ಜುಲೈ 8, 2025ರ ಮಂಗಳವಾರದಂದು ಚಿತ್ರದುರ್ಗ ಆಕಾಶವಾಣಿಯ ಹಲೋ ಆಕಾಶವಾಣಿ ಜನಜಾಗೃತಿ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ರಾಜಶೇಖರ್ ಪಾಳ್ಳೇದವರ್ ಭಾಗವಹಿಸಲಿದ್ದಾರೆ.
ಚಿತ್ರದುರ್ಗ ಆಕಾಶವಾಣಿ ನಿಲಯದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯ ವರೆಗೆ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ‘ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಚಟುವಟಿಕೆಗಳು, ಆಹಾರ ಉದ್ಯಮದ ನೊಂದಣಿ, ಪರವಾನಿಗೆ ಪಡೆಯುವುದು ಹೇಗೆ? ಆಹಾರ ಉದ್ದಿಮೆದಾರರ ಜವಾಬ್ದಾರಿಗಳು, ಆಹಾರ ಮಾದರಿ ಪರೀಕ್ಷೆ, ಕಳಪೆ ಗುಣಮಟ್ಟದ ಆಹಾರದ ವಿತರಣೆ ವಿರುದ್ದ ಕಾನೂನು ಶಿಕ್ಷೆಗಳ ಕುರಿತು ಮಾಹಿತಿ ನೀಡಲಿದ್ದಾರೆ’ಎಂದು ತಿಳಿಸಲಾಗಿದೆ.

ಹೋಟೆಲ್, ಆಹಾರ ತಿನಿಸು ತಯಾರಿಕೆ ಘಟಕಗಳು, ತಂಪು ಪಾನೀಯ ಸೇರಿದಂತೆ ವಿವಿಧ ಆಹಾರೋತ್ಪನ್ನ ಘಟಕಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಡಿಯಲ್ಲಿ ಪರವಾನಗಿ ಪಡೆಯಬೇಕಿದ್ದು, ಆಸಕ್ತ ಕೇಳುಗರು ದೂರವಾಣಿ ಸಂಖ್ಯೆಗಳಾದ 9448640273, 9141970272 ಹಾಗೂ ದೂರವಾಣಿ ಸಂಖ್ಯೆ 08194-295649ಗೆ ಕರೆ ಮಾಡಬಹುದು. ವಾಟ್ಸಪ್ ಸಂಖ್ಯೆ 9448640273 ಸಂದೇಶ ಮಾಡುವ ಮೂಲಕವು ತಮಗೆ ಅಗತ್ಯವಿರುವ ಮಾಹಿತಿ ಪಡೆಯಬಹುದು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಿಕ್ಷಣ ಕ್ಷೇತ್ರದ ಗುಣಮಟ್ಟ ಮೂಲಭೂತ ಸೌಕರ್ಯ ಸುಧಾರಣೆಗೆ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ಆಗ್ರಹ