ಉಡುಪಿ | ಶಾಸಕರೇ, ಜಿಲ್ಲಾ ಸರ್ಜನರ ಅವಾಂತರ ಕಾಣಲಿಲ್ಲವೇ – ಸುಂದರ್ ಮಾಸ್ತರ್

Date:

Advertisements

ಉಡುಪಿಯ ಡಿ ಎಚ್ ಒ ಬಸವರಾಜ ಜಿ ಹುಬ್ಬಳ್ಳಿ ಅವರ ವರ್ಗಾವಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ಸನ್ಮಾನ್ಯ ಯಶಪಾಲ್ ಸುವರ್ಣ ರವರೇ ಅದೇ ಜಿಲ್ಲಾಸ್ಪತ್ರೆಯಲ್ಲಿ ಅರ್ಹತೆ ಇಲ್ಲದಿದ್ದರೂ ನಿಯಮಬಾಹಿರವಾಗಿ ಜಿಲ್ಲಾ ಸರ್ಜನ್ ಆಗಿ ಜಾಂಡಾ ಊರಿರುವ ಹೆಚ್ ಎಸ್ ಅಶೋಕ್ ಅವರ ವರ್ಗಾವಣೆಗೆ ಆಗ್ರಹಿಸಿ ಯಾಕೆ ಪತ್ರ ಬರೆದಿಲ್ಲಾ ? ಬರೀ ಡಿ ಹೆಚ್ ಒ ಅವರನ್ನು ಮಾತ್ರ ವರ್ಗಾವಣೆಗೆ ಆಗ್ರಹಿಸಿದ ಅಸಲಿಯತ್ತೇನು ? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಯಮಬಾಹಿರವಾಗಿ ಉಡುಪಿ ಜಿಲ್ಲಾ ಸರ್ಜನ್ ಹುದ್ದೆಯಲ್ಲಿರುವ ಹೆಚ್ ಎಸ್ ಅಶೋಕ್ ಅವರು ಈ ಹಿಂದೆ ಮಂಗಳೂರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ದಲಿತ ಯುವತಿಯರ ಮೇಲೆ ಲೈಂಗಿಕ ಕಿರುಕುಳ ನಡೆಸಿ, ಅದು ತನಿಖೆಯಿಂದ ಸಾಬೀತಾಗಿ ಐದು ಇಂಕ್ರಿಮೆಂಟ್ ಕಟ್ ಮಾಡಿದ್ದಾರೆ. ಉಡುಪಿಯಲ್ಲೂ ಸಹ ತಮ್ಮ ಸಹೋದ್ಯೋಗಿಗಳಿಗೆ ತೊಂದರೆಕೊಡುವ ವಿಚಾರದಲ್ಲಿ ಮೌಕಿಕ ದೂರುಗಳು ಕೇಳಿಬರುತ್ತಿವೆ, ಅದೂ ಅಲ್ಲದೇ ಹೆಚ್ ಎಸ್ ಅಶೋಕ್ ಅವರಿಗೆ ಈಗಾಗಲೇ ವರ್ಗಾವಣೆ ಆಗಿದ್ದು, ವರ್ಗಾವಣೆಗೆ ತಡೆಯಾಜ್ಞೆ ಕೋರಿ ಕೆಎಟಿ ಗೆ ಹೋಗಿದ್ದೂ ಈಗ ಅಲ್ಲೂ ಸಹ ತಡೆಯಾಜ್ಞೆ ರದ್ದಾಗಿದೆ.

ಇಷ್ಟೇಲ್ಲಾ ಅವಾಂತರಗಳಿದ್ದರೂ ತಮ್ಮ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳಿಗೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಯಾಕೆ ಹಚ್ಚುತ್ತಿದ್ದೀರಿ.ಈ ತಾರತಮ್ಯದ ಹಿಂದೆ ಜಾತೀವಾತ್ಸಲ್ಯದ ವಿಷಬೀಜ ಕಾರ್ಯಾಚರಿಸುತ್ತಿದೆಯೇ ? ಅದೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮವಹಿಸದೇ ಇರಲು ಕಾರಣವೇನು ? ಅದರಲ್ಲೂ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ತಮ್ಮ ಜಾಣ ಕುರುಡುತನ ಪ್ರದರ್ಶನ ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.

Advertisements

ಈ ಕೂಡಲೇ ಜಿಲ್ಲಾ ಸರ್ಜನ್ ಅಶೋಕ್ ಅವರನ್ನು ವರ್ಗಾವಣೆ ಮಾಡದೇ ಇದ್ದರೇ ಮುಂದೆ ಪ್ರತಿಭಟನೆಗೆ ಕರೆಕೊಡುವ ದಿನಗಳು ದೂರವಿಲ್ಲಾ ಎಂದು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X