ಗುಬ್ಬಿ | ರಾಜಸ್ಥಾನದ ಪ್ರಜೆಗಳಿಗೆ ಕರ್ನಾಟಕ ಕರ್ಮ ಭೂಮಿ : ರಾಜಸ್ಥಾನ ಸಚಿವ ಜೋಗರಾಮ್ ಪಟೇಲ್

Date:

Advertisements

ರಾಜಸ್ಥಾನದಿಂದ ವ್ಯಾಪಾರ ವ್ಯವಹಾರಕ್ಕೆ ಆಗಮಿಸಿದ ಪ್ರಜೆಗಳಿಗೆ ಕರ್ನಾಟಕ ಕರ್ಮ ಭೂಮಿ ಅನಿಸಿದೆ ಎಂದು ರಾಜಸ್ಥಾನ ಸರ್ಕಾರ ಕಾನೂನು ಮತ್ತು ಸಂಸದೀಯ ಹಾಗೂ ಶಿಕ್ಷಣ ಸಚಿವ ಜೋಗರಾಮ್ ಪಟೇಲ್ ತಿಳಿಸಿದರು.

ಗುಬ್ಬಿ ಪಟ್ಟಣಕ್ಕೆ ಭೇಟಿ ನೀಡಿ ರಾಜಸ್ಥಾನ ಮರ್ಜೆಂಟ್ಸ್ ಅಸೋಶೇಷನ್ ವರ್ತಕರ ಜೊತೆ ಸಂವಾದ ನಡೆಸಿ ಮಾತನಾಡಿದ ಅವರು ಹಾಲಿನಲ್ಲಿ ನೀರು ಬೆರೆತರೆ ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೂ ಅದೇ ರೀತಿ ಕನ್ನಡಿಗರ ಜೊತೆ ಬೆರೆತಿದ್ದಾರೆ. ಇಲ್ಲಿನ ಸಂಸ್ಕೃತಿ ಪರಂಪರೆ, ಪದ್ಧತಿಗೆ ಹೊಂದಿಕೊಂಡು ಇಲ್ಲಿಯೇ ಆಸ್ತಿಪಾಸ್ತಿಗಳನ್ನು ಸಂಪಾದಿಸಿ ಜೀವನ ಪರ್ಯಂತ ಇಲ್ಲಿನ ನಾಗರೀಕರಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಜೀವನ ನಡೆಸಲು ವ್ಯಾಪಾರಕ್ಕೆ ಬಂದ ರಾಜಸ್ಥಾನದ ಮಂದಿಗೆ ಸ್ಥಳಾವಕಾಶ ನೀಡಿ ಅವರೊಂದಿಗೆ ವ್ಯವಹಾರ ಕೂಡಾ ನಡೆಸಿ ಸಹಕರಿಸಿದ ಕನ್ನಡಿಗರು ಅವರನ್ನು ಹೊರ ರಾಜ್ಯದವರು ಎಂಬ ಬೇದ ಭಾವ ಎಂದೂ ತೋರಿಲ್ಲ. ಈ ಜೊತೆಗೆ ನಮ್ಮಲ್ಲಿಯ ದೇವಾಲಯಗಳಿಗೆ ಆರ್ಥಿಕ ನೆರವು, ನಮ್ಮ ಹಬ್ಬ ಜಾತ್ರೆಯಲ್ಲಿ ಆಸುಹೊಕ್ಕಾದ ಇವರುಗಳು ನಮ್ಮಲ್ಲಿ ಸೇಟುಗಳೆಂದು ಕರೆಯಲ್ಪಟ್ಟಿದ್ದಾರೆ ಎಂದರು.

Advertisements

ಈ ಸಂದರ್ಭದಲ್ಲಿ ಭವರ್ ಲಾಲ್, ಗಣಪತ್ ರಾಮ್, ಪುಕಾರಾಮ್, ಕಾಂತಿಲಾಲ್, ಶಿವು ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X