ವಿಜಯಪುರ | ನಾಲತವಾಡ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದ ವೈದ್ಯರಿಗೆ ಸನ್ಮಾನ ಸಮಾರಂಭ

Date:

Advertisements

ನಾಲತವಾಡ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರವು ಕಳೆದ ಹಲವು ವರ್ಷಗಳಿಂದಲೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಜನತೆ ಅನುಭವಿಸಿದೆ. ಸದ್ಯ ಇದೀಗ ತಮ್ಮ ಆರೋಗ್ಯ ಸೇವೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ನಿಮ್ಮ ಸಹಕಾರಕ್ಕೆ ನಾವು ಸದಾ ಇರುತ್ತೇವೆ. ಸೇವೆಗೆ ಹಿಂಜರಿಯಬೇಡಿ ಎಂದು ಡಿಎಸ್ಎಸ್ ಹೋಬಳಿ ಘಟಕದ ಅಧ್ಯಕ್ಷ ಗುಂಡಪ್ಪ ಚಲವಾದಿ ವೈದ್ಯರಿಗೆ ಸಾಥ್‌ ನೀಡಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯ ಡಾ.ರಂಗನಾಥ ವೈದ್ಯ ಸೇರಿದಂತೆ ಐದು ಮಂದಿ ವೈದ್ಯರಿಗೆ ಡಿಎಸ್ಎಸ್ ನಾಲತವಾಡ ಹೋಬಳಿ ಸಂಚಾಲಕರ ಹಾಗೂ ವಿವಿಧ ಸಂಘಟಕರು ಹಮ್ಮಿಕೊಂಡಿದ್ದ ನಾಗರಿಕ ಸಮಾರಂಭದಲ್ಲಿ ಮಾತನಾಡಿದರು.

“ಇಲ್ಲಿರುವ ಹಲವು ಸಿಬ್ಬಂದಿಗಳಿಗೆ ಸಮಯ ಪ್ರಜ್ಞೆ ಬೇಕಿದ್ದು, ಅಂಥವರಿಗಾಗಿ ಮೊದಲು ಸಭೆ ಕರೆದು ಉತ್ತಮ ಸೇವೆಗೆ ಸಮಯ ಪಾಲನೆ ಮಾಡುವಂತೆ ಸೂಚಿಸಬೇಕು” ಎಂದು ಮನವಿ ಮಾಡಿಕೊಂಡರು.

Advertisements

ಸನ್ಮಾನ ಸ್ವೀಕರಿಸಿ ಡಾ.ರಂಗನಾಥ ವೈದ್ಯ ಮಾತನಾಡಿ, “ನನ್ನೊಂದಿಗೆ ಇನ್ನುಳಿದ ವೈದ್ಯರೂ ಕೂಡ ಎಂಬಿಬಿಎಸ್ ಮುಗಿಸಿದ್ದು, ಅವರೂ ಕೂಡಾ ಯುವಕರಿದ್ದಾರೆ. ಅವರೊಂದಿಗೆ ತಮ್ಮ ಸಹಕಾರದಿಂದ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತೇನೆ” ಎಂದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ಹೃದಯಾಘಾತದಿಂದ ಕೆಎಸ್‌ಆರ್‌ಟಿಸಿ ನೌಕರ ನಿಧನ

ಈ ವೇಳೆ ಸನ್ಮಾನ ಸ್ವೀಕರಿಸಿದ ಡಾ.ಅರ್ಪಿತಾ ಚಿನಿ ವಾಲರ, ಡಾ.ರೇಶ್ಚಾ ಹವೇಲಿ ಹಾಗೂ ಕೆಪಿಸಿಸಿ ಘಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕಧ್ಯಕ್ಷ ಮೈಬೂಬ ಕುಳಗೇರಿ, ಶಿವು ಪಟ್ಟಣಶೆಟ್ಟಿ, ದಂಡಪ್ಪ ಜಾವಳಗೇರಿ, ಕರವೇ ಸಂಘಟಕ ಕಾಶೀಮ ಗಂಗೂರ, ಕಾಶೀಬಾಯಿ, ಮುನ್ನಾ ಹೊನ್ನುಟಗಿ, ಕವಿತಾ ಪಾಟೀಲ, ಕಾಶೀಮಪಟೇಲ ಬಿದರಕೋಟಿ, ಬಸವರಾಜ ಹಳ್ಳಿ, ಮುತ್ತಣ್ಣ ಕೂಡಲಗಿ, ಮಹಾಂತೇಶ ಹಡಪದ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

Download Eedina App Android / iOS

X