ತಿಪಟೂರು | ಪೊಲೀಸ್‌ ಠಾಣೆಯಲ್ಲೇ ಅಸ್ಪೃಶ್ಯತೆ ಆಚರಣೆ; ದಲಿತರು ದೂರು ನೀಡುವುದಾದರೂ ಯಾರಿಗೆ?

Date:

Advertisements

ದೂರು ನೀಡಲು ಹೋದ ದಲಿತ ಕುಟುಂಬದವರನ್ನು ನೆಲದ ಮೇಲೆ ಕೂರಿಸಿ ಅವಮಾನ ಮಾಡಿ ಅಸ್ಪೃಶ್ಯತೆ ಮೆರೆದಿರುವ ಘಟನೆ ಗೃಹಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರು ನಗರ ಠಾಣೆಗೆ ದೂರು ನೀಡಲು ಹೋದ ದಲಿತ ಕುಟುಂಬವನ್ನು ನೆಲದ ಮೇಲೆ ಕೂರಿಸಿ ಅವಮಾನ ಮಾಡಿ ಅಸ್ಪೃಶ್ಯತೆಯನ್ನು ಜೀವಂತ ಇರಿಸಿರುವ ಪೊಲೀಸರು, ಆ ಮೂವರನ್ನು ಠಾಣೆಯ ತುಂಬಾ ಎಳೆದಾಡಿದ್ದಾರೆ. ಅಲ್ಲದೆ ಅದರ ವಿಡಿಯೋ ಮಾಡಿದ ಹುಡುಗನನ್ನು ಹಾಗೂ ಫೋಟೋ ತೆಗೆದ ಯುವಕನನ್ನು ಥಳಿಸಿ ಮೊಬೈಲ್ ಕಿತ್ತುಕೊಂಡು ಠಾಣೆಯಲ್ಲೇ ಕೂರಿಸಿದ್ದಾರೆ.

ನ್ಯಾಯ, ನೆರವು ನೀಡಬೇಕಾದ ಪೊಲೀಸರೇ ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಅಸ್ಪೃಶ್ಯತೆ ಇನ್ನೂ ಜೀವಂತವಿದೆ ಎಂದು ಇಡೀ ದೇಶಕ್ಕೆ ಸಾರುತ್ತಿರುವ ತಿಪಟೂರು ನಗರ ಪೊಲೀಸ್ ಠಾಣೆಯವರು ದೌರ್ಜನ್ಯ ಎಸಗಿದ್ದಾರೆ.

Advertisements
ಪೊಲೀಸ್‌ ಠಾಣೆ ತಿಪಟೂರು

ದಲಿತ, ದಲಿತಪರ ಇರುವ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸ್ಥಳೀಯ ದಲಿತ ಮುಖಂಡರು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬತೆ ಪೊಲೀಸರ ಪರವೇ ನಿಂತಿದ್ದಾರೆ. ಅಸ್ಪೃಶ್ಯತೆ ಇಲ್ಲ ಎನ್ನುವವರಿಗೆ ಈ ಫೋಟೋಗಳೇ ಸಾಕ್ಷಿಯಾಗಲಿವೆ. ಸರ್ಕಾರಕ್ಕೆ ಕಿಂಚಿತ್ತಾದರೂ ದಲಿತರ ಮೇಲೆ ಕಾಳಜಿ ಇದ್ದರೆ ಕಾನೂನನ್ನು ಗೌರವಿಸುವುದಾದರೆ ಇಂತಹ ಕೃತ್ಯ ಎಸಗಿರುವ ಪೊಲೀಸರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ, ದಲಿತಪರ ಸರ್ಕಾರ ಎಂದು ಸಾಬೀತುಪಡಿಸಲಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿದ್ದೀರಾ? ಎಲೆಚಾಕನಹಳ್ಳಿಯಲ್ಲಿ ಪೊಲೀಸರಿಂದಲೇ ಅಸ್ಪೃಶ್ಯತೆ ಪೋಷಣೆ: ದಲಿತರು ಬದುಕುವುದು ಹೇಗೆ?

ಗೃಹಮಂತ್ರಿ ಡಾ ಜಿ ಪರಮೇಶ್ವರ ಅವರು ತಮ್ಮ ಜಿಲ್ಲೆಯ ಕಾನೂನು ವ್ಯವಸ್ಥೆಯನ್ನೇ ಸರಿಪಡಿಸದವರು, ತಮ್ಮ ಸಮುದಾಯದವರಿಗೆ ನ್ಯಾಯ ಒದಗಿಸದವರು, ಇನ್ನು ರಾಜ್ಯಾದಂತ ದಲಿತರ ರಕ್ಷಣೆಗೆ ನಿಲ್ಲುವರೇ, ಪೊಲೀಸರ ವಿರುದ್ಧ ಸೂಕ್ತ ಕಾನೂನು ಜರುಗಿಸುವವರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X