ಉಡುಪಿ | ಅಪಾಯಕ್ಕೆ ಆಹ್ವಾನಿಸುತ್ತಿದೆ, ತಡೆಬೇಲಿ ಇಲ್ಲದ ಕಾಲುಸೇತುವೆ

Date:

Advertisements

ಉಡುಪಿ ನಗರದ ಮೂಡನಿಡಂಬೂರು ಗ್ರಾಮದ, ಬನ್ನಂಜೆ ವಾರ್ಡಿನ ಬ್ರಹ್ಮಬೈರ್ದಕಳ ಗರಡಿ ರಸ್ತೆಯಲ್ಲಿ ಬರುವ, ಸಾರ್ವಜನಿಕ ನಾಗಬನದ ಹತ್ತಿರ, ನೀರು ಹರಿಯುವ ಕಾಲುವೆಯೊಂದಿದ್ದು, ಈ ಕಾಲುವೆಯು ಗರಡಿ ಸನಿಹ ಹರಿಯುವ ಇಂದ್ರಾಣಿ ನದಿಯನ್ನು ಸಂಪರ್ಕಿಸುತ್ತದೆ. ನಾಗಬನ ಸನಿಹದ ಕಾಲುವೆಗೆ ಕಾಲುಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಕಳೆದ ಅರವವತ್ತು‌ ವರ್ಷಗಳ ಹಿಂದೆಯೇ ನಿರ್ಮಿಸಲ್ಪಟ್ಟ ಕಾಲುಸೇತುವೆ ಎಂದು‌ ಹೇಳಲಾಗುತ್ತಿದೆ.

ಕಾಲುಸೇತುವೆಯು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಸೇತುವೆ ಎರಡೂ ಪಾರ್ಶ್ವಗಳಲ್ಲಿಯೂ ರಕ್ಷಣಾ ಬೇಲಿ ಉರುಳಿಬಿದ್ದು ಹಲವು ವರ್ಷಗಳೇ ಕಳೆದುಹೋಗಿವೆ. ಇಲ್ಲಿ ಪಾದಚಾರಿಗಳು ಆಯತಪ್ಪಿ ಕಾಲುವೆಗೆ ಬೀಳುವ ಘಟನೆಗಳು ಸಂಭವಿಸುತ್ತಲೆ ಇರುತ್ತದೆ. ಅರ್ಕದಕಟ್ಟೆ, ಗರಡಿ, ನಿಟ್ಟೂರು ಭಾಗದ ನಾಗರಿಕರು, ವಲಸೆ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜುಗಳ‌ ವಿದ್ಯಾರ್ಥಿಗಳು ಉಡುಪಿ ನಗರಕ್ಕೆ ತೆರಳಲು ಈ ಕಾಲುಸೇತುವೆಯನ್ನು ಬಳಸುತ್ತಾರೆ. ಸಂಕದ ಮೇಲೆ, ದಿನವೊಂದರಲ್ಲಿ ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನ ಸಂಚರಿಸುವುದು ಕಂಡುಬರುತ್ತದೆ. ಶಾಲಾ ಮಕ್ಕಳು ಕಾಲುಜಾರಿ ಕಾಲುವೆಗೆ ಎಡವಿಬಿದ್ದರೆ ನೀರಲ್ಲಿ ಕೊಚ್ಚಿಹೋಗುವ‌ ಹಾಗೂ ಹಿರಿಯ ನಾಗರಿಕರು ನಡೆದು ಸಾಗುವಾಗ ದೇಹ ನಿಯಂತ್ರಣ ಸಿಗದೆ, ಬೀಳುವ ಸಾಧ್ಯತೆಗಳು ಇಲ್ಲಿ‌ ಹೆಚ್ಚಿದೆ. ಈ ಸ್ಥಳದಲ್ಲಿ ಬೀದಿದೀಪದ ವ್ಯವಸ್ಥೆಯೂ ಇಲ್ಲವಾಗಿದೆ. ವಿಷ ಜಂತುಗಳ‌ ಸಂಚಾರವು ಇಲ್ಲಿದೆ. ಸೇತುವೆ ತಳಭಾಗವು ಶಿಥಿಲವಾಗಿದ್ದು ಸರಳುಗಳು ಕಾಣುತ್ತಿವೆ. ನಗರಾಡಳಿತ, ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಸಂಸದರು ತುರ್ತಾಗಿ ಈ ಸ್ಥಳದಲ್ಲಿ ಹೊಸದಾದ ಅಗಲವಾದ ಕಾಲುಸೇತುವೆ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

1006029571
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X