ಬಂಟ್ವಾಳ | ಮನೆಯ ಬಳಿ ಚಿರತೆ ಪ್ರತ್ಯಕ್ಷ; ಆತಂಕದಲ್ಲಿ ಗ್ರಾಮಸ್ಥರು

Date:

Advertisements

ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಬಾಬತೋಟದ ರೈತರೊಬ್ಬರ ಮನೆಗೆ ಚಿರತೆ ಬಂದು ನಾಯಿಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸುವ ವೇಳೆ ನಾಯಿಗಳು ಜೋರಾಗಿ ಕೂಗಿಕೊಂಡಾಗ ಚಿರತೆ ಓಡಿಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಬಾಬತೋಟ ನಿವಾಸಿ ಪ್ರಕಾಶ್ ಪೂಜಾರಿ ಅವರ ಮನೆಯಂಗಳಕ್ಕೆ ಜು.17ರ ತಡರಾತ್ರಿ ಚಿರತೆ ಬಂದಿದೆ. ಸಿಸಿಟಿವಿಯ ಮಾನಿಟರ್ ಹಾಳಾಗಿದ್ದ ಕಾರಣ ಬಂದಿರುವುದು ಚಿರತೆ ಎಂಬುದು ರವಿವಾರ ಮಾನಿಟ‌ರ್ ದುರಸ್ತಿಯಾದ ಬಳಿಕ ಮನೆಯವರ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಶಕ್ತಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು

Advertisements

ಚಿರತೆ ಬಂದ ವೇಳೆ ಮನೆಯಲ್ಲಿದ್ದ 2 ನಾಯಿಗಳು ಜೋರಾಗಿ ಕೂಗಿಕೊಂಡ ಸಂದರ್ಭದಲ್ಲಿ ಪ್ರಕಾಶ್ ಹೊರಗೆ ನೋಡುವುದಕ್ಕೆ ಹೊರಟಾಗ ಹೆದರಿಕೆಯಿಂದ ಮನೆಮಂದಿ ನಿಲ್ಲಿಸಿದ್ದರು. ಸಿಸಿಟಿವಿಯಲ್ಲಿ ಚಿರತೆಯು ನಾಯಿಗಳು ಬೊಗಳಿದ್ದರಿಂದ ಓಡಿ ಹೋಗಿರುವ ದೃಶ್ಯ ಸೆರೆಯಾಗಿದ್ದರೂ, ಅದನ್ನು ನೋಡುವ ಮಾನಿಟ‌ರ್ ಹಾಳಾಗಿತ್ತು.

ರಾತ್ರಿಯಲ್ಲಿ ಯಾರೋ ಬಂದು ಹೋಗಿದ್ದಾರೆ ಎಂಬ ಆತಂಕದಲ್ಲಿ ಮನೆಯವರು ಕಾಲ ಕಳೆಯುತ್ತಿದ್ದರು. ಮರುದಿನ ಮಾನಿಟರ್ ದುರಸ್ತಿಗೆ ಕೊಟ್ಟು ರವಿವಾರ ದುರಸ್ತಿಯಾಗಿ ಸಿಕ್ಕ ಬಳಿಕವೇ ಬಂದಿರುವುದು ಮನುಷ್ಯರಲ್ಲ ಅದು ಚಿರತೆ ಎಂದು ಗೊತ್ತಾಗಿದೆ. ಚಿರತೆಯು ದಾಳಿ ಮಾಡುವ ವೇಳೆ ಒಂದು ನಾಯಿಗೆ ಸಣ್ಣ ಗಾಯವಾಗಿದೆ. ಅದು ನಾಯಿಗಳೇ ಜಗಳ ಮಾಡಿಕೊಂಡು ಗಾಯ ಮಾಡಿಕೊಂಡಿರಬಹುದು ಮನೆಯವರು ಭಾವಿಸಿದ್ದರು.

ಇದನ್ನೂ ಓದಿ: ಉಳ್ಳಾಲ | ರೈಲ್ವೆ ಟ್ರ್ಯಾಕ್‌ ಅಂಡರ್‌ಪಾಸ್‌ ಕಾಮಗಾರಿಗೆ ರೈಲ್ವೆಯಿಂದ ಗ್ರೀನ್ ಸಿಗ್ನಲ್

ಮನೆಗಳ ಬಳಿಯಲ್ಲಿ ಚಿರತೆಗಳ ಓಡಾಟ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ, ಅವರು ಪಟಾಕಿ ಸಿಡಿಸಿ ಓಡಿಸಿ ಎಂದು ಸಲಹೆ ನೀಡುತ್ತಾರೆ ಎಂದು ಪ್ರಕಾಶ್ ಪೂಜಾರಿ ದೂರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X