ವಿವಾಹೇತರ ಸಂಬಂಧ ಆರೋಪ ಹಿನ್ನೆಲೆ ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೊಬ್ಬರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.
ವಿಠಲಾಪೂರ ಗ್ರಾಮದ ನಾಗರಾಜ ಈರಪ್ಪ (32) ಎಂದು ಕೊಲೆಯಾದವರು. ಕೊಲೆಗೈದ ಆರೋಪಿಗಳನ್ನು ಅದೇ ಗ್ರಾಮದ ಹನುಮಂತ, ಸಿದ್ದರಾಮೇಶ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಆರೋಪಿ ಹನುಮೇಶ ಕನಕಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕೊಲೆ ಮಾಡಿರುವುದಾಗಿ ಒಪ್ಪಿ ಶರಣಾಗಿದ್ದಾನೆ. ಮತ್ತೊಬ್ಬ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆಯಾದ ಹನುಮೇಶ ಆರೋಪಿ ಪತ್ನಿ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದು, ಈ ವಿಷಯ ತಿಳಿದ ಪತಿ ಪತ್ನಿಯನ್ನು ಕಳೆದ ಒಂದು ವರ್ಷದ ಹಿಂದೆ ತವರು ಮನೆಗೆ ಕಳುಹಿಸಿದ್ದ. ವಿವಾಹೇತರ ಸಂಬಂಧದ ವಿಚಾರ ಪತಿಗೆ ತಿಳಿದ ಕಾರಣಕ್ಕೆ ಕೊಲೆಯಾದ ನಾಗರಾಜ 1 ವರ್ಷದಿಂದ ಗ್ರಾಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಕೆಲ ದಿನಗಳಿಂದ ಹಿಂದೆಯಷ್ಟೆ ಊರಿಗೆ ಬಂದಿದ್ದ.
ಇದನ್ನೂ ಓದಿ : ಕೊಪ್ಪಳ | 6ನೇ ಗ್ಯಾರಂಟಿ ಜಾರಿ ಮಾಡುವಂತೆ ಬಿಸಿಯೂಟ ನೌಕರರ ಪ್ರತಿಭಟನೆ
ಗ್ರಾಮಕ್ಕೆ ಬಂದಿರುವ ವಿಷಯ ತಿಳಿಸಿದ ಆರೋಪಿ ಹನುಮೇಶ, ಸಿದ್ದರಾಮೇಶ ದ್ವೇಷದಿಂದ ವೆಂಕಟಗಿರಿ ಹೊರವಲಯದಲ್ಲಿ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ