ಬೆಳಗಾವಿ | ರೈತ ಹೋರಾಟದ ಇತಿಹಾಸ ಸ್ಮರಣೆಗಾಗಿ ರೈತ ಹುತಾತ್ಮ ದಿನ

Date:

Advertisements

ರೈತರ ಸ್ವಾಭಿಮಾನ ಮತ್ತು ರೈತ ಹೋರಾಟದ ಇತಿಹಾಸವನ್ನು ಸ್ಮರಿಸಲು ಧಾರವಾಡದ ರೈತ ಹುತಾತ್ಮ ದಿನಾಚಾರಣೆ ಆಯೋಜಿಸಲಾಗಿದೆ. ರೈತರ ಸಮಾವೇಶದಲ್ಲಿ ನಾಡಿನ ರೈತರು ಭಾಗಿಯಾಗಬೇಕು ಎಂದು ರೈತಸಂಘದ ಮುಖಂಡ ಚನ್ನಪ್ಪ ಗಣಾಚಾರಿ ಮನವಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನರಗುಂದ-ನವಲಗುಂದದಿಂದ ಆರಂಭವಾದ ರೈತ ಚಳುವಳಿ ರಾಜ್ಯಾದ್ಯಾಂತ ಪಸರಿಸಿತು. ನೂರಾರು ರೈತರು ರೈತ ವಿರೋಧಿ ಸರ್ಕಾರಗಳ ಆಡಳಿತ ವ್ಯವಸ್ಥೆ ಧಿಕ್ಕರಿಸಿ ಸಿಡಿದೆದ್ದಿದ್ದರು. ಹಲವರು ತನ್ನ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಸ್ಮರಣೆಗಾಗಿ ಜುಲೈ 21ರಂದು ಧಾರವಾಡದಲ್ಲಿ43ನೇ ರೈತ ಹುತಾತ್ಮ ದಿನಾಚಾರಣೆಗೆ ನಡೆಯಲಿದೆ” ಎಂದು ತಿಳಿಸಿದ್ದಾರೆ.

“ರಾಜಕಾರಣಿಗಳ ಕುಟಿಲೋಪಾಯಗಳಿಂದ ಜನಪರ ಸಂಘಟನೆಗಳು ಒಡೆದು ಛಿದ್ರಗೊಂಡಿವೆ. ಹೋರಾಟದ ಇತಿಹಾಸವನ್ನು ಸ್ಮರಿಸುತ್ತ ವೈಚಾರಿಕ ಹೋರಾಟದ ಹಾದಿಯನ್ನು ಕ್ರಮಿಸಬೇಕಾಗಿದೆ. ಆ ದಿಕ್ಕಿನಲ್ಲಿ ರೈತರನ್ನು ಜಾಗೃತಗೊಳಿಸಿ ಹೋರಾಟದ ಕಿಚ್ಚು ತುಂಬುವುದು ಸಮಾವೇಶದ ಉದ್ದೇಶವಾಗಿದೆ” ಎಂದಿದ್ದಾರೆ.

Advertisements

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಮೊಖಾಶಿ, ರಾಜ್ಯ ಉಪಾಧ್ಯಕ್ಷ ಶಿವನಗೌಡ ಪಾಟಿಲ್, ಶಿವಪುತ್ರಪ್ಪ ಜಕಬಾಳ, ಶಿವನಗೌಡ ಪಾಟಿಲ, ಬಾಳಪ್ಪ ಪಾಟಿಲ, ವೈಜು ಲೂಮಾಚಿ, ಬಸವನಗೌಡ ಪಾಟಿಲ ಉಪಸ್ಥಿತರಿದ್ಧರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

Download Eedina App Android / iOS

X