ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಪೂರ್ಣಚಂದ್ರ ಪಾರ್ಕ್ನಲ್ಲಿ ಹಸಿ ತ್ಯಾಜ್ಯ ನಿರ್ವಹಣೆಗಾಗಿ ಎರಡು ಲೇನ್ ಕಾಂಪೋಸ್ಟರ್ಗಳನ್ನು ಶುಕ್ರವಾರ ಅಳವಡಿಸಲಾಗಿದೆ.
ನಿವಾಸಿಗಳ ಕಲ್ಯಾಣ ಸಂಘ ನಾಗರಿಕ ಸೇವಾ ಸಮಿತಿಯ ಸಹಯೋಗದೊಂದಿಗೆ ಎನ್ಎಎಮ್ಎ ಈ ಕಾಂಪೋಸ್ಟರ್ಗಳನ್ನು ಅಳವಡಿಸಿದೆ. ಪ್ರತಿ ‘ಲೇನ್ ಕಾಂಪೋಸ್ಟರ್’ 800 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಪಾರ್ಕ್ ಸುತ್ತಲ ಪ್ರದೇಶದಲ್ಲಿರುವ 40 ಮನೆಗಳಿಂದ ಹಸಿ ತ್ಯಾಜ್ಯವನ್ನು ಪ್ರತಿದಿನ ಇಲ್ಲಿ ಸಂಸ್ಕರಿಸಬಹುದು. 45 ದಿನಗಳಲ್ಲಿ ಅದರಲ್ಲಿ ತುಂಬಿದ ಕಸವು ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ. ಅದನ್ನು ಪಾರ್ಕ್ನ ಗಿಡ-ಮಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಯೋಜನೆಯ ಮುಖ್ಯ ಗುರಿಯು ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸುವುದು, ತ್ಯಾಜ್ಯ ಸಂಸ್ಕರಣೆಯನ್ನು ವಿಕೇಂದ್ರೀಕರಿಸುವುದು ಹಾಗೂ ಕಾಂಪೋಸ್ಟಿಂಗ್ನ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಾಗಿದೆ ಎಂದು ಪಾಲಿಕೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಸಂತಾನ ನಿಯಂತ್ರಣಕ್ಕಾಗಿ ನಾಯಿಗಳನ್ನು ಯಲಹಂಕಕ್ಕೆ ಸ್ಥಳಾಂತರಿಸಬೇಡಿ; ಪ್ರಾಣಿ ಕಾರ್ಯಕರ್ತರ ಒತ್ತಾಯ
ಇವುಗಳನ್ನು ಸ್ಥಳೀಯ ಬಿಬಿಎಂಪಿ ತ್ಯಾಜ್ಯ ಸಂಗ್ರಹ ಆಟೋ ಚಾಲಕ ಮತ್ತು ಸಹಾಯಕರು ನಿರ್ವಹಿಸುತ್ತಾರೆ. ಅವುಗಳನ್ನು ನಿರ್ವಹಿಸುವ ಕುರಿತು ಅವರಿಗೆ ಸಿಡಬ್ಲುಎಸ್ ತಂಡದಿಂದ ತರಬೇತಿ ನೀಡಲಾಗಿದೆ.