ನುಡಿನಮನ: ನಮ್ಮನ್ನು ಪೊರೆದ, ಪ್ರಭಾವಿಸಿದ ಕುಸುಮಾ ಅಮ್ಮ

Date:

Advertisements

ಪ್ರೀತಿಯ ಕುಸುಮಾ ಶಾನಭಾಗ ಅಮ್ಮ ನಮ್ಮನ್ನು ಅಗಲಿದ್ದಾರೆ. ಇಷ್ಟು ದಿನಗಳ ಕಾಲ ನಮ್ಮನ್ನು ಮಕ್ಕಳ ರೀತಿ ಪೊರೆದಿದ್ದ ಅವರು ಇಂದು ನಮಗೆ ಹೇಳದೇ ಎದ್ದು ಹೋಗಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದ ಅವರನ್ನು ಅದೇ ಕ್ಯಾನ್ಸರ್ ಕೊನೆಗೂ ಕರೆದುಕೊಂಡಿದೆ.. ಹೋಗಿ ಬನ್ನಿ ಅಮ್ಮ…

2017ರಲ್ಲಿ ನಾವು ಉದ್ಯೋಗಕ್ಕಾಗಿ ಯುವಜನರು ಹೋರಾಟ ಆರಂಭಿಸಿದಾಗ ಅಮ್ಮನ ಪರಿಚಯವಾಯ್ತು. ಅಲ್ಲಿಂದ ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ನಮ್ಮನ್ನು ಆವರಿಸಿಕೊಂಡರು. ಪ್ರಜಾವಾಣಿ ಪತ್ರಿಕೆಯಲ್ಲಿ ನಮ್ಮ ಹೋರಾಟದ ವರದಿ, ನಮ್ಮ ಸಂದರ್ಶನ ಬರುವಂತೆ ಅಮ್ಮ ಶ್ರಮ ವಹಿಸಿದ್ದರು. ಅದೆಷ್ಟು ಬಾರಿ ನಮ್ಮನ್ನು ಮನೆಗೆ ಕರೆದು ಪ್ರೀತಿಯಿಂದ ನೋಡಿಕೊಂಡರು ಎಂಬುದಕ್ಕೆ ಲೆಕ್ಕವಿಲ್ಲ. ತಾನು ಮಾಂಸ ತಿನ್ನದಿದ್ದರೂ ನಮಗೆಲ್ಲ ನೀವು ಮಾಡಿಕೊಳ್ಳಿ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಅವರ ಜೀವದ ಭಾಗವೆಂಬಂತೆ ಇದ್ದ ಪ್ರೀತಿಯ ನಾಯಿ ‘ಪುಟ್ಟು’ಗೆ ಮೊಟ್ಟೆ ಎಲ್ಲಾ ಕೊಡುತ್ತಿದ್ದರು..

ಇದನ್ನು ಓದಿದ್ದೀರಾ? ಹಿರಿಯ ಪತ್ರಕರ್ತೆ ಕುಸುಮಾ ಶಾನಭಾಗ ಇನ್ನಿಲ್ಲ

Advertisements

ನಂದಿನಿ ಲೇ ಔಟ್‌ನಲ್ಲಿದ್ದ ಅವರ ಮನೆಯಿಂದ ಹಿಡಿದು, ಹೆಬ್ಬಾಳ ಆನಂತರ ಕೆಂಗೇರಿ ಉಪನಗರದವರೆಗೂ ಅಮ್ಮ ಮತ್ತು ನಮ್ಮ ಒಡನಾಟ ಮರೆಯಲಾಗದು. ಪುಟ್ಟುವಿನ ಆಸ್ಪತ್ರೆಗೆ ತೋರಿಸಲು ಅಮ್ಮ ತೋರಿದ ಸಂಯಮ ಹೇಳತೀರದು. ಊರಿಗೆ ಹೋಗಬೇಕಾದರೆ ಅದನ್ನು ನೋಡಿಕೊಳ್ಳಲು ಬಹಳ ಕಾಳಜಿ ವಹಿಸಿ, ಹೆಚ್ಚು ಊರಿಗೆ ಹೋಗುತ್ತಿರಲಿಲ್ಲ. ಆನಂತರ ಪುಟ್ಟು ತೀರಿಕೊಂಡಾಗ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಒಂದು ವರ್ಷದ ಹಿಂದೆ ಅದು ತೀರಿಕೊಂಡ ನಂತರ ಅಮ್ಮನಲ್ಲಿ ಬದುಕುವ ಆಸೆಯೇ ತೀರಿಹೋಯ್ತು ಎಂಬಂತೆ ಇದ್ದರು.

ಕುಸುಮಾ 3
ಅಮ್ಮನ ನಂದಿನಿ ಲೇ ಔಟ್ ಮನೆಯಲ್ಲಿ ಟಿವಿ ನೋಡುತ್ತಿರುವುದು. “ಮುತ್ತು ಬೈಬೇಡಿ ನನಗೆ ಬಿಗ್ ಬಾಸ್ ನೋಡೊದು ಇಷ್ಟ ಅಂತ ಅಮ್ಮ ಹೇಳ್ತಿದ್ರು.”

ಕಳೆದ ಆರು ತಿಂಗಳಿಂದ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು. ಊಟ ಸೇರುತ್ತಿರಲಿಲ್ಲ, ತೂಕ ಕಡಿಮೆಯಾಗುತ್ತಲೇ ಇತ್ತು. ಕಳೆದ ತಿಂಗಳು ಹೋದಾಗ ಡಾಕ್ಟರ್ ದಪ್ಪ ಆಗಲು ಹೇಳಿದ್ದಾರೆ. ಆದರೆ ಆಪರೇಷನ್ ಮಾಡಬಹುದು ಎಂದಿದ್ದಾರೆ ಎಂದು ಹೇಳಿದ್ದರು. ನಾವು ಅದೇ ಅಶಯದಲ್ಲಿದ್ದವು. ವಾರದ ಹಿಂದೆ ಫೋನ್ ಮಾಡಿದಾಗಲೂ ಅದನ್ನೇ ಕೇಳುತ್ತಿದ್ದೆವು. ಆದರೆ ಇಂದು ಅಮ್ಮ ಸಾಕು ಈ ನೋವು ಅನಿಸಿ ತೆರಳಿದ್ದಾರೆ.

ಅಮ್ಮ ನೀವು ನಮ್ಮ ಮನಸ್ಸಿನಾಳದಲ್ಲಿದ್ದೀರಿ.. ನಿಮ್ಮ ನೆನಪು ಎದೆಯಾಳದಲ್ಲಿರುತ್ತದೆ.. ನಿಮಗೆ ಪ್ರೀತಿಯ ವಿದಾಯಗಳು.

ಮುತ್ತುರಾಜು
ಮುತ್ತುರಾಜು
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X