಎಸ್ಪಿ ನೇತೃತ್ವದಲ್ಲಿ ಸಭೆ

Date:

Advertisements

ಶಿವಮೊಗ್ಗ ನಗರದಲ್ಲಿ ದಿನಕಳದಂತೆ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ಸುಗಮ ಸಂಚಾರಕ್ಕಾಗಿ ಪಾರ್ಕಿಂಗ್ ವ್ಯವಸ್ಥೆಗೆ ತಿಣಕಾಡುವಂತಾಗಿದೆ. ನಗರದಲ್ಲಿರುವ ಈ ಸಮಸ್ಯೆಯನ್ನು ನಿಭಾಯಿಸಲು ಪಾಲಿಕೆ ಇಂಜಿನಿಯರ್ ಹಾಗೂ ಸಂಚಾರಿ ಪೊಲೀಸರು ಒಂದು ಹೊಸ ಮಾರ್ಗವನ್ನು ಕಂಡುಹಿಡಿದಿದ್ದು. ನಗರದ ತಿಲಕ್ ನಗರ, ಪಾರ್ಕ್ ಬಡಾವಣೆ, ದುರ್ಗಿಗುಡಿಯಲ್ಲಿ ಆಸ್ಪತ್ರೆಗಳು ಹೆಚ್ಚಾಗಿದೆ ಹೀಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಬಳಸಿಕೊಳ್ಳಲು ಮುಂದಾಗಿದೆ.

ತಿಲಕ್ ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಅದರ ಸುತ್ತಮುತ್ತಲಿನ ರಸ್ತೆಗಳು ಹಾಗೂ ದುರ್ಗಿಗುಡಿ ಈ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು.ಈ ಹಿನ್ನೆಲೆಯಲ್ಲಿ ಈ ಮೂರು ಬಡಾವಣೆಗಳ 21 ಕನ್ಸರ್ವೆನ್ಸಿ ಗಳನ್ನು ಪಾಲಿಕೆ ಇಂಜಿನಿಯರ್ ಭರತ್ ಕುಮಾರ್ ಹಾಗೂ ಸಂಚಾರಿ ಪೊಲೀಸ್ ನ ಸಿಪಿಐ, ದೇವರಾಜ್ ಪಿ ಐ ನವೀನ್ ಕುಮಾರ್ ಮಠಪತಿ ಹಾಗೂ ಸಿಬ್ಬಂದಿಗಳ ಸಹಾಯದಿಂದ 21 ಕನ್ಸರ್ವೆನ್ಸಿಗಳನ್ನು ನಗರದಲ್ಲಿ ಸರ್ವೆ ಮಾಡಲಾಗಿದೆ.

ಈ ಮೂರು ಬಡಾವಣೆಗಳ 21 ಕನ್ಸರ್ವೆನ್ಸಿ ಗಳನ್ನು ಪಾಲಿಕೆ ಇಂಜಿನಿಯರ್ ಭರತ್ ಕುಮಾರ್ ಹಾಗೂ ಸಂಚಾರಿ ಪೊಲೀಸ್ ನ ಸಿಪಿಐ, ದೇವರಾಜ್ ಪಿ ಐ ನವೀನ್ ಕುಮಾರ್ ಮಠಪತಿ ಹಾಗೂ ಸಿಬ್ಬಂದಿಗಳ ಸಹಾಯದಿಂದ 21 ಕನ್ಸರ್ವೆನ್ಸಿಗಳನ್ನು ಸರ್ವೆ ಮಾಡಲಾಗಿದೆ.

Advertisements
1001716817

ಈ ಸಂಬಂಧ ಎಸ್ಪಿ ಮಿಥುನ್ ಕುಮಾರ್.ಜಿ.ಕೆ ನೇತೃತ್ವದಲ್ಲಿ ನಗರದ ಸರ್ಜಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ, ಆಸ್ಪತ್ರೆಗಳ ಮುಖ್ಯಸ್ಥರ ಸಭೆಯನ್ನ ನಡೆಸಲಾಗಿದೆ. ಸ್ಮಾರ್ಟ್ ಸಿಟಿಯಿಂದ ಕನ್ಸರ್ ವೆನ್ಸಿಯನ್ನ ಅಭಿವೃದ್ಧಿ ಪಡಿಸಲಸಗಿದ್ದು, ಅದನ್ನ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆಗೆ ಬರುವ ವಾಹನಗಳನ್ನ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುವುದರಿಂದ ರಿಯಾತಿ ದರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಸಭೆಯಲ್ಲಿ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಶಿವಮೊಗ್ಗ, ಸಂಜೀವ್ ಕುಮಾರ್ ಡಿಎಸ್ಪಿ ಶಿವಮೊಗ್ಗ-ಬಿ ಉಪ ವಿಭಾಗ, ಭರತ್ ಮಹಾನಗರ ಪಾಲಿಕೆಯ ಇಂಜಿನಿಯರ್, ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಕಾರ್ಪೊರೇಷನ್ ಇಂಜಿನಿಯರ್ ಗಳು ಮತ್ತು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಆಡಳಿತ ಮಂಡಳಿಯ ಅಧಿಕಾರಿ ಹಾಗೂ ವೈಧ್ಯಾಧಿಕಾರಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಾಳೆ ಕವಿ ಮೂಡ್ನಾಕೂಡು ಚಿನ್ನಸ್ವಾಮಿರಿಂದ, ದಲಿತ ಸಾಂಸ್ಕೃತಿಕ ಚಿಂತನೆ ಕುರಿತು ವಿಚಾರ ಮಂಥನ

ಶಿವಮೊಗ್ಗ, ಕುವೆಂಪು ವಿ.ವಿ. ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ, ಡಿವಿಎಸ್...

ಶಿಕಾರಿಪುರ | ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ 1 ವರ್ಷ 8 ತಿಂಗಳ ಪುಟಾಣಿ

ಶಿಕಾರಿಪುರ, ತಾಲೂಕಿನ ಕಾಳೇನಹಳ್ಳಿ ಗ್ರಾಮದ ಒಂದು ವರ್ಷ ಎಂಟು ತಿಂಗಳ ಪುಟಾಣಿ...

ಸೊರಬ | ತಳ ಸಮುದಾಯದ ಪರ ಹೋರಾಟ ಮಾಡುವುದು ಅವಿಭಾಜ್ಯ ಅಂಗ : ನಟ ಚೇತನ್ ಅಹಿಂಸ

ಸೊರಬ, ವ್ಯೆಯಕ್ತಿಕವಾಗಿ ನಮ್ಮ ಪರಿಶ್ರಮ ಹಾಗೂ ಬೆವರು ಸುರಿಸಿ ಉತ್ತಮ ಸ್ಥಾನಕ್ಕೆ...

ಶಿವಮೊಗ್ಗ | ರಸ್ತೆ ಡಾಂಬರೀಕರಣಕ್ಕೆ ಆಯುಕ್ತರಿಗೆ ಮನವಿ

ಶಿವಮೊಗ್ಗ, ನಗರದ ಗೋಪಾಳದ ಕನಕದಾಸ ವೃತ್ತದಿಂದ ಬೈಪಾಸ್ ರಸ್ತೆಯು ಅನೇಕ ಬಡಾವಣಿಗಳು,...

Download Eedina App Android / iOS

X