ಚಿನ್ನದ ಅಂಗಡಿಯಲ್ಲಿ ಕೇವಲ 20 ರೂ.ಗೆ ಮಂಗಳಸೂತ್ರ ಪಡೆದ ದಂಪತಿ; ಹೇಗೆ?

Date:

Advertisements

3,000 ರೂ. ಬೆಲೆ ಬಾಳುವ ಮಂಗಳಸೂತ್ರವನ್ನು ಕೇವಲ 20 ರೂ.ಗೆ ವೃದ್ಧ ದಂಪತಿಗಳು ಖರೀದಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದಂಪತಿಗಳಿಗೆ ಕೇವಲ 20 ರೂ.ಗೆ ತಾಳಿ ಮಾರಾಟ ಮಾಡಿದ ಅಂಗಡಿ ಮಾಲೀಕನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

93 ವರ್ಷದ ವೃದ್ಧಿ ದಂಪತಿಗಳು ತಾಳಿ ಖರೀದಿಗಾಗಿ ಚಿನ್ನದ ಅಂಗಡಿಗೆ ಬಂದಾಗ, ಗೋಪಿಕಾ ಜ್ಯುವೆಲ್ಲರ್ಸ್‌ನ ಮಾಲೀಕ ನಿಲೇಶ್ ಖಿವಂಶರ ಅವರು ತಾಳಿಯನ್ನು ಉಡುಗೊರೆಯಾಗಿ ದಂಪತಿಗಳಿಗೆ ನೀಡಿದ್ದಾರೆ. ಆದರೆ, ದಂಪತಿಗಳು ಉಚಿತವಾಗಿ ತಾಳಿ ಪಡೆಯಲು ನಿರಾಕಿಸಿದ ಕಾರಣ, 20 ರೂ. ಪಡೆದು ಮಂಗಳಸೂತ್ರವನ್ನು ಕೊಟ್ಟಿದ್ದಾರೆ.

ದಂಪತಿಗಳಿಗೆ 20 ರೂ.ಗೆ ತಾಳಿಯನ್ನು ಮಾರಾಟ ಮಾಡಿದ ಬಗ್ಗೆ ವಿವರಿಸಿರುವ ಅಂಗಡಿ ಮಾಲೀಕ ನಿಲೇಶ್ ಖಿವಂಶರ, “ಅವರು (ವೃದ್ಧ ದಂಪತಿ) ಸ್ವಾಭಿಮಾನಿ ಜನರು. ಉಚಿತವಾಗಿ ಏನನ್ನೂ ಪಡೆಯಲು ಬಯಸಲಿಲ್ಲ. ಹಣ ಪಾವತಿ ಮಾಡುವುದಾಗಿ ಹಠ ಹಿಡಿದಿದ್ದರು” ಎಂದು ಹೇಳಿವುದಾಗಿ ‘ಎಎನ್‌ಐ’ ವರದಿ ಮಾಡಿದೆ.

Advertisements

“ದಂಪತಿಗಳು ಆಭರಣಗಳನ್ನು ಹುಡುಕುತ್ತಾ ಹಲವು ಅಂಗಡಿಗಳನ್ನು ಸುತ್ತಾಡಿ ನಮ್ಮ ಅಂಗಡಿಗೆ ಬಂದರು. ಅವರು ಹಲವಾರು ಆಭರಣಗಳನ್ನು ನೋಡಿ, ಖರೀದಿಸದೆ ವಾಪಸ್ ಹೊರಟರು. ಅವರು ತಮ್ಮ ಪತ್ನಿಗೆ ಮಂಗಳಸೂತ್ರ ಖರೀದಿಸಲು ಹುಟುಕುತ್ತಿರುವುದು ತಿಳಿದು, ನಾವು ಅವರಿಗೆ 3,000 ರೂ. ಮೌಲ್ಯದ ಚಿನ್ನ ಲೇಪಿತ ತಾಳಿ ಸರವನ್ನು ಉಡುಗೊರೆಯಾಗಿ ಕೊಟ್ಟೆವು. ಆದರೆ, ಅವರು ಉಡುಗೊರೆಯಾಗಿ ಪಡೆಯಲು ನಿರಾಕರಿಸಿದರು, ಹಣ ಪಾವತಿ ಮಾಡುವುದಾಗಿ ಹೇಳಿದರು” ಎಂದು ತಿಳಿಸಿದ್ದಾರೆ.

“ವೃದ್ಧ ವ್ಯಕ್ತಿ ಮೊದಲು ನೋಟು-ನಾಣ್ಯಗಳನ್ನು ಒಳಗೊಂಡ 1,100 ರೂ. ಕೊಟ್ಟರು. ಬಳಿಕ, ವೃದ್ಧ ಮಹಿಳೆ ತಮ್ಮ ಚೀಲದಿಂದ ರೂ. 10 ಮತ್ತು ರೂ. 20 ನೋಟುಗಳನ್ನು ತೆಗೆದರು. ನಾವು ಹಣ ಪಾವತಿಸುವುದು ಬೇಡವೆಂದು ಹೇಳಿದೆವು. ಆದರೆ, ಅವರು ಹಣ ಪಾವತಿಲು ಹಠ ಹಿಡಿದರು. ಕೊನೆಗೆ, ಪತಿ ಮತ್ತು ಪತ್ನಿ ಇಬ್ಬರಿಂದಲೂ ತಲಾ 10 ರೂ.ಗಳನ್ನು ಆಶೀರ್ವಾದವಾಗಿ ಸ್ವೀಕರಿಸಿದೆ. ಅವರ ಸ್ವಾಭಿಮಾನ ಮತ್ತು ಬದುಕಿನ ಉತ್ಸಾಹವು ನಮ್ಮನ್ನು ಉತ್ಸುಕಗೊಳಿಸಿದೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X