“ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು , ನಗರ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಜಾರಿಗೊಳಿಸಬೇಕು ವಾರ್ಡಿನಲ್ಲಿ ಎಲ್ಲಾ ಸಮಸ್ಯೆಗಳು ಸರಿಪಡಿಸಲು ಮಾನ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು” ಎಂದು ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರು ಗಣೇಶ ರಾಠೋಡ ಒತ್ತಾಯಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಉಣಚಗೇರಿ 23ನೇ ವಾರ್ಡಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ ಪುರಸಭೆ ಸಿಬ್ಬಂದಿ ಜಿ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ನಾಗಯ್ಯ ಹೀರೆಮಠ್ ಮಾತನಾಡಿ, “ಸುಮಾರು ದಿನಗಳಿಂದ ಉಣಚಗೇರಿ ವಾರ್ಡಿನಲ್ಲಿ ಸಮಸ್ಯೆಗಳಿಂದ ಬಳಲುತ್ತಿದೆ. ಆದರೂ ಈವರೆಗೂ ಯಾವುದೇ ಅಧಿಕಾರಿಗಳು ಅಥವಾ ವಾರ್ಡಿನ ಸದಸ್ಯರು ಅದನ್ನು ಬಗೆಹರಿಸಲು ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸುತ್ತೆವೆಂದು ಹೇಳಿದರು.
ಪ್ರಮುಖ ಬೇಡಿಕೆಗಳು: 1) ವಾರ್ಡಿನ ಎಲ್ಲಾ ಪ್ರಮುಖ ಓಣಿಗಳಲ್ಲಿ ವಿದ್ಯುತ್ ದಿಪ ಅಳವಡಿಸಬೇಕು. 2) ನಗರದ ಚೆನ್ನಮ್ಮ ವೃತ್ತದಲ್ಲಿ ಬರುವ ಸ್ಥಳದಲ್ಲಿ ಕಸ ರಸ್ತೆಬದಿ ಬಂದಿದ್ದೆ ಅದನ್ನು ವೀಲೆವಾರಿ ಮಾಡಬೇಕು. 3) ವಾರ್ಡಿನಲ್ಲಿ ಸಿ ಸಿ ರಸ್ತೆ ನಿರ್ಮಾಣ ಮಾಡಬೇಕು. 4) ಮಹಿಳೆಯರ ಶೌಚಾಲಯ ನಿರ್ಮಿಸಬೇಕು. 5) ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು, ಬ್ಲಾಕ್ ಆಗಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. 6) ನಗರ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿಡಬೇಕು. 7) ಉಣಚಗೇರಿ ವಾರ್ಡಿನಲ್ಲಿ ಬಸ್ ನಿಲ್ದಾಣವಾಗಬೇಕು.
ಈ ಸುದ್ದಿ ಓದಿದ್ದೀರಾ? ಕಾಲ್ತುಳಿತ | ಆರ್ಸಿಬಿ ಮತ್ತು ಡಿಎನ್ಎ ಪದಾಧಿಕಾರಿಗಳಿಗೆ ಮಧ್ಯಂತರ ಜಾಮೀನು
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರು ಚಂದ್ರು ರಾಠೋಡ, ಮಹೇಶ್ ಬೆನ್ನೂರ, ಲೋಹಿತ ಪಾಟೀಲ್, ಮುತ್ತು ಪಾಟೀಲ್, ರವಿ ತಳವಾರ, ರಾಜು ಪಾಟೀಲ್ , ಧರಮಣ್ಣ ಗದ್ಧಿ,ವಿಜಯ ಕಲಾಲಬಂಡಿ, ಪ್ರಶಾಂತ್ ಪಾಟೀಲ್, ಆಸೀಫ್ ನದಾಫ, ಯಮನೂರಪ್ಪ ನಧಾಪ, ಕನಕರಾಯ, ಅಭಿಲಾಷ್ ರಾಠೋಡ, ಅನಿಲ್ ರಾಠೋಡ, ಅನೇಕರು ಉಪಸ್ಥಿತರಿದ್ದರು.
