ಗದಗ | ಉದ್ಯೋಗ ಖಾತ್ರಿಪಡಿಸಲು ಜುಲೈ 9ರಂದು ಮುಷ್ಕರ: ಬಾಲು ರಾಠೋಡ ಕರೆ

Date:

Advertisements

“ರೈತ ಕಾರ್ಮಿಕರ, ಕೂಲಿಕಾರರ ಜನ ವಿರೋಧಿ ಕೇಂದ್ರ ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಇದೆ ಜಜುಲೈ 9ರಂದು ಎಲ್ಲಾ  ತಾಲೂಕು ಜಿಲ್ಲೆಯಲ್ಲಿ  ಸಾರ್ವತ್ರಿಕ ಮುಷ್ಕರಕ್ಕೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಕರೆ ನೀಡಿದರು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮ ಪಂಚಾಯಿತಿ ಎದುರು ಉದ್ಯೋಗ ಖಾತ್ರಿ ಅಡಿಯಲ್ಲಿ ಉದ್ಯೋಗ ಕೊಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕ ಸಮಿತಿ ಪ್ರತಿಭಟನೆ ನಡೆಸಿ ಪಿಡಿಒ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

“ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳು ಕಳೆದಿವೆ. ದ್ಯೋಗ ಖಾತ್ರಿ ಯೋಜನೆಯು ವರ್ಷದಿಂದ ವರ್ಷಕ್ಕೆ ಹಣಕಾಸು ಕಡಿತ ಮಾಡುತ್ತಾ ಬರುತ್ತಿದೆ. ಈ ಮಹತ್ವದ ಯೋಜನೆಯನ್ನು ನಾಶ ಮಾಡುವ ಉದ್ದೇಶ ಹೊಂದಿದೆ. ಈ ವರ್ಷದ ಬಜೆಟ್ ನಲ್ಲಿ 50 ಸಾವಿರ ಕೋಟಿಗೂ ಹೆಚ್ಚುವರಿ ಹಣ ಕಡಿತ ಮಾಡಿದೆ. ‘ಜನತೆಗೆ ಉದ್ಯೋಗ ಸೃಷ್ಟಿಸಲಾಗಿದೆ’ ಎಂದು ಸುಳ್ಳು ಹೇಳುವ ಚಾಳಿ ಮುಂದುವರೆಸಿದೆ. ಎಂದು ಕಿಡಿಕಾರಿದರು.

Advertisements

“ರಾಜ್ಯ ಸರ್ಕಾರದಿಂದಲ್ಲೂ ಸರಿಯಾದ ರೀತಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಇಚ್ಚಾಸಕ್ತಿ ಕಡಿಮೆ ಆಗಿದೆ . ಶಾಸಕರು ಜಿ. ಎಸ್. ಪಾಟೀಲರು ತಮ್ಮದೇ ಆಡಳಿತ ಹೊಂದಿರುವ ಗ್ರಾಮ ಪಂಚಾಂಗಗಳಲ್ಲಿ ನೂರು ಮಾನವ ದಿನಗಳ ಕೆಲಸವನ್ನು ಕೂಲಿಕಾರರಿಗೆ ಕೊಡಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸುವ ಮಾತುಗಳನ್ನು ಆಡದೆ ಭ್ರಷ್ಟಾಚಾರದಲ್ಲಿ ತೋಡಗಿರುವದು ಕಾಣುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಘಟಕ ಅಧ್ಯಕ್ಷರಾದ ಬಸವರಾಜ ಬಾರಕೇರ ಮಾತನಾಡಿ “ನಮ್ಮ ಸೂಡಿ ಪಂಚಾಯಿತಿಯಲ್ಲಿ ಮೂರು ವರ್ಷಗಳ ಹಿಂದೆ ಕೆಲಸ ಕೊಡದಿದ್ದಾಗ ಕೂಲಿಕಾರರ ಸಂಘದಿಂದ ಹೋರಾಟ ಮಾಡಿ ಕೆಲಸ ಪಡೆದುಕೊಂಡಿದ್ದೆವೆ. ಆದರೆ ಈ ವರ್ಷ ಯಾವುದೇ ರೀತಿಯ ಕೆಲಸ ಕೊಡದೆ ಬ್ರಷ್ಟಾಚಾರದಲ್ಲಿ ಪಂಚಾಯಿತಿ ಮುಳುಗಿದೆ. ಹಾಗಾಗಿ ನಾವು ಮತ್ತೆ ಹೋರಾಟದ ಮೂಲಕವೇ ಕೆಲಸವನ್ನು ಪಡೆದು ಆಡಳಿತದ ಭ್ರಷ್ಟಾಚಾರ ಬಯಲಿಗೆ ತರುತ್ತೆವೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಳಸಂತೆಯಲ್ಲಿ ಪಡಿತರ ಅಕ್ಕಿ ಸಾಗಣೆ ;ವಾಹನ ಜಪ್ತಿ ಮೂವರ ಬಂಧನ

ಪಿ ಡಿ ಓ ಅಧಿಕಾರಿಗಳು ಮನವಿ ಸ್ವೀಕರಿಸಿ, “ನಿಮ್ಮ ಕೂಲಿ ಕೆಲಸದ ಬಗ್ಗೆ ಎಂಟು ದಿನಗಳಲ್ಲಿ ಕೂಲಿಕಾರರ ವಿಶೇಷ ಸಭೆ ಕರೆದು ಸಮಸ್ಯೆಗಳನ್ನು ಚರ್ಚಿಸಿ  ಕೆಲಸವನ್ನು ಕೋಡುತ್ತೆವೆ” ಎಂದರು.

ಈ ಪ್ರತಿಭಟನೆಯಲ್ಲಿ ಪರಸುರಾಮ ಕೋಟಿ, ಮಂಜುನಾಥ ಆಲೂರ, ಗೀತಾ ರಾಠೋಡ, ಮಮತಾ ನಧಾಪ, ಬೀಬಿಜಾನ ನಧಾಪ, ಶರಣಮ್ಮ, ನಾಗರಾಜ್ ಬಾರಕೇರ, ಲಿಂಗರಾಜ ಕುಂಬಾರ, ಶ್ರೀಧರ ಸೋಬಾನದ, ಬಸವರಾಜ ಎ ಬಾರಕೇರ, ಬಸು ಹಾದಿಮನಿ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X