ಶಿವಮೊಗ್ಗ | ಮೈದಾನ ಪಾಲಿಕೆ ಆಸ್ತಿಯಾಗಿಯೇ ಉಳಿಯಲಿ: ಈಶ್ವರಪ್ಪ

Date:

Advertisements

ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದ ಜಾಗದ ಹಕ್ಕುದಾರಿಕೆಯನ್ನು ಸ್ಥಾಪಿಸುವಂತಹ ಯಾವುದೇ ದಾಖಲೆಗಳು ವಕ್ಫ್ ಇಲಾಖೆಯಲ್ಲಿ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಿ ಈ ಅಕ್ರಮದಲ್ಲಿ ಶಾಮೀಲಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಶಿವಮೊಗ್ಗ ಮಹಾನಗಾರ ಪಾಲಿಕೆಗೆ ಸೇರಿದ ಈ ಜಾಗವು ಪಾಲಿಕೆಯ ಆಸ್ತಿ ಆಗಿಯೇ ಉಳಿಯಬೇಕು ಎಂದು ರಾಷ್ಟ್ರಭಕ್ರ ಬಳಗ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಬಳಗದ ಸಂಚಾಲಕ‌ ಕೆ ಎಸ್ ಈಶ್ವರಪ್ಪ, ಮೈದಾನದ ಹಕ್ಕುದಾರಿಕೆ ಬಗ್ಗೆ ರಾಷ್ಟ್ರಭಕ್ತರ ಬಳಗ ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಮಹಾನಗರ ಪಾಲಿಕೆ ಆಯುಕ್ತರಿಗೆ ಮಾನವಿ ಸಲ್ಲಿಸಿದೆ.

ಜಾಗದ ಖಾತೆಯನ್ನು ನಿಯಮ ಬಾಹಿರವಾಗಿ ವಕ್ಫ್ ಹೆಸರಿಗೆ ಮಾಡಿದ್ದನ್ನು ಪ್ರಶ್ನಿಸಿ, ಪುನರ್ ಪರಿಶೀಲಸುವಂತೆ ದಿನಾಂಕ 10/11/2020 ರಂದು ಅರ್ಜಿ ಸಲ್ಲಿಸಲಾಗಿದ್ದರೂ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರಕರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು ಎಂದರು.

Advertisements

(ರಿಟ್ ಅರ್ಜಿ ಸಂಖ್ಯೆ 14897/2025). ದಿನಾಂಕ 22/05/2025 ರ ಆದೇಶದಲ್ಲಿ ಉಚ್ಚ ನ್ಯಾಯಾಲಯ ಸದರಿ ಜಾಗದ ಹಕ್ಕುದಾರಿಕೆಯ ದಾಖಲಾತಿಗಳನ್ನು ಎಂಟು ವಾರದ ಒಳಗೆ ಪರಿಶೀಲಿಸಬೇಕೆಂದು ಪಾಲಿಕೆ ಆಯುಕ್ತರಿಗೆ ತಿಳಿಸಿದ್ದು ನ್ಯಾಯಾಲಯ ಕೊಟ್ಟ ಅವಧಿಯು ದಿನಾಂಕ 17/07/2025 ಕ್ಕೆ ಮುಗಿದಿದೆ.

ಈ ಹಿಂದೆ ಸಲ್ಲಿಸಿದ ದಾಖಲೆಗಳಲ್ಲದೆ ದಿನಾಂಕ 01/07/2025 ರಂದು ಮಾನ್ಯ ಆಯುಕ್ತರಿಗೆ ರಾಷ್ಟ್ರಭಕ್ತರ ಬಳಗ ದ ಕಾನೂನು ವಿಭಾಗದಿಂದ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದರು.1965 ರ ಮೈಸೂರು ರಾಜ್ಯ ಪತ್ರ ಮತ್ತು 1965 ರಿಂದ 1975 ರ ವರೆಗೆ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಎಂ.ಅರ್. 19 ರಂತೆ ಇದ್ದ ಆಳತೆ 295+291/2 109+1481/2 ಮತ್ತು ಸರ್ಕಾರದ ಇಂಡೀಕರಿಸುವ ಸುತ್ತೋಲೆಯಲ್ಲಿ ಗಮನಿಸಬೇಕಾದ ಅಂಶ ಎಂದರೆ ಗೆಜೆಟ್ ನೋಟಿಫಿಕೇಷನ್‌ ನಲ್ಲಿ ಇದೇ ಜಾಗ ಎಂದು ಪರಿಗಣಿಸಲು ಯಾವುದೇ ಚಕ್ಕುಬಂದಿಯನ್ನು ನಮೂದಿಸಿಲ್ಲ.

ಎಂ.ಆರ್.19 ರಲ್ಲಿರುವ ಖಾತಾ ದಾಖಲೆಯೇ ಪ್ರಶ್ನಾರ್ಹವಾಗಿದ್ದು 1965 ರಿಂದ 1975 ರ ನಡುವೆ ಇದ್ದ ಅಳತೆ ಎಂದು ತಿಳಿಸಲಾಗಿದೆ ಎಂದರು., ಆದರೆ ಪಾಲಿಕೆ ದಾಖಲೆಗಳಲ್ಲಿ 1965 ರ ಹಿಂದೆ ಹಾಗೂ 1975 ರ ನಂತರವೂ ಇದು ಕಂಡುಬರುವುದಿಲ್ಲ.

ಸದರಿ ಜಾಗದ ನೈಜ ಅಳತೆಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ವರದಿ ಕೇಳಿದ್ದರೂ ಇದುವರೆಗೆ ಪಾಲಿಕೆ ವರದಿ ನೀಡಿಲ್ಲ, ಅಲ್ಲದೇ ಈ ಹಿಂದೆ ನೀಡಿದ್ದ ಸರ್ವೇ ವರದಿಯಲ್ಲಿ ಮೇಲಾಧಿಕಾರಿಯ ಸಹಿಯೇ ಇಲ್ಲ ಎಂದು ಅಂದಿನ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

2031 ನೇ ಇಸವಿ ವರೆಗಿನ ಸಿ.ಡಿ.ಪಿ, ಯೋಜನ ತಯಾರಿಸುವಾಗಲೂ ಸಹ ಸದರಿ ಜಾಗವನ್ನು ಕಡು ಹಸಿರು ಬಣ್ಣದಿಂದ ಗುರುತಿಸಿದ್ದು ಆಟದ ಮೈದಾನ ಅಥವಾ ಪಾರ್ಕ್ ಎಂದು ನಮೂದಿಸಲಾಗಿದೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X