ಕೊಪ್ಪ l ಅರಣ್ಯ ಅಧಿಕಾರಿ ಆರ್ ಎಫ್ಒ ರಂಗನಾಥ್ ಉಡಾಫೆ ಮಾತು ಆರೋಪ: ಕೆ ಎಲ್ ಅಶೋಕ್ 

Date:

Advertisements

ಕಾಡಾನೆ ದಾಳಿಯಿಂದ ವಾರದಲ್ಲಿ ಎರಡು ಸಾವಾಗಿದೆ, ಹಾಗೆಯೇ, ಅಕ್ರಮವಾಗಿ ಸಾಗುವಾನಿ ಮರ ಕಡಿದವರಿಗೆ ಏನು ಕ್ರಮ ಜರುಗಿಸಿದ್ದೀರ ಎಂದು ಪ್ರಶ್ನಿಸಿದಕ್ಕೆ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ಉಡಾಫೆ ಮಾತುಗಳನ್ನಾಡುತ್ತಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರಾದ ಕೆ ಎಲ್ ಅಶೋಕ್ ಆರೋಪಿಸಿದ್ದಾರೆ.

ಮಲೆನಾಡಿನ ಭಾಗದಲ್ಲಿ ನಿರಂತರ ಕಾಡಾನೆ ದಾಳಿಯಿಂದ  ರೈತರು ಬೆಳೆದಿರುವ ಬೆಳೆಗಳು ಹಾಗೆಯೇ, ಜನರ ಪ್ರಾಣ ಹಾನಿಯಾಗುತ್ತಿದೆ. ನಾಲ್ಕು ದಿನದ ಹಿಂದೇ ಅನಿತಾ ಎಂಬ ಕಾರ್ಮಿಕ ಮಹಿಳೆ ಮೃತ ಪಟ್ಟಿದ್ದರು, ಆದರೂ “ಸುತ್ತಮುತ್ತಲಿನ ವಾಸ ಮಾಡುತ್ತಿರುವ ಜನರಿಗೆ ಯಾವ ರಕ್ಷಣೆ ಇಲ್ಲದ ಕಾರಣ ಭಾನುವಾರ ಸಂಜೆ ಸುಬ್ಬರಾಯ ಗೌಡ ಎಂಬ ವ್ಯಕ್ತಿಯನ್ನು ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.” ಎಂದು ಈದಿನ.ಕಾಮ್ ಗೆ ಕೆ.ಎಲ್ ಅಶೋಕ್ ಮಾಹಿತಿ ತಿಳಿಸಿದ್ದಾರೆ.

ಹಾಗೆಯೇ, ಕಳೆದ ವಾರದ ಹಿಂದೇ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಾಟ ಮಾಡಿದ ಆರೋಪಿಗಳನ್ನು ಇನ್ನೂ ಬಂಧಿಸದೆ ಹಲವು ಕಾರಣಗಳನ್ನು ಕೊಟ್ಟು ಅದನ್ನು ಮುಚ್ಚಿ ಹಾಕುವ ಹೊನ್ನರ ನಡೆಯುತ್ತಿದೆ. “ಅದೇ ಬಡವ ಮಾಡಿದರೇ, ತಕ್ಷಣ ಕ್ರಮ ತೆಗೆದುಕೊಂಡು ಬಂಧಿಸುವ ಕೆಲಸ ಆಗುತ್ತಿತ್ತು” ಈ ವಿಚಾರವಾಗಿ ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ಅವರೊಂದಿಗೆ ಪ್ರಶ್ನಿಸಿದಾಗ ಉಡಾಫೆಯಿಂದ ಮಾತಾಡಿದ್ದಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡರಾದ ಕೆ.ಎಲ್ ಅಶೋಕ್ ಆರೋಪಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ದಾಳಿ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು ಬಂದ್

“ಕಾಡಾನೆ ದಾಳಿ ಆಗುತ್ತಿದೆ ನಾವು ಕೂಡ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ತಕ್ಷಣ ನಾವು ಆನೆ ಹಿಡಿಯಲು ಆಗುವುದಿಲ್ಲ ಮೇಲಾಧಿಕಾರಿಗಳಿಂದ ಪ್ರತಿಕ್ರಿಯೆ ಬರಬೇಕು ಸಕ್ರೆಬೈಲು ಕಡೆಯಿಂದ ಆನೆ ಕರೆಸಿ ಕಾನೂನು ಪ್ರಕಾರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ” ಎಂದು ಕೊಪ್ಪ ತಾಲೂಕಿನ ಆರ್ ಎಫ್ ಒ ರಂಗನಾಥ್ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

Download Eedina App Android / iOS

X