ಕೊಪ್ಪಳ | ಎಮ್‌ಎಸ್‌ಪಿಎಲ್ ವಿರೋಧಿ ಸಭೆಗೆ ಸಮಯ ಕೊಟ್ಟೂ ಬಾರದ‌ ಶಾಸಕ; ಹೋರಾಟಗಾರರಿಂದ ಆಕ್ರೋಶ

Date:

Advertisements

ಬಲ್ಡೋಟಾ ಕೈಗಾರಿಕಾ ಕಾರ್ಖಾನೆಯ ವಿಸ್ತರಣೆಯ ವಿರೋಧಿ ಹೋರಾಟದ ಸಭೆಯನ್ನು ಶನಿವಾರ ಕರೆಯಲಾಗಿತ್ತು. ಈ ಸಭೆಗೆ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೂ ಕಾದರೂ ಬಾರದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಡೆಯನ್ನು ಕಂಡು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಷಣಾ ವೇದಿಕೆ ಕೊಪ್ಪಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಶಾಸಕರ ಜೊತೆ ಬಿಎಸ್‌ಪಿಎಲ್, ಎಮ್‌ಎಸ್‌ಪಿಎಲ್ ಕಂಪನಿಗಳ ವಿರೋಧಿಸಿ ಹಾಗೂ ಬಲ್ಡೋಟಾ ಕಂಪನಿಯಲ್ಲಿ ಕಾರ್ಯಚಟುವಟಿಕೆಗಳು ಸದ್ದಿಲ್ಲದೆ ನಡೆದಿದ್ದು, ಅದರ ಶಾಸಕರ ಜೊತೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಹಾಗೂ ಚರ್ಚೆ ನಡೆಸಬೇಕಿತ್ತು, ಆದರೆ, ಶಾಸಕ ರಾಘವೇಂದ್ರ ಹಿಟ್ನಾಳರವರು ಮಾತು ತಪ್ಪಿದ್ದರಿಂದ ಚಳುವಳಿಗಾರರು ಆಕ್ರೋಶಿತರಾಗಿ ಸಭೆ ಮೊಟಕುಗೊಳಿಸಿದರು‌.

ಕೆಲವು ದಿನಗಳ ಹಿಂದೆ ಸಂಸದ ರಾಜಶೇಖರ ಹಿಟ್ನಾಳ ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೆದಿಕೆ ವತಿಯಿಂದ ಸಭೆ ನಡೆಸಿ ‘ಬಲ್ಡೋಟಾ ಕಾರ್ಖಾನೆ ತೊಲಗುವವರೆಗೂ ಹೋರಾಟ ನಿಲ್ಲಿಸಬಾರದು. ನಿಮ್ಮ ಜೊತೆ ನಾವು ಇದ್ದೇವೆ ಹಾಗೂ ಸರಕಾರವೂ ಇದೆ’ ಎಂದು ಚಳುವಳಿಗಾರರಲ್ಲಿ ಧೈರ್ಯ ತುಂಬಿದ್ದರು.

Advertisements
1001137627

ಶಾಸಕ ರಾಘವೇಂದ್ರ ಹಿಟ್ನಾಳ ಬರ‌ತೇನಿ ಎಂದು ಹೇಳಿ ಪ್ರಗತಿಪರರನ್ನ, ಸಾಹಿತಿಗಳನ್ನ, ಪರಿಸರವಾದಿಗಳನ್ನ ಹಾಗೂ ಹೋರಾಟಗಾರರನ್ನ ಕಾಯಿಸಿದ್ದು ಯಾಕೆ? ಎಂಬ ಪ್ರಶ್ನೆ ಹೋರಾಟಗಾರರಲ್ಲಿ ಉದ್ಭವಿಸಿದೆ. ಶಾಸಕರು ಒತ್ತಡಕ್ಕೇನಾದರೂ ಒಳಗಾಗಿದ್ದಾರೆಯೇ? ಉದ್ದೇಶಪೂರ್ವಕವಾಗಿ ಕಾಯಿಸಿದರೆ? ಜಂಟಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಬಲ್ಡೋಟಾ ಕಂಪನಿ ಚರ್ಚಿಸಲು ಶಾಸಕರೇ ನಗರದ ಪ್ರವಾಸಿ ಮಂದಿರದಲ್ಲಿ ಸಭೆಗೆ ಸಮಯ ನಿಗದಿ ಮಾಡಿ ಗೈರಾಗಿದ್ದು ಯಾಕೆ ಎಂದು ಪ್ರಶ್ನಿಸಿ, ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.

1001137628

ಹೋರಾಟಗಾರ ಬಸವರಾಜ್ ಶೀಲವಂತರ ಮಾತನಾಡಿ, “ಶಾಸಕರೇ ಬಲ್ಡೋಟಾ ವಿರೋಧಿ ಹೋರಾಟ ಕ್ರಿಯಾ ಸಮಿತಿ ಸಭೆಗೆ ಸಮಯ ಹಾಗೂ ಸ್ಥಳ ನಿಗದಿ ಮಾಡಿ ಮಧ್ಯಾಹ್ನ 3 ಗಂಟೆಯವರೆಗೂ ನಮ್ಮನ್ನು ಕಾಯಿಸಿ ಕೊನೆಗೂ ಬರಲಿಲ್ಲ ಎಂದರೆ, ಈ ಕಂಪನಿ ವಿಸ್ತರಣೆ ವಿರೋಧಿ ಸಭೆಗೆ ಹಾಜರಾಗದಂತೆ ಅವರಿಗೆ ಒತ್ತಡ ಬಂದಿರಬಹುದು” ಎಂದು ಸಂಶಯ ವ್ಯಕ್ತಪಡಿಸಿ ಆಕ್ರೋಶಿತರಾದರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಶಾಸಕರಿಗೆ ಸಮಯ ಪ್ರಜ್ಞೆ ಇಲ್ಲದಿರುವುದು ತುಂಬಾ ನೋವು ತರಿಸಿದೆ. ಅವರೇ ಸಮಯ ಕೊಟ್ಟು ನಿಗದಿ ಮಾಡಿ; ‘ಅರ್ಧ ಗಂಟೆಯಲ್ಲಿ ಬರುತ್ತೇನೆ’ ಎಂದು ಹೇಳಿ ಕೊನೆಗೆ ನಮ್ಮ ಕರೆಯನ್ನೂ ಸ್ವೀಕರಿಸದೇ ಕಾಯಿಸಿದರು. ಶಾಸಕರ ಈ ನಡೆಯನ್ನು ಕಂಡರೆ ಕೊಪ್ಪಳ ಜನರಲ್ಲಿ ಸಂಶಯ ಮೂಡುತ್ತಿದೆ ಅವರು ಕಂಪನಿಯ ಪರವಾಗಿ ಒಳಗೊಳಗೇ ಇದ್ದಾರೆ” ಎಂದು ಶಾಸಕರ ವಿರುದ್ಧ ಗುಡುಗಿದರು.

ಶಿವಪ್ಪ ಹಡಪದ, ಕೆ.ಬಿ.ಗೋನಾಳ, ಗಾಳೆಪ್ಪ, ಗವಿಸಿದ್ದಪ್ಪ, ಶರಣು ಪಾಟೀಲ್, ಮುದಕಪ್ಪ ಹೊಸಮನಿ, ಈಶ್ವರ ಹತ್ತಿ, ಮಹಾಂತೇಶ ಕೊತಬಾಳ, ರವಿ ಕಾಂತಣ್ಣವರ, ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಜಿಲ್ಲಾ ಬಚಾವೋ ಆಂದೋಲನದ ಸರ್ವಸದಸ್ಯರು ಈ ಸಭೆಗೆ ಬಂದಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X