ಚಿಕ್ಕಮಗಳೂರು l ನಗರ ವ್ಯಾಪ್ತಿಯಲ್ಲೇ ಮೂಲಭೂತ ಸೌಕರ್ಯ ಕೊರತೆ; ಮಲತಾಯಿ ಧೋರಣೆ ಎಂದ ಉಪ್ಪಳ್ಳಿಯ 17ನೇ ವಾರ್ಡ್ ನಿವಾಸಿಗಳು

Date:

Advertisements

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದೆಷ್ಟೋ ಪ್ರವಾಸಿತಾಣಗಳು ಇವೆ. ಅದನ್ನ ನೋಡಲು ಎಲ್ಲೆಲ್ಲಿಂದಲೂ ಪ್ರವಾಸಿಗರು ಬರುತ್ತಾರೆ. ನೋಡಲು ಎಷ್ಟು ಚಂದ ಅಷ್ಟೇ ಮೂಲಭೂತ ಸೌಕರ್ಯವಿಲ್ಲದೆ ಜನರು ವಂಚಿತರಗಿದ್ದಾರೆ. ಅದೇ ರೀತಿಯಲ್ಲಿ ಚಿಕ್ಕಮಗಳೂರು ನಗರದ ಹೃದಯಭಾಗ ಎಂದು ಕರೆಯುವ ಉಪ್ಪಳ್ಳಿ, ಈ ಉಪ್ಪಳ್ಳಿ ಭಾಗದ ವಾರ್ಡ್ ನಂಬರ್ 17ರಲ್ಲಿ ಸುಮಾರು 1700ಕ್ಕಿಂತ ಹೆಚ್ಚು ಮತದಾನ ಮಾಡುವ ಮತದಾರರು ಇದ್ದಾರೆ. ಆದರೇ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಇಲ್ಲಿ ವಾಸ ಮಾಡುತ್ತಿರುವವರು ಮುಸ್ಲಿಂ ಸಮುದಾಯ ಹಾಗೆಯೇ, ಉಳಿದ ಸಮುದಾಯದವರಿದ್ದಾರೆ. ಇಲ್ಲಿವರೆಗೂ ಡಾಂಬರ್ ಕಾಣದೆ ರಸ್ತೆ, ದಾರಿ ದೀಪ, ಹೇಳೋಕೆ ಮಾತ್ರ ನೀರಿನ ವ್ಯವಸ್ಥೆ ಎಂದು ಹೇಳುತ್ತಾರೆ. ಆದರೇ, ಈ ವ್ಯಾಪ್ತಿಗೆ ನೀರು ಪೂರೈಕೆ ಇಲ್ಲ ಹಾಗೆಯೇ, ಚರಂಡಿ ಅನ್ನೋದೇ ಕಂಡಿಲ್ಲವಾಗಿದೆ.

Screenshot 2025 08 01 19 06 28 81 99c04817c0de5652397fc8b56c3b3817
ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ

ವಾರ್ಡ್ ನಂಬರ್ 17ರಲ್ಲಿ ಡಾಂಬರ್ ಇಲ್ಲದೆ ರಸ್ತೆಯಲ್ಲ ಗೊಚ್ಚೆ ಆಗಿದೆ. ಇಲ್ಲಿಯವರೆಗೂ ನಮ್ಮ ವ್ಯಾಪ್ತಿಯಲ್ಲಿ ಇಲ್ಲಿವರೆಗೂ ಮೂಲಭೂತ ಸೌಕರ್ಯದಿಂದ ಇಲ್ಲಿ ವಾಸಿಸುತ್ತಿರುವ ಜನರು ವಂಚಿತರಗಿದ್ದಾರೆ. ಬೆಳಗ್ಗೆ ಕೆಲಸಕ್ಕೆ ಹೋಗಬೇಕಾದರೂ ಇದೇ ಮಾರ್ಗದಲ್ಲಿ ಹೋಗಬೇಕು. ಈ ರಸ್ತೆಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ, ಬದಲಿ ರಸ್ತೆ ಕೂಡ ಇಲ್ಲ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿ ರಝಕ್ ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

Screenshot 2025 08 01 19 03 30 11 99c04817c0de5652397fc8b56c3b3817
ಉಪ್ಪಳ್ಳಿ 17ನೇ ವಾರ್ಡ್ ನಿವಾಸಿ ರಝಕ್

ಸಣ್ಣ ಪುಟ್ಟ ಮಕ್ಕಳು ಶಾಲೆಗೆ ಹೋಗಬೇಕು, ಅದರಲ್ಲೂ ಸರಿಯಾದ ಸಮಯಕ್ಕೆ ಹೋಗಬೇಕಾಗಿರೋದ್ರಿಂದ ಶಾಲಾ ಬಸ್ ಬರುವುದಿಲ್ಲ. ಹಾಗೆಯೇ, ಆಟೋದವರಿಗೆ ತಿಳಿಸಿದರು ಕೂಡ ” ಈ ರಸ್ತೆಯಲ್ಲಿ ಬಂದರೆ ಬಾಡಿಗೆ ಹಣಕ್ಕಿಂತ ಗಾಡಿಯ ರಿಪೇರಿಗೆ ಖರ್ಚು ಜಾಸ್ತಿ ಬರಲು ಆಗೋಲ್ಲ ಎಂದು ಹೇಳುತ್ತಾರೆ. ” ಒಂದು ಬಾಡಿಗೆ 300ರೂಪಾಯಿ ಕೇಳುತ್ತಾರೆ, ಹಣ ಕೊಟ್ಟರು ಬಾರದ ಆಟೋದವರು, ನಮ್ಮ ಪರಿಸ್ಥಿತಿ ಯಾರು ಕೇಳುತ್ತಾರೆ ಎಂದು ಮೌಸೀನ ಈದಿನ.ಕಾಮ್ ಜೊತೆ ಮಾತಾಡಿದರು.

Advertisements
Screenshot 2025 08 01 19 05 44 27 99c04817c0de5652397fc8b56c3b3817
17ನೇ ವಾರ್ಡ್ ಸ್ಥಳೀಯ ನಿವಾಸಿಗಳು

ಕತ್ತಲೆಯ ವೇಳೆ ಈ ರಸ್ತೆಯಲ್ಲಿ ಬರಲು ಸಾಧ್ಯವಿಲ್ಲ, ನಮ್ಮ ಭಾಗಕ್ಕೆ ವಿದ್ಯುತ್ ಕಂಬವಿದ್ದರೂ ಬೀದಿ ದೀಪ ಅನ್ನೋದೇ ಇಲ್ಲದಾಗಿದೆ. ಅದರಲ್ಲೂ ಗುಂಡಿಗಳಿಂದ ರಸ್ತೆ ಕೂಡಿದ್ದು, ಪಕ್ಕದಲ್ಲಿರುವ ಸಣ್ಣ ಸಣ್ಣ ಗುಂಡಿಗಳು ಇವೆ. ಇದರಿಂದ ಅದೆಷ್ಟೋ ಜನರು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಚರಂಡಿ ಇಲ್ಲದೆ ನೀರು ಮನೆಯೊಳಗೇ ನುಗ್ಗುತ್ತಿದೆ. ವಯಸ್ಸಾದ ವೃದ್ಧರನ್ನು ಅನಾರೋಗ್ಯ ಪೀಡಿತರಾದರೆ ಕರೆದುಕೊಂಡು ಹೋಗುವುದಕ್ಕೂ ಬಹಳ ಕಷ್ಟವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಉಳಿದ ಸಮಯದಲ್ಲಿ ಯಾರೆಂದು ಕೇಳಲು ಸಹ ಬರುವುದಿಲ್ಲ ಎಂದು ಉಪ್ಪಳ್ಳಿ ಭಾಗದ ವಾರ್ಡ್ 17ರ ಸ್ಥಳೀಯ ನಿವಾಸಿಗಳು ಈದಿನ. ಕಾಮ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Screenshot 2025 08 01 19 04 41 39 99c04817c0de5652397fc8b56c3b3817
ಚರಂಡಿ, ರಸ್ತೆ ಯಾವುದೊ ಎಂದು ತಿಳಿಯದೆ ಓಡಾಡುತ್ತಿರುವ ನಿವಾಸಿಗಳು

ನಾವು ಸರ್ಕಾರಕ್ಕೆ ಸುಂಕ ಕಟ್ಟಿದ್ದರು ಬಾರದ ಕಸದ ಗಾಡಿ ಇಲ್ಲಿ ವಿದ್ಯುತ್ ಕಂಬ ಹಾಕಿಸಲು ಪ್ರತಿಯೊಬ್ಬರು ಹಣ ಕಟ್ಟಿದ್ದೇವೆ. ಈ ಕುರಿತು ನಗರ ಸಭೆ ಸದಸ್ಯರಾದ ‘ಮುನೀರ್ ಅಹಮದ್ ಕಲ್ಲುದೊಡ್ಡಿ‘ ಅವರ ಬಳಿ ಕೇಳಿದರೆ ” ಕೆರೆಯ ಭಾಗದಲ್ಲಿರುವುದರಿಂದ ಏನು ಮಾಡಲು ಆಗೋಲ್ಲ ಹಣ ಬಿಡುಗಡೆ ಆಗಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ.” ನಾವು ಮನೆ ಕಟ್ಟಿರುವುದು ಸರ್ಕಾರಕ್ಕೆ ಹಣ ಕೊಟ್ಟು, ಸರ್ಕಾರದಿಂದ ಕಟ್ಟಿಕೊಳ್ಳೋಕೆ ಒಪ್ಪಿಗೆ ಕೊಟ್ಟು ಈಗ ಅಭಿವೃದ್ಧಿ ಆಗೋಲ್ಲ ಅಂದ್ರೆ ಅದೆಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Screenshot 2025 08 01 19 06 47 27 99c04817c0de5652397fc8b56c3b3817
ರಸ್ತೆಯಿಂದ ಗಾಡಿ ಹದಗೆಟ್ಟು ನಿಂತಿದೆ ಸವಾರ ಗಾಡಿ ಚಲಾಯಿಸಲು ಪ್ರಯತ್ನಿಸುತ್ತಿರುವ ದೃಶ್ಯ

ಚಿಕ್ಕಮಗಳೂರು ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ. ಆದರೇ, “ಚಿಕ್ಕಮಗಳೂರು ನಗರವನ್ನು ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಒಂದು ಭಾಗದಲ್ಲಿ ಕೋರ್ಟ್, ಆಸ್ಪತ್ರೆ, ಶಾಲಾ, ಹೈಟೆಕ್ ಕಾಲೇಜು, ಮೆಡಿಕಲ್ ಕಾಲೇಜು, ಜಿಲ್ಲಾ ಕಚೇರಿಗಳು ಹಾಗೂ ಇನ್ನಿತರ ಕಚೇರಿಗಳಿರುವ ಜಾಗದಲ್ಲಿ ಮಾತ್ರ ಅಭಿವೃದ್ಧಿ ಪಡಿಸಿದ್ದಾರೆ. ಇನ್ನ ಚಿಕ್ಕಮಗಳೂರಿನ ಅರ್ಧ ಭಾಗ ಅಭಿವೃದ್ಧಿ ನಶಿಸಿದೆ”.  “ಎಲ್ಲಿ ಮೂಲಭೂತ ಸೌಕರ್ಯದಿಂದ ಜನರು ವಂಚಿತರಗಿದ್ದಾರೆ. ಆ ಭಾಗಕ್ಕೆ ಅಭಿವೃದ್ಧಿಯನ್ನು ಮಾಡಬೇಕಿದೆ. ಮತ ಹಾಕಿಸಿಕೊಳ್ಳಲು ಮಾತ್ರ ಚುನಾವಣೆ ಸಮಯದಲ್ಲಿ ಬರುತ್ತಾರೆ ಬಿಟ್ಟರೇ, ಇಲ್ಲಿ ಸತ್ತಿದಾರೋ ಬದುಕಿದರೋ ಎಂದು ಯಾರು ಬರಲ್ಲ”. ಈಗ ಆಡಳಿತ ಮಾಡುತ್ತಿರುವ ಸರ್ಕಾರದಿಂದ ಅಭಿವೃದ್ಧಿಗೆ ಬಂದಂತಹ ಕೋಟ್ಯಂತರ ಹಣ ಬಿಡುಗಡೆ ಆದರೂ ಅಧಿಕಾರಿಗಳು ಹಾಗೂ ಶಾಸಕರು ಅಭಿವೃದ್ದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ನಿವಾಸಿ ಗೌಸ್ ಮುನೀರ್ ಈದಿನ.ಕಾಮ್ ಗೆ ತಿಳಿಸಿದ್ದಾರೆ.

Screenshot 2025 08 01 19 03 00 82 99c04817c0de5652397fc8b56c3b3817
ಉಪ್ಪಳ್ಳಿ ನಿವಾಸಿ ಗೌಸ್ ಮುನೀರ್ ಸಮಸ್ಯೆ ಬಗ್ಗೆ ವಿವರಿಸುತ್ತಿರುವ ದೃಶ್ಯ

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕರು ಉಪ್ಪಳ್ಳಿ ಭಾಗದ ವಾರ್ಡ್ 17ರಲ್ಲಿ ಅಭಿವೃದ್ಧಿ ಪಡಿಸುವರೇ ಕಾದು ನೋಡಬೇಕಿದೆ.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X