ನಾಡಿನ ಹಿರಿಯ ಸಾಹಿತಿ, ಚಿಂತಕ ರಂಜಾನ್ ದರ್ಗಾ ಅವರಿಗೆ ರಾಜ್ಯಮಟ್ಟದ ಶರಣ ಮರುಳ ಶಂಕರದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೀದರ್ ಜಿಲ್ಲೆಯ ಭಾಲ್ಕಿಯ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಮರುಳ ಶಂಕರದೇವ ಪ್ರಶಸ್ತಿಯನ್ನು ಧಾರವಾಡದ ಅವರ ನಿವಾಸದಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು.
ಧಾರವಾಡ ಬಸವ ಕೇಂದ್ರದ ಅಧ್ಯಕ್ಷ ಸಿದ್ಧರಾಮ ನಡಕಟ್ಟಿ, ಕವಿ ಎ.ಎ. ದರ್ಗಾ, ಪರ್ವೀನ್ ಎ. ದರ್ಗಾ, ಶಬನಮ್ ಫರೀದಾಬಾನು, ನಸೀಮ್ ಕಿಲ್ಲೇದಾರ, ತಾಹೇರಾ ದರ್ಗಾ, ಡಾ. ರೇಣುಕಾ, ಅರುಣ್ ಮೂಡಿ, ಸಾಗರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಪ್ರೀತಿಸುವಂತೆ ಯುವಕನಿಂದ ಕಿರುಕುಳ : ಅಪ್ರಾಪ್ತೆ ನೇಣಿಗೆ ಶರಣು