ಮಾಲೇಗಾಂವ್ ತನಿಖೆ | ವೈರುಧ್ಯಗಳತ್ತ ಬೊಟ್ಟು ಮಾಡಿತ್ತು ಸುಪ್ರೀಮ್ ಕೋರ್ಟು

Date:

Advertisements

ಮಾಲೇಗಾಂವ್ ಸ್ಫೋಟಗಳ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಮತ್ತು ಎನ್.ಐ.ಎ. 2017ರಲ್ಲಿ ಸಲ್ಲಿಸಿದ್ದ ಸಾಕ್ಷೀದಾರರ ಹೇಳಿಕೆಗಳು ಮತ್ತು ತನಿಖಾ ವರದಿಗಳಲ್ಲಿನ ವೈರುಧ್ಯಗಳತ್ತ ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಬೆರಳು ಮಾಡಿ ತೋರಿದ್ದವು.

2017ರ ಏಪ್ರಿಲ್ ನಲ್ಲಿ ಬಾಂಬೆ ಹೈಕೋರ್ಟು ಆಪಾದಿತರಲ್ಲೊಬ್ಬರಾದ ಪ್ರಗ್ಯಾಸಿಂಗ್ ಠಾಕೂರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಸಾಕ್ಷೀದಾರರು ತಮಗೆ ಚಿತ್ರಹಿಂಸೆ ನೀಡಿದ ಆಪಾದನೆಗಳಿಂದ ಹಿಂದೆ ಸರಿದಿರುವುದೇ ಅಲ್ಲದೆ, ಅವರು ನೀಡಿರುವ ಹೇಳಿಕೆಗಳು ಪರಸ್ಪರ ವ್ಯತಿರಿಕ್ತವಾಗಿವೆ ಎಂದು ಹೈಕೋರ್ಟು ಇದೇ ಸಂದರ್ಭದಲ್ಲಿ ಹೇಳಿದ್ದುಂಟು.

ಮತ್ತೊಬ್ಬ ಆಪಾದಿತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರಿಗೆ ಸುಪ್ರೀಮ್ ಕೋರ್ಟು 2017ರ ಆಗಸ್ಟ್ ನಲ್ಲಿ ಜಾಮೀನು ಮಂಜೂರು ಮಾಡಿತ್ತು. ಎ.ಟಿ.ಎಸ್. ಮತ್ತು ಎನ್.ಐ.ಎ ಅನುಕ್ರಮವಾಗಿ ಸಲ್ಲಿಸಿದ್ದ ಆಪಾದನಾಪಟ್ಟಿ ಮತ್ತು ಪೂರಕ ಆಪಾದನಾಪಟ್ಟಿಯಲ್ಲಿ ವೈರುಧ್ಯಗಳಿವೆ. ಇವುಗಳನ್ನು ವಿಚಾರಣೆಯ ಸಂದರ್ಭದಲ್ಲಿ ಪರೀಕ್ಷಿಸಬಹುದು ಎಂದು ಸೂಚಿಸಿತ್ತು.

Advertisements

2008ರ ಮಾಲೇಗಾಂವ್ ಸ್ಫೋಟಕ್ಕೆ ಮುನ್ನ ನಡೆದ ಸಭೆಗಳಿಗೆ ತಾವು ಸೇನೆಯ ವತಿಯಿಂದ ಗೂಢಚಾರಿಕೆ ಮಾಡಲು ಹಾಜರಾದದ್ದಾಗಿ ಪುರೋಹಿತ್ 2021ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಮುಂದೆ ನಿವೇದಿಸಿಕೊಂಡಿದ್ದರು. ಅಭಿನವ್ ಭಾರತ್ ಎಂಬ ಬಲಪಂಥೀಯ ಸಂಘಟನೆಯ ಕುರಿತು ಗೋಪ್ಯ ಮಾಹಿತಿ ಸಂಗ್ರಹಿಸಲು ಸೇನೆಯೇ ತಮ್ಮನ್ನು ನಿಯುಕ್ತಿ ಮಾಡಿದ್ದಾಗಿಯೂ, ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಿದ್ದಾಗಿಯೂ ಅವರು ಹೇಳಿಕೊಂಡಿದ್ದರು.

ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂಬ ಪುರೋಹಿತ್ ಮನವಿಯನ್ನು ಹೈಕೋರ್ಟು 2023ರಲ್ಲಿ ವಜಾ ಮಾಡಿತ್ತು. ಪುರೋಹಿತ್ ಅವರು ಹೇಳಿರುವ ಸಂಗತಿಗಳನ್ನು ಒಪ್ಪಿದರೂ ಪ್ರಶ್ನೆಯೊಂದು ಉಳಿದೇ ಉಳಿಯುತ್ತದೆ. ಅದೆಂದರೆ, “ಆರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು, ನೂರು ಮಂದಿಗೆ ಗಂಭೀರ ಗಾಯಗಳನ್ನು ಉಂಟು ಮಾಡಿದ ಬಾಂಬ್ ಸ್ಫೋಟವನ್ನು ಪುರೋಹಿತ್ ಯಾಕೆ ನಿಲ್ಲಿಸಲಿಲ್ಲ?”

ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಪುರೋಹಿತ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಮ್ ಕೋರ್ಟು 2023ರಲ್ಲೇ ವಜಾ ಮಾಡಿತ್ತು.

ಮಾಲೇಗಾಂವ್ ಸ್ಫೋಟದ ವಿಚಾರಣೆಯ ಉಸ್ತುವಾರಿ ನಡೆಸಿದ್ದ ಬಾಂಬೆ ಹೈಕೋರ್ಟು, ಎನ್.ಐ.ಎ. ಪ್ರತಿ ‘ಹಿಯರಿಂಗ್’ ಗೆ ಒಬ್ಬೊಬ್ಬರೇ ಸಾಕ್ಷೀದಾರರನ್ನು ಕರೆದು ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುತ್ತಿರುವ ಕುರಿತು ಕಾಳಜಿ ಪ್ರಕಟಿಸಿತ್ತು. ಪ್ರತಿ ಹಿಯರಿಂಗ್ ಗೆ ಒಂದಕ್ಕಿಂತ ಹೆಚ್ಚು ಮಂದಿ ಸಾಕ್ಷೀದಾರರನ್ನು ಕರೆದು ವಿಚಾರಣೆ ನಡೆಸಬೇಕೆಂದು ವಿಶೇಷ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X